ವಿಧಾನಪರಿಷತ್ತು 
ಜಿಲ್ಲಾ ಸುದ್ದಿ

ಯೋಗ್ಯತೆ ಇಲ್ಲದ ಮೇಲೆ ಮಂತ್ರಿ ಏಕೆ ಆಗ್ತೀರಿ? ಕಿತ್ತಾಕ್ರೀ ಅವ್ರನ್ನ...

ಯೋಗ್ಯತೆ ಇಲ್ಲದ ಮೇಲೆ ಮಂತ್ರಿ ಏಕೆ ಆಗುತ್ತೀರಿ. ಗೂಟದ ಕಾರು, ಸಿಬ್ಬಂದಿ, ಕಚೇರಿ ಏಕೆ ಬೇಕು?-- ಸದನಕ್ಕೆ ಹಾಜರಾಗದ ಸಚಿವರ ಬಗ್ಗೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ ರೀತಿ...

ವಿಧಾನಪರಿಷತ್ತು: ಯೋಗ್ಯತೆ ಇಲ್ಲದ ಮೇಲೆ ಮಂತ್ರಿ ಏಕೆ ಆಗುತ್ತೀರಿ. ಗೂಟದ ಕಾರು, ಸಿಬ್ಬಂದಿ, ಕಚೇರಿ ಏಕೆ ಬೇಕು?-- ಸದನಕ್ಕೆ ಹಾಜರಾಗದ ಸಚಿವರ ಬಗ್ಗೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ ರೀತಿ.

ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ, ಸಚಿವರಿಗೆ ಸದನಕ್ಕೆ ಬರುವುದಕ್ಕೆ ಆಸಕ್ತಿ ಇಲ್ಲ. ಅಂಥವರಿಗೆ ಸಚಿವರಾಗಲು ಯೋಗ್ಯತೆಯೂ ಇಲ್ಲ ಎಂದು ರೇಗಿದರು. ಆಗ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಕೆಲವು ಸಚಿವರು ಅನ ಪಡೆದಿದ್ದಾರೆ. ತಡವಾಗಿ ಬರುತ್ತಾರೆ ಎಂದು ಹೇಳಿದರು.

ಇದನ್ನು ಒಪ್ಪದ ಈಶ್ವರಪ್ಪ ಸರ್ಕಾರದದಲ್ಲಿ ಸಾಕಷ್ಟು ಅಸರ್ಮಥ ಸಚಿವರಿದ್ದಾರೆ. ಅಂಥವರನ್ನು ಏಕೆ ಇಟ್ಟುಕೊಂಡಿದ್ದೀರಿ. ದಯವಿಟ್ಟು ತೆಗೆದು ಹಾಕಿ. ಸಮರ್ಥರಿಗೆ ಮಂತ್ರಿ ಸ್ಥಾನ ನೀಡಿ. ಅಸಮರ್ಥರನ್ನು ಕೂಡಲೇ ಸಂಪುಟದಿಂದ ಕೈಬಿಡಿ ಎಂದು ಆಗ್ರಹಿಸಿದರು. ಇದಕ್ಕೆ ಸಭಾನಾಯಕ ಎಸ್.ಆರ್. ಪಾಟೀಲ್ ಹೊರತುಪಡಿಸಿ ಮತ್ಯಾರೂ ತುಟಿ ಬಿಚ್ಚಲು ಯತ್ನಿಸಲಿಲ್ಲ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಕ್ಸಮರ ನಡೆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT