ಸೊಳ್ಳೆ 
ಜಿಲ್ಲಾ ಸುದ್ದಿ

ಶಿವಮೊಗ್ಗ ನಗರಕ್ಕೆ ಬಂದ ಎರಡು ಸೊಳ್ಳೆ ಕೊಲ್ಲುವ ಸಾಧನಗಳು

ನಗರದಲ್ಲಿ ಸೊಳ್ಳೆ ಹಾವಳಿಗೆ ಕಡಿವಾಣ ಹಾಕಲು ಶಿವಮೊಗ್ಗ ನಗರ ಸಭೆ ಪ್ರಾಯೋಗಿಕವಾಗಿ ಎರಡು ಸೊಳ್ಳೆ ಕೊಲ್ಲುವ ಸಾಧನಗಳನ್ನು

ಶಿವಮೊಗ್ಗ: ನಗರದಲ್ಲಿ ಸೊಳ್ಳೆ ಹಾವಳಿಗೆ ಕಡಿವಾಣ ಹಾಕಲು ಶಿವಮೊಗ್ಗ ನಗರ ಸಭೆ ಪ್ರಾಯೋಗಿಕವಾಗಿ ಎರಡು ಸೊಳ್ಳೆ ಕೊಲ್ಲುವ ಸಾಧನಗಳನ್ನು ಪ್ರತಿಷ್ಟಾಪಿಸಿದೆ. ಬಲೆಯಂತೆ ಕೆಲಸ ಮಾಡುವ ಈ ಯಂತ್ರ ಸೊಳ್ಳೆಗಳನ್ನು ಆಕರ್ಷಿಸಿ ನಂತರ ಅವುಗಳನ್ನು ಕೊಲ್ಲುತ್ತದೆ.

ಈ ಸಾಧನಗಳು ಯಶಸ್ವಿಯಾದರೆ ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಮಲೇರಿಯಾ ರೋಗಗಳನ್ನು ತಡೆಯಲು ಸಹಕಾರಿಯಾಗಲಿವೆ.

ಸ್ವೀಡನ್ ನ ಈ ಸಾಧನಗಳು ಪುಣೆಯಲ್ಲಿ ಉತ್ಪಾದನೆಗೊಳ್ಳುತ್ತಿವೆ. ಕೆಲವು ಅನಿಲಗಳನ್ನು ಬಳಸಿ ಸೊಳ್ಳೆಗಳನ್ನು ಆಕರ್ಷಿಸಬಲ್ಲ ಸರಿಯಾದ ಉಷ್ಣಾಂಶವನ್ನು ಇವು ಸ್ಥಾಪಿಸುತ್ತವೆ. ಈ ಸಾಧನಗಳು ಯು ವಿ ಕಿರಣಗಳನ್ನು ಕೂಡ ಬಳಸುತ್ತವೆ. ಅಲ್ಲದೆ ಈ ಸಾಧನಗಳು ಮನುಷ್ಯನ ಮತ್ತು ಪ್ರಾಣಿಗಳ ಮೈವಾಸನೆಯನ್ನು ಸೂಸಿ ಸೊಳ್ಳೆಗಳನ್ನು ಆಕರ್ಷಿಸುತ್ತವೆ. ಸೊಳ್ಳೆಗಳು ಒಳಬಂದ ಮೇಲೆ ಅವುಗಳನ್ನು ಕೊಲ್ಲುತ್ತವೆ.

ಕಂಟ್ರಿ ಕ್ಲಬ್ಬಿನ ಪಕ್ಕದಲ್ಲಿ ಮತ್ತು ಆರ್ ಎಂ ಎಲ್ ಎಕ್ಸ್ಟೆಂಶನ್ ನಲ್ಲಿ ಎರಡು ಸಾಧನಗಳನ್ನು ನಗರಸಭೆ ಪ್ರತಿಷ್ಟಾಪಿಸಿದ್ದು , ಕಳೆದ ನಾಲ್ಕೈದು ದಿನಗಳಿಂದ ಸಾವಿರಾರು ಸೊಳ್ಳೆಗಳು ಈ ಸಾಧನಗಳಿಂದ ಸತ್ತಿವೆ ಎನ್ನಲಾಗಿದೆ.

೨೫ ಮೀಟರ್ ಗಳ ದೂರದವರೆಗೂ ಸೊಳ್ಳೆಗಳನ್ನು ಆಕರ್ಷಿಸುವ ಈ ಸಾಧನಕ್ಕೆ ನಿರಂತರ ವಿದ್ಯುತ್ ಅವಶ್ಯಕತೆ ಇದೆ. ಇದಕ್ಕೆ ಸೋಲಾರ್ ಪ್ಯಾನಲ್ ಕೂಡ ಅಳವಡಿಸಬಹುದಾಗಿದ್ದು, ಅದರ ಯೋಜನೆ ಕೂಡ ಚಿಂತನೆಯಲ್ಲಿದೆ.

ಭಾರಿ ಮಳೆ ಮತ್ತು ಬಿಸಿಲನ್ನು ಈ ಸಾಧನಗಳು ತಡೆದುಕೊಳ್ಳಬಲ್ಲವು. ೧೦ ವರ್ಷದವರೆಗೂ ಬಾಳಿಕೆ ಬರುವ ಈ ಸಾಧನಗಳ ವಿವಿಧ ಪ್ರಭೇದಗಳು ೭೫ ಸಾವಿರದಿಂದ ಮೂರು ಲಕ್ಷದವರೆಗೆ ಬೆಲೆ ಬಾಳುತ್ತವೆ. ಪ್ರಾಯೋಗಿಕವಾಗಿ ಇವುಗಳನ್ನು ಪ್ರತಿಷ್ಟಾಪನೆ ಮಾಡಿದ್ದೇವೆ ಎಂದು ತಿಳಿಸಿದ ಮುನ್ಸಿಪಲ್ ಕಮಿಷನರ್ ಎ ಆರ್ ರವಿ, ಇವುಗಳ ಸಾಮರ್ಥ್ಯ ಪರೀಕ್ಷಿಸಿ ಹೆಚ್ಚಿನ ಸಾಧನಗಳನ್ನು ಪ್ರತಿಷ್ಠಾಪಿಸುವ ಚಿಂತನೆ ಮಾಡಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT