ಅಕ್ರಮ ಕಲ್ಲುಗಣಿಗಾರಿಕೆ, 19 ಕಡೆ ಅಧಿಕಾರಿಗಳ ದಾಳಿ (ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಅಕ್ರಮ ಕಲ್ಲುಗಣಿಗಾರಿಕೆ, 19 ಕಡೆ ಅಧಿಕಾರಿಗಳ ದಾಳಿ

ಆನೇಕಲ್ ತಾಲೂಕಿನ 19 ಕಡೆಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ ಜಿಲ್ಲಾಡಳಿತ, ರು.800 ಕೋಟಿ ಮೌಲ್ಯದ ಜಾಗ ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡಿದೆ...

ಬೆಂಗಳೂರು: ಆನೇಕಲ್ ತಾಲೂಕಿನ 19 ಕಡೆಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ ಜಿಲ್ಲಾಡಳಿತ, ರು.800 ಕೋಟಿ ಮೌಲ್ಯದ ಜಾಗ ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡಿದೆ.

ಜಿಲ್ಲಾಧಿಕಾರಿ ವಿ. ಶಂಕರ್ ಅವರ ಆದೇಶದಂತೆ 9 ಅಧಿಕಾರಿಗಳ ತಂಡ ರಚಿಸಿದ್ದು, ಜಿಗಣಿ ಹೋಬಳಿಯ ತಮ್ಮನಾಯಕನಹಳ್ಳಿ, ಕನ್ನನಾಯಕನ ಅಗ್ರಹಾರ, ರಾಗಿಹಳ್ಳಿ, ಶಿವನಹಳ್ಳಿ, ಗಿಡ್ಡೇನಹಳ್ಳಿ, ಮಹಾಂತಲಿಂಗಪುರ, ಹುಲ್ಲಹಳ್ಳಿ, ಎಸ್. ಬಿಂಗೀಪುರ ಗ್ರಾಮಗಳ ವ್ಯಾಪ್ತಿಯಲ್ಲಿ 19 ಕಡೆ ದಾಳಿ ನಡೆಸಲಾಗಿದೆ. ಕಾನೂನು ಉಲ್ಲಂಘಿಸಿ ಸರ್ಕಾರಿ ಜಾಗದಲ್ಲಿ ಕೆಲವು ಉದ್ಯಮಿಗಳು ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಉಪಕರಣ, ಜೆಸಿಬಿ ವಾಹನ ಸೇರಿದಂತೆ ಭೂಮಿ ವಶಪಡಿಸಿಕೊಳ್ಳಲಾಗಿದೆ.

ಜಲ್ಲಿ ಪುಡಿಮಾಡುವ ಬೃಹತ್ ಯಂತ್ರಗಳನ್ನು ಬಳಸಿಕೊಂಡು ಇಲ್ಲಿನ ಗ್ರಾಮಗಳಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಗಣಿಗಾರಿಕೆ ಚಟುವಟಿಕೆ ನಿಲ್ಲಿಸುವಂತೆ ಜಿಲ್ಲಾಡಳಿತದಿಂದ ಈ ಹಿಂದೆಯೇ ಹಲವು ಬಾರಿ ಸೂಚನೆ ನೀಡಲಾಗಿತ್ತು. ಮುನ್ನೆಚ್ಚರಿಕೆಯಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರೂ ಜನರೇಟರ್ ಸಹಾಯದಿಂದ ರಾತ್ರಿ ವೇಳೆಯಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾ„ಕಾರಿ ಆರ್. ವೆಂಕಟಾಚಲಪತಿ ಅವರ ನೇತೃತ್ವದಲ್ಲಿ ಅಧಿಕಾರಿಗಳ 9 ತಂಡ ಏಕ ಕಾಲದಲ್ಲಿ ಹಠಾತ್ ದಾಳಿ ನಡೆಸಿದ್ದು, ಕೂಲಿ ಕಾರ್ಮಿಕರನ್ನು ಹೊರತುಪಡಿಸಿ ಮಾಲೀಕರು ಹಾಗೂ ಉದ್ಯಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತಮ್ಮನಾಯಕನಹಳ್ಳಿಯ ಸ.ನಂ. 19 ಸರ್ಕಾರಿ ಭೂಮಿಯಾಗಿದ್ದು, 826 ಎಕರೆ ವಿಸ್ತೀರ್ಣ ಹೊಂದಿದೆ.

ಇಲ್ಲಿ ಅಣ್ಣಯ್ಯಎಂಬುವರಿಗೆ ಕೃಷಿಗಾಗಿ 4 ಎಕರೆ ಭೂಮಿ ಮಂಜೂರಾಗಿತ್ತು. ಆದರೆ ಜಾಗವನ್ನು `ಶ್ರೀಚಕ್ರ ಎಂಜಿನಿಯರಿಂಗ್ ವಕ್ರ್ಸ್' ಖರೀದಿಸಿ ಜಲ್ಲಿ ಕ್ರಷರ್ ಆರಂಭಿಸಿತ್ತು. ಈ ಜಾಗಕ್ಕೆ ಹೊಂದಿಕೊಂಡಂತಿರುವ ಭೂಮಿಯಲ್ಲಿ ಕಲ್ಲು ತೆಗೆದು ಜಲ್ಲಿ ತಯಾರಿಸಿ ಲಾರಿಗಳಿಂದ ಸಾಗಿಸಲಾಗುತ್ತಿತ್ತು. ದಾಳಿ ನಡೆಸಿದ ಅಧಿಕಾರಿಗಳ ತಂಡ ಲಾರಿ, ಉಪಕರಣಗಳನ್ನು ವಶಕ್ಕೆ ಪಡೆದಿದೆ. ಕೃತ್ತಿಕಾ ಸ್ಟೋನ್ ಕ್ರಷರ್, ಎಸ್‍ಸಿಬಿ ಸ್ಟೋನ್ ಕ್ರಷರ್, ಎಸ್‍ವಿಬಿ ಕ್ರಷರ್ ಸಂಸ್ಥೆಗಳು ಇಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಕನ್ನನಾಯಕನ ಅಗ್ರಹಾರದಲ್ಲಿ ಲಕ್ಷ್ಮಿಸ್ಟೋನ್ ಕ್ರಷರ್, ಮಂಜುನಾಥ ಕ್ರಷರ್ ಹಾಗೂ ವೆಂಕಟೇಶ ಕ್ರಷರ್, ಮುತ್ತರಾಯ ಸ್ಟೋನ್ ಕ್ರಷರ್, ಆರ್‍ಎನ್‍ಎಸ್ ಸ್ಟೋನ್ ಕ್ರಷರ್, ಬಿಂಗೀಪುರದಲ್ಲಿ ಸೇಂಟ್‍ಮೇರಿ ಸ್ಟೋನ್ ಕ್ರಷರ್, ಸಹನಾ ಸ್ಟೋನ್ ಕ್ರಷರ್ ಸಂಸ್ಥೆಗಳು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ವಶಕ್ಕೆ ಪಡೆಯಲಾಗಿದೆ. ಶಿವನಹಳ್ಳಿಯಲ್ಲಿ 8 ಕ್ರಷರ್ ಸಂಸ್ಥೆಗಳು ನಡೆಸುತ್ತಿದ್ದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. 20ಸಾವಿರ ಮೆ.ಟನ್ ಜಲ್ಲಿ, ರು.100 ಕೋಟಿ ಮೌಲ್ಯದ ಯಂತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT