ಪ್ರಭಾವಿ ಒತ್ತುವರಿದಾರರ ಪಟ್ಟಿ ಬಿಡುಗಡೆ ಮಾಡಿದ ಲೋಕಸತ್ತಾ ಪಕ್ಷದ ಮುಖಂಡರು 
ಜಿಲ್ಲಾ ಸುದ್ದಿ

ಪ್ರಭಾವಿ ಭೂ ಒತ್ತುವರಿದಾರರ ಪಟ್ಟಿ ಬಿಡುಗಡೆ ಮಾಡಿದ ಲೋಕಸತ್ತಾ ಪಕ್ಷ

ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಪ್ರಬಾವಿ ವ್ಯಕ್ತಿಗಳ ಪಟ್ಟಿಯನ್ನು ಲೋಕಸತ್ತಾ ಪಕ್ಷ ಮಂಗಳವಾರ ಬಿಡುಗಡೆ ಮಾಡಿದೆ.

ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಪ್ರಬಾವಿ ವ್ಯಕ್ತಿಗಳ ಪಟ್ಟಿಯನ್ನು ಲೋಕಸತ್ತಾ ಪಕ್ಷ ಮಂಗಳವಾರ ಬಿಡುಗಡೆ ಮಾಡಿದೆ.

ಪ್ರೆಸ್ ಕ್ಲಬ್ ನಲ್ಲಿ ಭೂ ಒತ್ತುವರಿದಾರರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಲೋಕಸತ್ತಾ ಪಕ್ಷದ ರಾಜ್ಯಧ್ಯಕ್ಷ ಮುಕುಂದ, ಬೆಂಗಲೂರಿನಲ್ಲಿ ಒಟ್ಟು 927 ಎಕರೆ 2 ಗುಂಟೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಪ್ರಭಾವಿ ವ್ಯಕ್ತಿಗಳಿಂದ ಈ ಒತ್ತುವರಿಯಾಗಿದ್ದು, ಈ ಮಾಹಿತಿ ಸರ್ಕಾರದಲ್ಲಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ರಾಜರಾಜೇಶ್ವರಿ ನಗರದಲ್ಲಿರುವ ಶಕ್ತಿ ರೆಸಾರ್ಟ್ ಕ್ಲಬ್- 2 ಎಕರೆ, ಜರಗನಹಳ್ಳಿ ನಗರಸಭೆ ಸದಸ್ಯ ರಾಮಣ್ಣ-37 ಗುಂಟೆ, ಕಾಂಗ್ರೆಸ್ ಮುಖಂಡ ಶಾಂತರಾಜು ಅವರು ಉತ್ತರಬಳ್ಳಿ ಸಮೀಪದಲ್ಲಿ 1 ಎಕರೆ 10 ಗುಂಟೆ, ಕಟ್ಟಾ ಸುಬ್ರಮಣ್ಯ ಮಗ ಜಗದೀಶ್ ನಾಯ್ಡು -4 ಎಕರೆ, ಕೆಂಗೇರಿ ಕಂಬೀಪುರದ ಬಳಿ ಇರುವ ಆದಿಚುಂಚನಗಿರಿ ಸಂಸ್ಥೆಯಿಂದ 5 ಎಕರೆ 20 ಗುಂಟೆ, ಕೊಡಿಗೇಹಳ್ಳಿ ಸಮೀಪದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಾಮನ ಚಾರ್ಯ ಅವರಿಂದ 5 ಎಕರೆ... ಸೇರಿದಂತೆ ಅನೇಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆಗೊಳಿಸಿದೆ.

ಸರ್ಕಾರ ಕೂಡಲೇ ಈ ಒತ್ತುವರಿದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಮುಕುಂದ ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ; G RAM G ಕಾಯ್ದೆ ಅನುಷ್ಠಾನಗೊಳಿಸದಂತೆ ಆಗ್ರಹ

ನಮ್ಮದು 4ನೇ ಅತಿದೊಡ್ಡ ಆರ್ಥಿಕತೆ ಎಂದು ಭಾರತ ಹೇಳಿಕೊಳ್ಳುತ್ತಿದೆ; ಆದರೆ ತಲಾವಾರು ಜಿಡಿಪಿ 12 ಪಟ್ಟು ಕಡಿಮೆ!

'ಕೋಗಿಲು ವಿವಾದ' ಈಗ ಅಂತಾರಾಷ್ಟ್ರೀಯ ವಿಚಾರ: ಪಾಕ್ ಕ್ಯಾತೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಕಿಡಿ, ಸಚಿವ ಜಮೀರ್ ಹೇಳಿದ್ದು ಏನು?

ಸೊಂಟದಲ್ಲಿದ್ದ ಗನ್, ಗುಂಡು ಸಿಡಿದು NRI ಸಾವು; Video Viral

ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಬಿಗ್​​ ರಿಲೀಫ್​: ED ಪ್ರಕರಣದಲ್ಲಿ ಜಾಮೀನು ಮಂಜೂರು

SCROLL FOR NEXT