ನಿಮ್ಹಾನ್ಸ್ ನ ಮಾಜಿ ನಿರ್ದೇಶಕ ಡಾ. ರಾಜಾ ಮಾರ್ತಾಂಡ ವರ್ಮಾ ನಿಧನ 
ಜಿಲ್ಲಾ ಸುದ್ದಿ

ಡಾ.ರಾಜಾ ಮಾರ್ತಾಂಡ ವರ್ಮಾನಿಧನ

ಹಿರಿಯ ಮನೋ ವಿಜ್ಞಾನಿ ಹಾಗೂ ನಿಮ್ಹಾನ್ಸ್ ನ ಮಾಜಿ ನಿರ್ದೇಶಕ ಡಾ. ರಾಜಾ ಮಾರ್ತಾಂಡ ವರ್ಮಾ(93) ಮಂಗಳವಾರ ನಿಧನರಾದರು...

ಬೆಂಗಳೂರು: ಹಿರಿಯ ಮನೋ ವಿಜ್ಞಾನಿ ಹಾಗೂ ನಿಮ್ಹಾನ್ಸ್ ನ  ಮಾಜಿ ನಿರ್ದೇಶಕ ಡಾ. ರಾಜಾ ಮಾರ್ತಾಂಡ ವರ್ಮಾ(93) ಮಂಗಳವಾರ ನಿಧನರಾದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅವರು ಆರೂವರೆ ದಶಕಗಳ ಕಾಲ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ನಿಮ್ಹಾನ್ಸ್ ನ ಇವತ್ತಿನ ಖ್ಯಾತಿಯ ಹಿಂದೆ ವರ್ಮಾ ಅವರ ಪಾಲು ದೊಡ್ಡದಿದೆ ಎಂದು ನಿಮ್ಹಾನ್ಸ್  ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಇದಲ್ಲದೇ ದೇಶದ ಮೊದಲ ಐದು ನರರೋಗ ತಜ್ಞರಲ್ಲಿ ವರ್ಮಾ ಕೂಡ ಒಬ್ಬರಾಗಿದ್ದರು.

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಮುಗಿಸಿ ಲಂಡನ್‍ನಿಂದ ಬೆಂಗಳೂರಿಗೆ ಬಂದ ವರ್ಮಾ, 1958ರಲ್ಲಿ ನ್ಯೂರೋ ಸರ್ಜರಿ ವಿಭಾಗ ಆರಂಭಿಸಿದರು. ಅವರ ಪ್ರಯತ್ನದಿಂದಲೇ ಏಷ್ಯಾದ ಪ್ರಮುಖ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ನಿಮ್ಹಾನ್ಸ್ ಕೂಡ ಒಂದು ಎಂಬಂತಾಗಿದೆ. 1958ರಲ್ಲಿ ಆರಂಭವಾದ ಈ ಕೇಂದ್ರವೇ ಮುಂದೆ ನಿಮ್ಹಾನ್ಸ್ ಆಯಿತು. ಇದಲ್ಲದೇ ನಿಮ್ಹಾನ್ಸ್ ನ  ಸಂಸ್ಥಾಪಕ ನಿರ್ದೇಶಕರಾಗಿ ಉತ್ತಮ ಅಡಿಪಾಯ ಹಾಕಿದರು.

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಅವರ ಅವಿಸ್ಮರಣೀಯ ಸೇವೆ ಪರಿಗಣಿಸಿ 1969ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1970ರಲ್ಲಿ ಪದ್ಮಶ್ರೀ ಸೇರಿದಂತೆ ನಾನಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು. ಇದಲ್ಲದೇ ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರಿಗೆ ಗೌರವ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ವರ್ಮಾ, ಕೇಂದ್ರ ಸರ್ಕಾರದ ಆರೋಗ್ಯ ಲಾಖೆ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮುಂಚೆ ಬೆಂಗಳೂರು ವಿವಿಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ವಿಭಾಗದ ಡೀನ್ ಆಗಿ ಕೆಲಸ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT