ಮಾರ್ಗರಿಟಾ ಮಾರ್ಗ ಪರಿಪೂರ್ಣ 
ಜಿಲ್ಲಾ ಸುದ್ದಿ

ಮೆಟ್ರೋ ಸುರಂಗ: 'ಮಾರ್ಗರಿಟಾ' ಮಾರ್ಗ ಪರಿಪೂರ್ಣ

ನಗರದ ಮೆಜಸ್ಟಿಕ್ ನಿಂದ ಸಂಪಿಗೆ ರಸ್ತೆವರೆಗಿನ ನಮ್ಮ ಮೆಟ್ರೋ ಸುರಂಗ ಕೊರೆಯುವ ಕಾರ್ಯವನ್ನು ಮಾರ್ಗರಿಟಾ(ಸುರಂಗ ಕೊರೆಯುವ ಯಂತ್ರ-ಟಿಬಿಎಂ) ಪೂರ್ಣಗೊಳಿಸಿತು.

ಬೆಂಗಳೂರು: ನಗರದ ಮೆಜಸ್ಟಿಕ್ ನಿಂದ ಸಂಪಿಗೆ ರಸ್ತೆವರೆಗಿನ ನಮ್ಮ ಮೆಟ್ರೋ ಸುರಂಗ ಕೊರೆಯುವ ಕಾರ್ಯವನ್ನು ಮಾರ್ಗರಿಟಾ(ಸುರಂಗ ಕೊರೆಯುವ ಯಂತ್ರ-ಟಿಬಿಎಂ) ಪೂರ್ಣಗೊಳಿಸಿತು. ಈ ಮೂಲಕ ಉತ್ತರ ಕಾರಿಡಾರ್ ಹಾಗೂ ಅತಿ ಉದ್ದ ಸುರಂಗ ಕಾರಿಡಾರ್ ನ ಹಾಗೂ ಅತಿ ಉದ್ದದ ಸುರಂಗ ಮಾರ್ಗ ಕೊರೆಯುವ ಕೆಲಸವನ್ನು ಮಾರ್ಗರಿಟಾ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸಂಜೆ ಸುಮಾರು 4 ಗಂಟೆಯಿಂದಲೇ ಮೆಟ್ರೋ ಸಿಬ್ಬಂದಿ ಜಕ್ಕರಾಯನ ಕೆರೆ ಬಳಿ(ಟಿಬಿಎಂ ಹೊರಬರುವ ಸ್ಥಳ) ಕಾತುರರಾಗಿ ಕಾಯುತ್ತಿದ್ದರು. ಸುಮಾರು ಮುಕ್ಕಾಲು ಗಂಟೆ ನಂತರ `ಮಾರ್ಗರಿಟಾ' ಯಂತ್ರ ಭೂಮಿ ಸೀಳಿ ಹೊರಬಂತು. ಈ ವೇಳೆ ಮೆಟ್ರೊ ಅಧಿಕಾರಿಗಳು ಮತ್ತು ಸಿಬ್ಬಂದಿ ಹರ್ಷೋದ್ಗಾರ ತೆಗೆದರು. ಮೆಜೆಸ್ಟಿಕ್‍ನಿಂದ ಒಟ್ಟು ಸಂಪಿಗೆ ರಸ್ತೆ ವರೆಗಿನ ಈ ಸುರಂಗ ಮಾರ್ಗ 960 ಮೀಟರ್ ಆಗಿದ್ದು, ಇದನ್ನು ಪೂರ್ಣಗೊಳಿಸಲು `ಮಾರ್ಗರಿಟಾ' ತೆಗೆದುಕೊಂಡ ಕಾಲವಕಾಶ ಬರೋಬ್ಬರಿ ಒಂದು ವರ್ಷ ಒಂದು ತಿಂಗಳು. ಇನ್ನು ಹಳಿ ಹಾಕಬೇಕಷ್ಟೆ...: ಸುರಂಗ ಕೊರೆಯುವ ಕಾರ್ಯ ಪೂರ್ಣವಾಗುವುದರೊಂದಿಗೆ, ಮೆಜೆಸ್ಟಿಕ್‍ನಿಂದ ಪೀಣ್ಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಕ್ಕೆ ಬಹುತೇಕ ಯಶಸ್ಸು ಸಿಕ್ಕಿದೆ. ಇನ್ನು ಹಳಿ ಹಾಕುವ ಕಾರ್ಯ ಮಾತ್ರ ಬಾಕಿ ಉಳಿದಿದೆ. ಈ ಕಾರ್ಯ ಚುರುಕುಗೊಳಿಸಲಾ-ಗುವುದು ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ತಿಳಿಸಿದ್ದಾರೆ. `ಮಾರ್ಗರಿಟಾ' ಯಶಸ್ವಿಯಾಗಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸುರಂಗ ಮಾರ್ಗ ಸುಮಾರು 1 ಕಿ.ಮೀ. ಇದೆ. ಇದು ಅತಿ ಉದ್ದವಾದ ಮಾರ್ಗ. ಈ ಮಾರ್ಗ ಪೂರ್ಣಗೊಂಡಿರುವುದರಿಂದ ಪೀಣ್ಯಕ್ಕೆ ಸಂಪರ್ಕ ಕಲ್ಪಿಸುವುದು ಸುಲಭವಾಗಿದೆ.
ಇದಕ್ಕೆ ಎದುರಾಗಿ ಚಿಕ್ಕಪೇಟೆಯಿಂದ ಮೆಜೆಸ್ಟಿಕ್‍ಗೆ ಬರುತ್ತಿರುವ ಕಾವೇರಿ ಟಿಬಿಎಂ ಯಂತ್ರ ಮೆಜೆಸ್ಟಿಕ್‍ಗೆ ಇನ್ನೂ 200 ಮೀ. ದೂರದಲ್ಲಿದೆ. ಅದು ಮುಗಿದರೆ 4 ಕಿ.ಮೀ. (ಚಿಕ್ಕಪೇಟೆ-ಸಂಪಿಗೆ ರಸ್ತೆ) ಮುಕ್ತಾಯವಾದಂತಾಗುತ್ತದೆ. ಆದರೆ, ವಿವಿಧ ಕಾರಣಗಳಿಂದ ಕಾವೇರಿ ಕೊರೆತ ಕುಂಠಿತವಾಗಿದೆ. ಆದರೂ ಹಳಿ ಹಾಕಿ, ಎಲ್ಲಾ ಕೆಲಸ ಶೀಘ್ರದಲ್ಲಿ ಮುಗಿಸಿದರೆ ಪೀಣ್ಯಕ್ಕೆ ಮೆಜೆಸ್ಟಿಕ್‍ನಿಂದ  ಸಂಪರ್ಕ ಕಲ್ಪಿಸುವುದು ಸುಲಭವಾಗುತ್ತದೆ. ಮಾರ್ಚ್ ವೇಳೆಗೆ ರೈಲು ಸಂಚಾರ ಆರಂಭಿಸಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT