ಬಿಬಿಎಂಪಿ(ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆ ಇನ್ನೂ ಕಗ್ಗಂಟು

ಬಿಬಿಎಂಪಿ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿ 4 ದಿನ ಕಳೆದರೂ ಗೊಂದಲಗಳು ಮುಂದುವರಿದಿರುವುದರಿಂದ ಚುನಾವಣೆ ನಡೆಯುವ ಯಾವುದೇ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿಲ್ಲ.

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿ 4 ದಿನ ಕಳೆದರೂ ಹಲವು ಅನುಮಾನ ಹಾಗೂ ಗೊಂದಲಗಳು ಮುಂದುವರಿದಿರುವುದರಿಂದ ಚುನಾವಣೆ ನಡೆಯುವ ಯಾವುದೇ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿಲ್ಲ.

ಈ ಮಧ್ಯೆ ವಿಧಾನಪರಿಷತ್ ಪರಿಶೀಲನಾ ಸಮಿತಿ ಬಿಬಿಎಂಪಿ ವಿಭಜನೆ ಕುರಿತ ವರದಿಯನ್ನು ಇಂದು ಮಂಡಿಸಲಿದ್ದು ಇದನ್ನು ಲೆಕ್ಕಿಸದೇ ಸರ್ಕಾರ ಬಿಬಿಎಂಪಿ ವಿಭಜಿಸುವ ವಿಧೇಯಕ ಪಾಸು ಮಾಡಿಕೊಳ್ಳುವುದೇ ಎನ್ನುವ ಕುತೂಹಲ ಮೂಡಿಸಿದೆ. ಇದರೊಂದಿಗೆ ಬಿಬಿಎಂಪಿ ಚುನಾವಣೆ ಇನ್ನಷ್ಟು ಗೊಂದಲಕ್ಕೆ ತಿರುಗುತ್ತಿದೆ.

ನಿರೀಕ್ಷೆಯಂತೆ ಪರಿಶೀಲನಾ ಸಮಿತಿ ಬಿಬಿಎಂಪಿ ವಿಭಜನೆ ಬೇಡವೆಂದು ವರದಿ ನೀಡುವ ಸಾಧ್ಯತೆ ಹೆಚ್ಚಿದ್ದು ಇದರಿಂದಾಗಿ ಸದನದಲ್ಲಿ ವಿಭಜನೆ ವಿಧೇಯಕ ಸೋಲು ಕಾಣಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯಾವ ನಡೆ ಅನುಸರಿಸುತ್ತದೆ ಎನ್ನುವುದು ಗುಪ್ತವಾಗಿದೆ.

ಬಿಬಿಎಂಪಿ ಚುನಾವಣೆ ಮುಂದೂಡುವ ತನ್ನ ಪ್ರಯನ್ತವನ್ನು ಸರ್ಕಾರ ಮುಂದುವರೆಸಿದ್ದು ಈಗಾಗಲೇ ಸಲ್ಲಿಕೆಯಾಗಿರುವ ಚುನಾವಣಾ ಮುಂದೂಡಿಕೆ ಸಂಬಂಧದ ಅರ್ಜಿ ವಿಚಾರಣೆಗೆ ಬರಲಿದೆ. ಚುನಾವಣೆ ಮುಂದೂಡಿಕೆ 8 ವಾರ ಕಾಲಾವಕಾಶ ನೀಡಿದ್ದ ಸುಪ್ರೀಂ ಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಬಯಸಿರುವ ಸರ್ಕಾರ ಯಾವ ದಿನದಿಂದ 8 ವಾರಗಳ ಅವಕಾಶ ನೀಡಲಾಗಿದೆ ಎಂದು ಕೇಳಿದೆ. ಈ ವಿಚಾರ ಸುಪ್ರೀಂ ನಲ್ಲಿ ವಿಚಾರಣೆಗೆ ಬಂದಿದ್ದರೂ ಸರ್ಕಾರಕ್ಕೆ ಇನ್ನೂ ಸ್ಪಷ್ಟೀಕರಣ ದೊರೆತಿಲ್ಲ.

3 ತಿಂಗಳ ಹಿಂದೆ ಸರ್ಕಾರ ಬಿಬಿಎಂಪಿ ವಿಭಜನೆ ವಿಧೇಯಕವನ್ನು ಪರಿಷತ್ ನಲ್ಲಿ ಮಂಡಿಸಿದಾಗ ಅದಕ್ಕೆ ಪ್ರತಿಪಕ್ಷಗಳು ಸಹಮತ ನೀಡದ ಕಾರಣ ಆಯ್ಕೆ ಸಮಿತಿ ರಚನೆಯಾಗಿತ್ತು. ಸಮಿತಿ ಸಲ್ಲಿಸಿದ ವರದಿಯಲ್ಲಿ ಪ್ರತಿಪಕ್ಷದ 7 ಸದಸಯ್ರು ಬಿಬಿಎಂಪಿ ವಿಭಜನೆ ವಿರೋಧಿಸಿ ಟಿಪ್ಪಣಿ ಸಲ್ಲಿಸಿದ್ದಾರೆ. ಸಮಿತಿಯಲ್ಲಿ ವಿಭಜನೆ ಬೇಡ ಎನ್ನುವ ಸದಸ್ಯರೇ ಹೆಚ್ಚಿರುವ ಕಾರಣ ವಿಧೇಯಕಕ್ಕೆ ಸದನದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕರ್ನಾಟಕದ ಗ್ಯಾರಂಟಿ ಮಾದರಿ' ಗುರುತಿಸಿ, ಹೆಚ್ಚಿನ ಆರ್ಥಿಕ ಬೆಂಬಲ ನೀಡಿ: ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ

ICC ಮಹಿಳಾ ವಿಶ್ವಕಪ್ ಚಾಂಪಿಯನ್ಸ್: ಭಾರತ ತಂಡಕ್ಕೆ 'ಬಂಪರ್' ಬಹುಮಾನ ಘೋಷಿಸಿದ ಟಾಟಾ ಮೋಟಾರ್ಸ್!

'ಕೊಟ್ಟ ಮಾತು ಉಳಿಸಿಕೊಳ್ಳಿ': ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಗೆ ಜೆಮಿಮಾ ಆಗ್ರಹ! Video

EAM ಜೈಶಂಕರ್ ಮುಂದಿನ ವಾರ ಕೆನಡಾಕ್ಕೆ ಭೇಟಿ: ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒತ್ತು!

ಚುನಾವಣಾ ಆಯೋಗ ಕೇಂದ್ರದ ಜತೆ ಸೇರಿ ಪ್ರಜಾಪ್ರಭುತ್ವದ 'ಕತ್ತು ಹಿಸುಕುತ್ತಿದೆ': ಸಿದ್ದರಾಮಯ್ಯ

SCROLL FOR NEXT