ಜಿಲ್ಲಾ ಸುದ್ದಿ

ಕಿಲ್ಲರ್ ವಾಹನಗಳಿಗೆ ಬಲಿಯಾಯ್ತು ಇಬ್ಬರ ಜೀವ

Vishwanath S

ಬೆಂಗಳೂರು: ಬಿಎಂಟಿಸಿ ಬಸ್ ಮತ್ತು ಬಿಬಿಎಂಪಿ ದೈತ್ಯ ಕಸದ ಲಾರಿಗಳು ಯಮಸ್ವರೂಪಿಗಳು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ನಗರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಈ ವಾಹನಗಳು ಇಬ್ಬರನ್ನು ಬಲಿ ತೆಗೆದುಕೊಂಡಿವೆ.

ವರ್ತೂರು ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಕಸದ ಲಾರಿ ಡಿಕ್ಕಿ ಹೊಡೆದು ಎಂಬಿಎ ವಿದ್ಯಾರ್ಥಿನಿ ರಮ್ಯಾ (22) ಮೃತಪಟ್ಟಿದ್ದಾರೆ. ಸ್ನೇಹಿತೆ ಪವಿತ್ರಾ ದ್ವಿಚಕ್ರ ವಾಹನದಲ್ಲಿ ರಮ್ಯಾ ಕಾಲೇಜಿಗೆ ತೆರಳುತ್ತಿದ್ದರು. ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಹೊತ್ತೊಯ್ದರು. ಅಷ್ಟರಲ್ಲಾಗಲೇ ರಮ್ಯಾ ಮೃತಪಟ್ಟಿದ್ದರು.

ಮಾಣೆಕ್‍ಷಾ ಪರೇಡ್ ಮೈದಾನದ ಬಳಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ತ್ರಿಶೂಲ್ (27) ಮೃತಪಟ್ಟಿದ್ದಾರೆ. ಶಿವಾಜಿನಗರ ಆಸ್ಮಾನ್ ರಸ್ತೆ ನಿವಾಸಿ ತ್ರಿಶೂಲ್, ಆಟೊಮೊಬೈಲ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದರು. ಬಿಆರ್ವಿ ಜಂಕ್ಷನ್ ಕಡೆಯಿಂದ ಕಬ್ಬನ್ ರಸ್ತೆ ಕಡೆ ತೆರಳುತ್ತಿದ್ದಾಗ ಹೊಸಕೋಟೆ ಕಡೆಯಿಂದ ಶಿವಾಜಿನಗರಕ್ಕೆ ಬರುತ್ತಿದ್ದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಸವಾರ ಸ್ಥಳದಲ್ಲೇ ಮೃತಪಟ್ಟರು.

SCROLL FOR NEXT