ಸೊಳ್ಳೆ 
ಜಿಲ್ಲಾ ಸುದ್ದಿ

ಶಿವಮೊಗ್ಗ ನಗರಕ್ಕೆ ಬಂದ ಎರಡು ಸೊಳ್ಳೆ ಕೊಲ್ಲುವ ಸಾಧನಗಳು

ನಗರದಲ್ಲಿ ಸೊಳ್ಳೆ ಹಾವಳಿಗೆ ಕಡಿವಾಣ ಹಾಕಲು ಶಿವಮೊಗ್ಗ ನಗರ ಸಭೆ ಪ್ರಾಯೋಗಿಕವಾಗಿ ಎರಡು ಸೊಳ್ಳೆ ಕೊಲ್ಲುವ ಸಾಧನಗಳನ್ನು

ಶಿವಮೊಗ್ಗ: ನಗರದಲ್ಲಿ ಸೊಳ್ಳೆ ಹಾವಳಿಗೆ ಕಡಿವಾಣ ಹಾಕಲು ಶಿವಮೊಗ್ಗ ನಗರ ಸಭೆ ಪ್ರಾಯೋಗಿಕವಾಗಿ ಎರಡು ಸೊಳ್ಳೆ ಕೊಲ್ಲುವ ಸಾಧನಗಳನ್ನು ಪ್ರತಿಷ್ಟಾಪಿಸಿದೆ. ಬಲೆಯಂತೆ ಕೆಲಸ ಮಾಡುವ ಈ ಯಂತ್ರ ಸೊಳ್ಳೆಗಳನ್ನು ಆಕರ್ಷಿಸಿ ನಂತರ ಅವುಗಳನ್ನು ಕೊಲ್ಲುತ್ತದೆ.

ಈ ಸಾಧನಗಳು ಯಶಸ್ವಿಯಾದರೆ ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಮಲೇರಿಯಾ ರೋಗಗಳನ್ನು ತಡೆಯಲು ಸಹಕಾರಿಯಾಗಲಿವೆ.

ಸ್ವೀಡನ್ ನ ಈ ಸಾಧನಗಳು ಪುಣೆಯಲ್ಲಿ ಉತ್ಪಾದನೆಗೊಳ್ಳುತ್ತಿವೆ. ಕೆಲವು ಅನಿಲಗಳನ್ನು ಬಳಸಿ ಸೊಳ್ಳೆಗಳನ್ನು ಆಕರ್ಷಿಸಬಲ್ಲ ಸರಿಯಾದ ಉಷ್ಣಾಂಶವನ್ನು ಇವು ಸ್ಥಾಪಿಸುತ್ತವೆ. ಈ ಸಾಧನಗಳು ಯು ವಿ ಕಿರಣಗಳನ್ನು ಕೂಡ ಬಳಸುತ್ತವೆ. ಅಲ್ಲದೆ ಈ ಸಾಧನಗಳು ಮನುಷ್ಯನ ಮತ್ತು ಪ್ರಾಣಿಗಳ ಮೈವಾಸನೆಯನ್ನು ಸೂಸಿ ಸೊಳ್ಳೆಗಳನ್ನು ಆಕರ್ಷಿಸುತ್ತವೆ. ಸೊಳ್ಳೆಗಳು ಒಳಬಂದ ಮೇಲೆ ಅವುಗಳನ್ನು ಕೊಲ್ಲುತ್ತವೆ.

ಕಂಟ್ರಿ ಕ್ಲಬ್ಬಿನ ಪಕ್ಕದಲ್ಲಿ ಮತ್ತು ಆರ್ ಎಂ ಎಲ್ ಎಕ್ಸ್ಟೆಂಶನ್ ನಲ್ಲಿ ಎರಡು ಸಾಧನಗಳನ್ನು ನಗರಸಭೆ ಪ್ರತಿಷ್ಟಾಪಿಸಿದ್ದು , ಕಳೆದ ನಾಲ್ಕೈದು ದಿನಗಳಿಂದ ಸಾವಿರಾರು ಸೊಳ್ಳೆಗಳು ಈ ಸಾಧನಗಳಿಂದ ಸತ್ತಿವೆ ಎನ್ನಲಾಗಿದೆ.

೨೫ ಮೀಟರ್ ಗಳ ದೂರದವರೆಗೂ ಸೊಳ್ಳೆಗಳನ್ನು ಆಕರ್ಷಿಸುವ ಈ ಸಾಧನಕ್ಕೆ ನಿರಂತರ ವಿದ್ಯುತ್ ಅವಶ್ಯಕತೆ ಇದೆ. ಇದಕ್ಕೆ ಸೋಲಾರ್ ಪ್ಯಾನಲ್ ಕೂಡ ಅಳವಡಿಸಬಹುದಾಗಿದ್ದು, ಅದರ ಯೋಜನೆ ಕೂಡ ಚಿಂತನೆಯಲ್ಲಿದೆ.

ಭಾರಿ ಮಳೆ ಮತ್ತು ಬಿಸಿಲನ್ನು ಈ ಸಾಧನಗಳು ತಡೆದುಕೊಳ್ಳಬಲ್ಲವು. ೧೦ ವರ್ಷದವರೆಗೂ ಬಾಳಿಕೆ ಬರುವ ಈ ಸಾಧನಗಳ ವಿವಿಧ ಪ್ರಭೇದಗಳು ೭೫ ಸಾವಿರದಿಂದ ಮೂರು ಲಕ್ಷದವರೆಗೆ ಬೆಲೆ ಬಾಳುತ್ತವೆ. ಪ್ರಾಯೋಗಿಕವಾಗಿ ಇವುಗಳನ್ನು ಪ್ರತಿಷ್ಟಾಪನೆ ಮಾಡಿದ್ದೇವೆ ಎಂದು ತಿಳಿಸಿದ ಮುನ್ಸಿಪಲ್ ಕಮಿಷನರ್ ಎ ಆರ್ ರವಿ, ಇವುಗಳ ಸಾಮರ್ಥ್ಯ ಪರೀಕ್ಷಿಸಿ ಹೆಚ್ಚಿನ ಸಾಧನಗಳನ್ನು ಪ್ರತಿಷ್ಠಾಪಿಸುವ ಚಿಂತನೆ ಮಾಡಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT