ಎಸ್ ಎಸ್ ಎಲ್ ಸಿ ಬೋರ್ಡ್ 
ಜಿಲ್ಲಾ ಸುದ್ದಿ

ಜಾತಿವಾರು ಫಲಿತಾಂಶ: ಸ್ಪಷ್ಟನೆ ನೀಡಿದ ಎಸ್ ಎಸ್ ಎಲ್ ಸಿ ಬೋರ್ಡ್ ಅಧಿಕಾರಿಗಳು

ಜಾತಿ ಆಧಾರಿತ ಪ್ರವರ್ಗದ ವಿಂಗಡಣೆ ಮಾಡಿ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆಯನ್ನು ಮುಂದುವರಿಸಿರುವುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು....

ಬೆಂಗಳೂರು: ಜಾತಿ ಆಧಾರಿತ ಪ್ರವರ್ಗದ ವಿಂಗಡಣೆ ಮಾಡಿ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆಯನ್ನುಮುಂದುವರಿಸಿರುವುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದರೂ ತಜ್ಞರು ಅದನ್ನು ವಿರೋಧಿಸುತ್ತಿದ್ದಾರೆ. ಪ.ಜಾ, ಪ.ಪಂಗಡ ಪ್ರವರ್ಗ, ಇತರೆ ಎಂಬ 8 ಪ್ರತ್ಯೇಕ ವಿಭಾಗದಡಿ ಫಲಿತಾಂಶ ವಿವರ ನೀಡುವ ರೂಡಿಯನ್ನು ಪ್ರೌಢ ಶಿಕ್ಷಣ ಮಂಡಳಿ, ಪಪೂ ಶಿಕ್ಷಣ ಇಲಾಖೆ ಮಾಡಿಕೊಂಡು ಬಂದಿವೆ. ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಮುಂದಿನ ವ್ಯಾಸಂಗಕ್ಕೆ ನೀಡುವ ಉದ್ದೇಶದಿಂದ ಇಂಥ  ಮಾಹಿತಿ ಅನುಕೂಲವಾಗುತ್ತದೆ ಎನ್ನುವುದು ನಿಜ. ಆದರೆ ಭಿನ್ನ ಉದ್ದೇಶಕ್ಕಾಗಿ ಬಹಿರಂಗವಾಗಿ ಪ್ರಕಟಿಸುವುದು ಸರಿಯಲ್ಲ ಎಂಬ ಮಾತು ವ್ಯಕ್ತವಾಗಿದೆ. ಸಮಾಜ ಕಲ್ಯಾಣ ಇಲಾಖೆಯು ಹಿಂದುಳಿದವರಿಗೆ ಪ್ರೋತ್ಸಾಹ ಧನ ನೀಡುತ್ತದೆ. ಹಾಗೆಯೇ ಹಿಂದುಳಿದ ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆಗೈಯ್ಯುತ್ತಿದ್ದಾರೆ. ಶಿಕ್ಷಣದಲ್ಲಿ ಅವರು ಹಿಂದೆ ಬಿದ್ದಿಲ್ಲ ಎನ್ನುವುದನ್ನು ಸಮಾಜಕ್ಕೆ ತಿಳಿಸಬೇಕು ಎನ್ನುವುದು ಇಲಾಖೆ ಉದ್ದೇಶ. ಮಾಹಿತಿ ಹಾಗೂ ಅವಲೋಕನಕ್ಕೆ ಇದು ಸೀಮಿತವಷ್ಟೆ ಎಂದು ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ಯಶೋದಾ ಭೋಪಣ್ಣ ತಿಳಿಸಿದ್ದಾರೆ.

ಜಾತಿ
ಹಾಜರುಉತ್ತೀರ್ಣ
     ಶೇ.
ಪರಿಶಿಷ್ಟ ಜಾತಿ
142427
113383
79.61
ಪರಿಶಿಷ್ಟ ಪಂಗಡ
52958
43467
82.08
ಪ್ರವರ್ಗ -1
45087
38204
84.73
ಪ್ರವರ್ಗ- 2ಎ
128750
111880
86.90
ಪ್ರವರ್ಗ- 2ಬಿ86290
69743
80.82
ಪ್ರವರ್ಗ- 3ಎ
71555
65165
91.06
ಪ್ರವರ್ಗ- 3ಬಿ89148
79444
89.11
ಇತರೆ
172227
147704
85.76




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT