ಸಂಗ್ರಹ ಚಿತ್ರ 
ಜಿಲ್ಲಾ ಸುದ್ದಿ

ಕೋಟ್ಯಾಂತರ ಬೆಲೆಯ ಜಲಮಂಡಳಿ ಆಸ್ತಿ ಕಬಳಿಕೆಗೆ ಯತ್ನ

ಕೋಟ್ಯಾಂತರ ಬೆಲೆ ಬಾಳುವ ಜಲಮಂಡಲಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸುತ್ತಿದ್ದರೂ, ತನ್ನ ಆಸ್ತಿಯನ್ನು ಉಳಿಸಿಕೊಳ್ಳಲು ಜಲಮಂಡಲಿ...

ಬೆಂಗಳೂರು: ಕೋಟ್ಯಾಂತರ ಬೆಲೆ ಬಾಳುವ ಜಲಮಂಡಲಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸುತ್ತಿದ್ದರೂ, ತನ್ನ ಆಸ್ತಿಯನ್ನು ಉಳಿಸಿಕೊಳ್ಳಲು ಜಲಮಂಡಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಲೋಕಸತ್ತಾ ಪಕ್ಷ ಆರೋಪಿಸಿದೆ.

ನಗರದ ಕುಮಾರಪಾರ್ಕ್ ಪಶ್ಚಿಮದಲ್ಲಿರುವ ಕೋಟ್ಯಾಂತರ ಬೆಲೆ ಬಾಳುವ ಜಲಮಂಡಲಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸುಲು ಯತ್ನಿಸುತ್ತಿದ್ದಾರೆ. ಇದನ್ನು ಜಲಮಂಡಲಿ ಗಮನಕ್ಕೆ ತರಲಾಗಿದ್ದರೂ, ಮಂಡಲಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಪಕ್ಷದ ಮುಖಂಡ ದೀಪಕ್ ಆಪಾದಿಸಿದ್ದಾರೆ.

ಕುಮಾರಪಾರ್ಕ್ ಪಶ್ಚಿಮ ರೈಲ್ವೆ ಸಮಾನಾಂತರ ರಸ್ತೆಯ ನಿವೇಶನ ಸಂಖ್ಯೆ 120 ಮತ್ತು 130ರ ನಡುವೆ ಇರುವ ಜಲಮಂಡಳಿಯ ನೀರಿನ ಕೊಳವೆ ಹಾದು ಹೋಗಿವೆ. ಇಲ್ಲಿ ಸುಮಾರು 1200 ಚದರ ಅಡಿ ಭೂಮಿಯನ್ನು ವಸಂತಿ ರಾಜಶೇಖರನ್ ಎಂಬುವರು ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರಿ ಮೌಲ್ಯದಲ್ಲಿ ಇದು ಅಂದಾಜು 2 ಕೋಟಿ ಬೆಲೆ ಬಾಳುವ ಆಸ್ತಿಯಾಗಿದೆ.

ಈಗಲೂ ಈ ಜಾಗದಲ್ಲಿ ನೀರಿನ ಕೊಳವೆ 6 ಅಡಿ ಆಳದಲ್ಲಿದೆ. ಇದಕ್ಕೆ ಪೂರಕವಾದ ದಾಖಲೆಗಳಿದ್ದರೂ ಇದನ್ನು ವಶಕ್ಕೆ ಪಡೆದುಕೊಳ್ಳಲು ಜಲಮಂಡಲಿ ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಸತೇನ್ ಪಟೇಲ್ ಹೇಳಿದ್ದಾರೆ.

1956ರಲ್ಲಿ ಮಾರಾಟವಾದ ನಿವೇಶನಕ್ಕೆ 2011ರಲ್ಲಿ ಬಿಡಿಎ ಕ್ರಯಪತ್ರ ಮಾಡಿಕೊಟ್ಟಿದೆ. 1956ರಲ್ಲಿ 70x120 ಅಡಿ ಅಳತೆಯ ನಿವೇಶನವನ್ನು ಮಾತ್ರ ಮಂಜೂರು ಮಾಡಿ ಉಳಿದ ಜಾಗವನ್ನು ನೀರಿನ ಕೊಳವೆ ಹಾದು ಹೋಗಲು ಮೀಸಲಿಡಲಾಗಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವೂ ಕೂಡ ಜಲಮಂಡಲಿ ಪರವಾಗಿ ತೀರ್ಪು ನೀಡಿತ್ತು. ಆದರೆ, ಜಲಮಂಡಳಿ ಮಾತ್ರ ತನ್ನ ಆಸ್ತಿಯನ್ನು ಹಿಂಪಡೆಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT