ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ ಆನಂದ್ ರಾಜ್ ಅಂಬೇಡ್ಕರ್ 
ಜಿಲ್ಲಾ ಸುದ್ದಿ

ಮೋದಿ ಭಾಷಣಕಾರ ಅಷ್ಟೆ, ಕೆಲಸಗಾರನಲ್ಲ: ಆನಂದ ರಾಜ್

ಮೋದಿ ಒಬ್ಬ ಭಾಷಣಕಾರನೇ ಹೊರತು ಕೆಲಸಗಾರನಲ್ಲ. ವೇದಿಕೆ ಮೇಲೆ ಮಾತ್ರ ಅಂಬೇಡ್ಕರ್ ವಿಚಾರ ಹೇಳುತ್ತಾರೆ. ಕೃತಿಯಲ್ಲಿ ಮೇಲ್ಜಾತಿಯ...ತುಷ್ಟೀಕರಣ

ಬೆಂಗಳೂರು: ಮೋದಿ ಒಬ್ಬ ಭಾಷಣಕಾರನೇ ಹೊರತು ಕೆಲಸಗಾರನಲ್ಲ. ವೇದಿಕೆ ಮೇಲೆ   ಮಾತ್ರ ಅಂಬೇಡ್ಕರ್ ವಿಚಾರ ಹೇಳುತ್ತಾರೆ. ಕೃತಿಯಲ್ಲಿ ಮೇಲ್ಜಾತಿಯ ತುಷ್ಟೀಕರಣ  ಮಾಡುತ್ತಾರೆ. ಗೋಮಾಂಸದ ರಾಜಕಾರಣ ಮಾಡಿದ ಕೋಮುವಾದಿ ಮತಾಂಧ  ಶಕ್ತಿಗಳಿಗೆ ಬಿಹಾರದ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ರಿಪಬ್ಲಿಕ್ ಸೇನೆಯ ರಾಷ್ಟ್ರೀಯ  ಅಧ್ಯಕ್ಷ  ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ಹೇಳಿದರು.

ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‍ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಜಾ,  ಪಪಂ ನೌಕರರ ಸಂಘ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ  ಜಯಂತ್ಯುತ್ಸವದ ವರ್ಷಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ ಮೋದಿ ಪ್ರಧಾನಿಯಾಗಲು ಅಂಬೇಡ್ಕರ್ ರಚಿಸಿದ ಸಂವಿ ಧಾನ ಕಾರಣವಾಗಿದೆ. ಆದರೆ, ಮೋದಿ ಮಾತು ಬೇರೆ, ಕೃತಿ ಬೇರೆಯಾಗಿದೆ. ಮೇಲ್ಜಾತಿಯ  ಮುಖಂಡರನ್ನು ಈ ದೇಶದ ನಾಯಕರನ್ನಾಗಿ ಮಾಡುತ್ತದೆ. ಆದರೆ ವಿಶ್ವವೇ  ಜನನಾಯಕನೆಂದು ಒಪ್ಪಿಕೊಂಡ ಅಂಬೇಡ್ಕರ್ ಗೆ ಸೂಕ್ತ ಸ್ಥಾನಮಾನ ಸಿಗದಿಲ್ಲದಿರುವುದು  ದುರಂತ ಎಂದು ವಿಷಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT