ತೆರವು ಕಾರ್ಯಾಚರಣೆ(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಜಿಲ್ಲಾಡಳಿತದಿಂದ ರೂ. 827 ಕೋಟಿಯ ಭೂಮಿ ವಶ

ಒತ್ತುವರಿ ತೆರವು ಕಾರ್ಯ ಮುಂದುವರೆಸಿರುವ ಜಿಲ್ಲಾಡಳಿತ ರೂ.827 ಕೋಟಿ ಮೌಲ್ಯದ 46 . 34 ಎಕರೆ ಭೂಮಿ ವಶಪಡಿಸಿಕೊಂಡಿದೆ.

ಬೆಂಗಳೂರು: ಒತ್ತುವರಿ ತೆರವು ಕಾರ್ಯ ಮುಂದುವರೆಸಿರುವ ಬೆಂಗಳೂರು  ಜಿಲ್ಲಾಡಳಿತ ರೂ.827 ಕೋಟಿ ಮೌಲ್ಯದ 46 . 34  ಎಕರೆ ಭೂಮಿ ವಶಪಡಿಸಿಕೊಂಡಿದೆ.

ದಕ್ಷಿಣ  ತಾಲೂಕು ಉತ್ತರಹಳ್ಳಿಯ ಹೊಸಕೆರೆಹಳ್ಳಿಯ ಸ.ನಂ.22 ರಲ್ಲಿ ರಿಂಗ್ ರಸ್ತೆ ಸೇರಿದಂತೆ 15 . 27 ಎಕರೆ ಒತ್ತುವರಿ ಭೂಮಿಯನ್ನು ತಹಶೀಲ್ದಾರ್ ಡಾ.ಬಿ.ಆರ್ ದಯಾನಂದ್  ನೇತೃಉವ್ತದ ತಂಡ ವಶಪಡಿಸಿಕೊಂಡಿದೆ. ಈ ಜಾಗ ಅಂದಾಜು ರೂ 800 ಕೋಟಿ ಮೌಲ್ಯ ಹೊಂದಿದೆ.

ಜಾಗದ ನಡುವೆ ರಿಂಗ್ ರಸ್ತೆ ಹಾಡು ಹೋಗಿದ್ದು ಜನನಿಬಿಡ ಪ್ರದೇಶವಾದ ಕಾರಣ ರಸ್ತೆಯ ಎರಡೂ ಬದಿಯಲ್ಲಿ ಶೆಡ್ ನಿರ್ಮಿಸಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿತ್ತು. ರಾಜಧಾನಿ ವೈನ್ಸ್, ಸಿಮೆಂಟ್ ಮಾರಾಟ ಮಳಿಗೆ, ಮರದ ಪೀಠೋಪಕರಣ ಶೋರೂಂ, ಗ್ರೀನ್ ಲ್ಯಾಂಡ್ ರೆಸ್ಟೋರೆಂಟ್, ಸೌದೆ ಮಂಡಿ, ರೈನ್ಬೋ ಕಾರ್ ಡೆಕೊರೇಟರ್ಸ್ ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಮಳಿಗೆಗಳು ತಾವಾಗಿಯೇ ತೆರವುಗೊಳ್ಳದಿದ್ದರೆ ಬುಧವಾರದಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಉಪವಿಭಾಗಾಧಿಕಾರಿ ಎಲ್.ಸಿ ನಾಗರಾಜು, ಜಾಗದ ನಡುವೆ ವರ್ತುಲ ರಸ್ತೆ ಹಾಡು ಹೋಗಿದ್ದು ಬಹುಕೋಟಿ ಬೆಲೆ ಬಾಳುತ್ತದೆ. ಕೆಲವು ಬಾಡಿಗೆ ಮಳಿಗೆಗಳಾಗಿದ್ದು ಸ್ಥಳೀಯ ಸಂಸ್ಥೆಗಳಿಂದ ನಕಲಿ ದಾಖಲೆ ಮೇಲೆ ಖಾತಾ ಮಾಡಿಸಿಕೊಳ್ಳಲಾಗಿದೆ. ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿ ಲಕ್ಷಾಂತರ ರೂ ಬಾಡಿಗೆ ಪಡೆಯಲಾಗುತ್ತಿದೆ. ಇಲ್ಲಿ ನೂತನವಾಗಿ ನಿರ್ಮಾಣವಾದ 14 ಅಂತಸ್ತಿನ ಮೂರು ವಸತಿ ಸಂಕೀರ್ಣದಲ್ಲಿ ಯಾರೂ ವಾಸವಿಲ್ಲ. ಈ ಕಟ್ಟಡವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT