ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ನೀರಿಗಾಗಿ ಪರದಾಡುತ್ತಿದ್ದವರ ನೋಡುತ್ತಲೇ ಕುಳಿತ!

ಪಾಲಕರು ಹಾಗೂ ಸಹೋದರಿಯರು ವಿಷಾಹಾರ ಉಂಡುಗಂಟಲು ಒಣಗಿ ಅಂತಿಮ ಕ್ಷಣದಲ್ಲಿ ನೀರಿಗಾಗಿ ಪರದಾಡುತ್ತಿದ್ದರೂ ನೋಡುತ್ತಲೇ ಕಾಲ ಕಳೆದಿದ್ದನಾ ಖಿನ್ನ ಮನಸ್ಥಿತಿಯ ಯತೀಶ್? ಘಟನಾ ಸ್ಥಳದ ಸೂಕ್ಷ್ಮಪರಿಶೀಲನೆ ನಡೆಸಿದ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು...

ಬೆಂಗಳೂರು: ಪಾಲಕರು ಹಾಗೂ ಸಹೋದರಿಯರು ವಿಷಾಹಾರ ಉಂಡುಗಂಟಲು ಒಣಗಿ ಅಂತಿಮ ಕ್ಷಣದಲ್ಲಿ ನೀರಿಗಾಗಿ ಪರದಾಡುತ್ತಿದ್ದರೂ ನೋಡುತ್ತಲೇ ಕಾಲ ಕಳೆದಿದ್ದನಾ ಖಿನ್ನ ಮನಸ್ಥಿತಿಯ ಯತೀಶ್? ಘಟನಾ ಸ್ಥಳದ ಸೂಕ್ಷ್ಮಪರಿಶೀಲನೆ ನಡೆಸಿದ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಇಂತಹ ಅನುಮಾನ ವ್ಯಕ್ತಪಡಿಸಿದ್ದಾರೆ.

ನಾಗರಬಾವಿ ಎಂಪಿಎಂ ಬಡಾವಣೆಯಲ್ಲಿ ತಂದೆ-ತಾಯಿ ಹಾಗೂ ಸಹೋದರಿಯರಿಗೆ ವಿಷ ನೀಡಿ ಶವಗಳೊಂದಿಗೆ 24 ತಾಸುಗಳಿಗೂ ಹೆಚ್ಚು ಕಾಲ ಕಳೆದಿದ್ದ ಯತೀಶ್, ಎಲ್ಲರ ಸಾವನ್ನು ಅತ್ಯಂತ ನಿರ್ಭಾವುಕನಾಗಿ ನೋಡಿರುವ ಸಾಧ್ಯತೆ ಇದೆ. ವಿಷಾಹಾರ ಸೇವಿಸಿದ ಐದು ಮಂದಿ ಕೆಲ ಹೊತ್ತಿನ ಬಳಿಕ ಅಸ್ವಸ್ಥಗೊಂಡು ನೀರಿಗಾಗಿ ಪರದಾಡಿದ್ದಾರೆ.

ಮನೆ ದೊಡ್ಡದಾಗಿದ್ದು ಹೊರಗೆ ಜನ ಸಂಚಾರ ಕಡಿಮೆ. ಹೀಗಾಗಿ, ಅಂತಿಮ ಕ್ಷಣದಲ್ಲಿ ಐವರ ಕಿರುಚಾಟ ಯಾರಿಗೂ ಕೇಳಿಸಿಲ್ಲ. ಐವರೂ ಮೃತಪಟ್ಟ ನಂತರ ಯತೀಶ್ ಶವಗಳನ್ನು ಬೇರೆ ಬೇರೆ ಕೊಠಡಿಗಳಲ್ಲಿ ಮಲಗಿದಂತೆ ಹಾಕಿದ್ದಾನೆ. ಊಟ ತಂದಿದ್ದ: ಬುಧವಾರ ಬೆಳಗ್ಗೆ ಕೆಲಸಕ್ಕೆ ಬಂದಿದ್ದ ಕಸ್ತೂರಿಯನ್ನು ಇನ್ನು ಮುಂದೆ ಕೆಲಸಕ್ಕೆ ಬರಬೇಡ ಎಂದು ಹೇಳಿ ಕಳುಹಿಸಿದ್ದ ಯತೀಶ್, ನಂತರ ಹೊರಗೆ ಹೋಗಿ ಊಟವನ್ನು ಪಾರ್ಸಲ್ ತಂದಿದ್ದ. ಆದರೆ, ಶವಗಳ ಮುಂದೆ ಊಟ ಮಾಡಲು ಸಾಧ್ಯವಾಗದೆ ಅದನ್ನು ಹಾಗೇ ಬಿಟ್ಟಿದ್ದ.

ಮಂಗಳವಾರ ರಾತ್ರಿ ಊಟಕ್ಕಾಗಿ ಅನ್ನ ಮತ್ತು ಸಾಂಬಾರ್ ಮಾಡಲಾಗಿತ್ತು. ಈ ವೇಳೆ ಯತೀಶ್ ಸಾಂಬಾರ್‍ನಲ್ಲಿ ವಿಷ ಬೆರೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಬಳ್ಳಾರಿ ಫೈರಿಂಗ್: ನಿನ್ನೆಯಷ್ಟೇ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪವನ್ ನೆಜ್ಜೂರ್ ಅಮಾನತು

ಭಾರತ ತಂಡಕ್ಕೆ ಭಾರಿ ಆಘಾತ; ಸ್ಟಾರ್ ಆಟಗಾರನ ಮೂಳೆ ಮುರಿತ, ದೀರ್ಘಕಾಲ ಕ್ರಿಕೆಟ್‌ನಿಂದ ದೂರ!

EVM Survey: ಹಳೆಯ ಸಮೀಕ್ಷೆ ಬಳಸಿಕೊಂಡು ಜನರ ದಾರಿತಪ್ಪಿಸುತ್ತಿರುವುದು ವಿಷಾದನೀಯ - ಸಿಎಂ ಸಿದ್ದರಾಮಯ್ಯ

SCROLL FOR NEXT