ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಸ್ಲಂ ಬೋರ್ಡ್ ಕ್ರಮದಿಂದ 27 ಕುಟುಂಬಗಳು ನಿರಾಶ್ರಿತ

ಕೇಂದ್ರ ಸರ್ಕಾರದ ಜೆ-ನರ್ಮ್ ಯೋಜನೆಯಡಿ ಮನೆ ನಿರ್ಮಿಸುತ್ತೇವೆ ಎಂದು ಹೇಳಿ ಇದ್ದ ಜಾಗವನ್ನು ಖಾಲಿ ಮಾಡಿಸಿ, 27 ಕುಟುಂಬಗಳನ್ನು ಬೀದಿಗೆ ತಳ್ಳಿದ್ದು...

ಬೆಂಗಳೂರು: ಕೇಂದ್ರ ಸರ್ಕಾರದ ಜೆ-ನರ್ಮ್ ಯೋಜನೆಯಡಿ ಮನೆ ನಿರ್ಮಿಸುತ್ತೇವೆ ಎಂದು ಹೇಳಿ ಇದ್ದ ಜಾಗವನ್ನು ಖಾಲಿ ಮಾಡಿಸಿ, 27 ಕುಟುಂಬಗಳನ್ನು ಬೀದಿಗೆ ತಳ್ಳಿದ್ದು, ಕುಟುಂಬಗಳಿಗೆ ನೆಲೆ ಕಾಣದೆ ಪರದಾಡುವ ಸ್ಥಿತಿ ಎದುರಾಗಿದೆ ಸ್ಲಂ ಮಕ್ಕಳ ಹಕ್ಕೊತ್ತಾಯ ಸಮಿತಿ ಆರೋಪಿಸಿದೆ.

ಕೇಂದ್ರ ಸರ್ಕಾರದ ಜೆ-ನರ್ಮ್ ಯೋಜನೆಯಡಿ 27 ಕುಟುಂಬಗಳನ್ನು ನಗರದ 180ನೇ ವಾರ್ಡ್ ನ ವಿಜಯ್ ಕಾಲೇಜು ಸ್ಲಂನಿಂದ ಯಾರಬ್ ನಗರಕ್ಕೆ ಕಳೆದ 2013 ಎಪ್ರಿಲ್ನಲ್ಲಿ ಸ್ಥಳಾಂತರಿಸಲಾಗಿದೆ. ನಿಯಮದ ಪ್ರಕಾರ ಅವರಿಗೆ 6 ತಿಂಗಳೊಳಗೆ ವಾಸ ಯೋಗ್ಯ ಮನೆ ನಿರ್ಮಿಸಕೊಡಬೇಕಿತ್ತು. ಆದರೆ ಇದುವರೆಗೆ ಗೃಹ ನಿರ್ಮಾಣ ಕಾರ್ಯವಾಗಿಲ್ಲ. ಈ ಕುಟುಂಬಗಳು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಬದುಕುತ್ತಿವೆ ಸಮಿತಿಯ ಮುಖಂಡ ಐಶ್ವರ್ಯ ದಾಸ್ ಪಟ್ನಾಯಕ್ ಆರೋಪಿಸಿದ್ದಾರೆ.

27 ಕುಟುಂಬಗಳು ತಾತ್ಕಾಲಿಕ ಶೆಡ್ ಗಳಲ್ಲಿ ವಾಸಿಸುತ್ತಿವೆ. ಅಲ್ಲಿ ಹೆಂಗಸರು ಮತ್ತು ಮಕ್ಕಳು ಅಸುರಕ್ಷತೆಯಿಂದ ಬದುಕುತ್ತಿದ್ದಾರೆ. ಕೂಡಲೇ ಸರ್ಕಾರ ಇವರೆಲ್ಲರಿಗೂ ಸೂಕ್ತ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದ ಅವರು, ಈ ಎಲ್ಲಾ ಕುಟುಂಬಗಳಿಗೆ ಮನೆ ಕಟ್ಟಿಕೊಡಲು ಹಣಕಾಸು ಕೊರತೆಯ ಸಬೂಬು ಹೇಳುತ್ತಿದೆ. ಮಳೆಗಾಲದಲ್ಲಿ ಈ ಕುಟುಂಬಗಳ ಜೀವನ ದುಸ್ತರವಾಗಿದೆ. ಟೆಂಟ್ ಶೆಡ್ಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ರಾತ್ರ ಪೂರ್ತಿ ಜಾಗರಣ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಬಿಬಿಎಂಪಿ 24 ಲಕ್ಷ ರೂ. ಗಳನ್ನು ಮನೆ ನಿರ್ಮಾಣಕ್ಕೆ ಬಿಡುಗಡೆ ಮಾಡಿದೆ. ಆದರೂ ಇನ್ನೂ ಹಲವು ಕುಟುಂಬಗಳು ಟೆಂಟ್ನಲ್ಲೇ ವಾಸಿಸುತ್ತಿವೆ. ಹೆಂಗಸರು ಬಯಲಿನಲ್ಲಿ ಸ್ನಾನ ಮಾಡಬೇಕಾದ ದುಃಸ್ಥಿತಿ ಮುಂದುವರಿದಿದೆ. ಮಕ್ಕಳಿಗೆ ಓದಲು ಸ್ಥಳ ಮತ್ತು ಉತ್ತಮ ಪರಿಸರ ಇಲ್ಲದೆ ಮಕ್ಕಳು ಶಾಲೆಗಳಿಗೆ ಬರುವುದನ್ನು ಬಿಡುತ್ತಿದ್ದಾರೆ .ಕಳೆದ ವರ್ಷ ನಾಲ್ಕು ವರ್ಷದ ಮಗು ಮದನ್ ದೊಡ್ಡ ಗುಂಡಿಗೆ ಬಿದ್ದು ಗಾಯಗೊಂಡಿದ್ದಾನೆ. ಇದುಕೂಡ ಬಿಬಿಎಂಪಿ ನಿರ್ಮಾಣ ಮಾಡುತ್ತಿರುವ ಮಿನಿ ಸ್ಟೇಡಿಯಂ ಜಾಗದಲ್ಲೇ ನಡೆದಿದೆ. ಸ್ಟೇಡಿಯಂ ಸುತ್ತ ಬೇಲಿ ಹಾಕುವಂತೆ ಒತ್ತಾಯಿಸಿದ್ದರೂ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ಅವರು ಆಪಾದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ': ರಾಹುಲ್ ಗಾಂಧಿಯಿಂದ ಹೊಸ ವಿವಾದ

ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ರ ವಯೋಮಾನದವರು- ಸಿಎಂ ಸಿದ್ದರಾಮಯ್ಯ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ತಡೆಯಾಜ್ಞೆ ವಿರೋಧಿಸಿ ಸರ್ಕಾರದ ಮೇಲ್ಮನವಿ; 'ಆದೇಶ ಕಾಯ್ದಿರಿಸಿದ' ಹೈಕೋರ್ಟ್

ಏಷ್ಯಾ ಕಪ್ ವಿವಾದ: ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್‌ಗೆ ಐಸಿಸಿ ಕಠಿಣ ಶಿಕ್ಷೆ, ಸೂರ್ಯಕುಮಾರ್ ಯಾದವ್‌ಗೆ ದಂಡ

ಭಾರತ ಸದ್ಯದಲ್ಲೇ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ- ಕೇಂದ್ರ ಹಣಕಾಸು ಸಚಿವೆ

SCROLL FOR NEXT