ಜಿಲ್ಲಾ ಸುದ್ದಿ

ಶಿರಾಡಿ ಘಾಟ್ ಸಂಚಾರ ಜುಲೈ 25ಕ್ಕೆ ಮುಕ್ತ

Sumana Upadhyaya

ಸುಬ್ರಹ್ಮಣ್ಯ: ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಳೆ ಅಡ್ಡಿಪಡಿಸಿದ್ದರಿಂದ ವಿಳಂಬವಾಗಿದೆ. ಆಧುನಿಕ ಯಂತ್ರ ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡು ಶೀಘ್ರ ಕಾಮಗಾರಿ ಮುಗಿಸಿ, ಜುಲೈ 25ಕ್ಕೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಅಭಿಯಂತರ ಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ.

ಮಲೆನಾಡು ಜನ ಹಿತರಕ್ಷಣಾ ವೇದಿಕೆ, ಶಿರಾಡಿ ಘಾಟ್ ಉಳಿಸಿ ಹೋರಾಟ ಸಮಿತಿ ಸೋಮವಾರ ಸಕಲೇಷಪುರದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿ, ಆಧುನಿಕ ತಂತ್ರಜ್ಞಾನ ಅಳವಡಿಸಿ ಗುಣಮಟ್ಟದ ಕಾಂಕ್ರಿಟೀಕರಣ ಮಾಡಲಾಗುತ್ತಿದೆ.

ನಿರಂತರ ಮಳೆಯಿಂದ ತೊಂದರೆಯಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 25 ದಿನ ಮಳೆ ಬಂದ ಕಾರಣ ಕಾಮಗಾರಿ ಆಗಿಲ್ಲ. ಕಾಮಗಾರಿಯನ್ನು ಬೇಗನೆ ಮುಗಿಸಲು ಯತ್ನಿಸುತ್ತಿದ್ದೇವೆ. 9.5 ಕಿ.ಮೀ ಕಾಂಕ್ರಿಟೀಕರಣ ಪೂರ್ಣಗೊಂಡಿದ್ದು, 3.5 ಕಿ.ಮೀ ಮಾತ್ರ ಬಾಕಿಯಿದೆ ಎಂದರು.

SCROLL FOR NEXT