ಜಿಲ್ಲಾ ಸುದ್ದಿ

ಈದ್ಗಾ ಮೈದಾನದಲ್ಲಿ ಹಂದಿ ಮಾಂಸ

Srinivasamurthy VN

ಚನ್ನಪಟ್ಟಣ: ನಗರದ ಮಂಗಳವಾರಪೇಟೆ ಬಳಿಯ ಈದ್ಗಾ ಮೈದಾನದ ಪ್ರಾರ್ಥನಾ ಸ್ಥಳದಲ್ಲಿ ಕಿಡಿಗೇಡಿಗಳು ಹಂದಿ ಮಾಂಸದ ತುಂಡುಗಳನ್ನಿಟ್ಟಿದ್ದುದರಿಂದ ಭಾನುವಾರ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿ ಮುಸ್ಲಿಮರು ನಗರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಕೇಂದ್ರ ವಲಯ ಐಜಿಪಿ ಅರುಣ್ ಚಕ್ರವರ್ತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭದ್ರತೆಗಾಗಿ 5 ಡಿವೈಎಸ್‍ಪಿ, 10 ಸರ್ಕಲ್ ಇನ್‍ಸ್ಪೆಕ್ಟರ್, ನಾಲ್ಕು ಕೆಎಸ್ ಆರ್‍ಪಿ ಹಾಗೂ 4 ಡಿಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಈದ್ಗಾ ಮೈದಾನದಲ್ಲಿ ದ್ದ ಮಾಂಸದ ತುಂಡುಗಳನ್ನು ತೆರವುಗೊಳಿಸಿ ಮೈದಾನ ಶುಚಿಗೊಳಿಸಲಾಗಿದೆ. ಹೊರಗಿನ ವ್ಯಕ್ತಿಗಳ ಕೈವಾಡವಿರಬಹು ದು ಎಂದು ಶಂಕಿಸಿರುವ ಅರುಣ್ ಚಕ್ರವರ್ತಿ, ಕಿಡಿಗೇಡಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಸದ ಡಿ.ಕೆ.ಸುರೇಶ್, ಶಾಸಕ ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಮುದೀರ್ ಆಗಾ ಅವರು ಪ್ರತ್ಯೇಕ ಶಾಂತಿ ಸಭೆ ನಡೆಸಿದರು.

SCROLL FOR NEXT