ಲಂಡನ್ ನಲ್ಲಿರುವ ಬಸವಣ್ಣ ಪ್ರತಿಮೆ 
ಜಿಲ್ಲಾ ಸುದ್ದಿ

ಇತಿಹಾಸ ಹೇಳುವುದು ಶಿಲ್ಪಿಯ ಹೊಣೆಯಲ್ಲ: ಶಿಲ್ಪಿ ಶ್ರೀಧರಮೂರ್ತಿ

ಲಂಡನ್‍ನಲ್ಲಿ ಪ್ರತಿಷ್ಠಾಪಿಸಿರುವ ಶಿಲ್ಪದ ಕೆಳಗೆ ಬಸವಣ್ಣನ ಜೀವಿತಾವಧಿ ಚರ್ಚೆಗೆ ಅವಕಾಶ ನೀಡುವಂತೆ ನಮೂದಾಗಿರುವುದರಲ್ಲಿ ನನ್ನ ಪಾತ್ರವೇನೂ ಇಲ್ಲ. ...

ಶಿವಮೊಗ್ಗ: `ಲಂಡನ್‍ನಲ್ಲಿ ಪ್ರತಿಷ್ಠಾಪಿಸಿರುವ ಶಿಲ್ಪದ ಕೆಳಗೆ ಬಸವಣ್ಣನ ಜೀವಿತಾವಧಿ ಚರ್ಚೆಗೆ ಅವಕಾಶ ನೀಡುವಂತೆ ನಮೂದಾಗಿರುವುದರಲ್ಲಿ ನನ್ನ ಪಾತ್ರವೇನೂ ಇಲ್ಲ. ಶಿಲ್ಪವನ್ನು ರಚಿಸುವುದಷ್ಟೇ ನನ್ನ ಕೆಲಸ. ಇತಿಹಾಸಕಾರನ ಕೆಲಸ ನನ್ನದಲ್ಲ'; ಲಂಡನ್‍ನ ಥೇಮ್ಸ್ ನದಿ ದಡದ ಮೇಲೆ ಪ್ರತಿಷ್ಠಾಪಿಸಿರುವ ಬಸವಣ್ಣನ ಮೂರ್ತಿ ಸರ್ವರ ಪ್ರಶಂಸೆಗೆ ಪಾತ್ರವಾದರೂ ಅಲ್ಲಿ ನಮೂದಾಗಿರುವ ಬಸವಣ್ಣನ ಜೀವಿತಾವಧಿ 32 ವರ್ಷ ಎಂದಿರುವ ಬಗ್ಗೆ ವಿವಾದವೆದ್ದಿತ್ತು.

ಈ ಬಗ್ಗೆ ಮಾತನಾಡಿರುವ ಶಿಲ್ಪಿ ಶ್ರೀಧರಮೂರ್ತಿ ಶಿಲ್ಪದ ಬಗೆಗಿನ ಹಲವು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ. ಅವರೊಂದಿಗಿನ ಮಾತುಕತೆಯ ಸಂಕ್ಷಿಪ್ತ ರೂಪ ಇಲ್ಲಿದೆ.

ಬಸವಣ್ಣನ ಹಲವು ರೂಪಗಳಿವೆ. ಭಕ್ತ ಬಸವಣ್ಣ, ಭಂಡಾರಿ ಬಸವಣ್ಣ, ಮಂತ್ರಿ ಬಸವಣ್ಣ ಹೀಗೆ. ನೀವು ಕಿರೀಟಧಾರಿ ಬಸವಣ್ಣನ ರೂಪ ಆರಿಸಿದ್ದು ಹೇಗೆ?
ಜಗತ್ತಿನ ಮೊದಲ ಪಾರ್ಲಿಮೆಂಟ್ ರೂಪಿಸಿದ್ದು ಬಸವಣ್ಣ ಎಂದು ಬಿಂಬಿಸುವ ಆಶಯ ಇತ್ತು. ಹಾಗಾಗಿಯೇ ಮಂತ್ರಿ ಬಸವಣ್ಣನ ಶಿಲ್ಪವನ್ನೇ ಮಾಡುವಂತೆ ನನಗೆ ಸೂಚಿಸಲಾಗಿತ್ತು. ಇದಿಷ್ಟೇ ಅಲ್ಲ. ಬಸವಣ್ಣನ ಕಾಲದ ಸಾಮಾಜಿಕ ವ್ಯವಸ್ಥೆ ಬಗ್ಗೆಯೂ ಹೇಳಬೇಕಿತ್ತು. ಹಾಗಾಗಿ ಪೀಠದ ಕೆಳಗೆ ಪೆಡೆಸ್ಟಲ್ ಭಾಗದಲ್ಲಿ ಎರಡು ಕಡೆ ಕಂಚಿನ ಉಬ್ಬು ಶಿಲ್ಪ ರೂಪಿಸಲಾಗಿದೆ. ಒಂದು ಉಬ್ಬು ಶಿಲ್ಪದಲ್ಲಿ ಅಂದಿನ ಅನುಭವ ಮಂಟಪ ಚಿತ್ರಿಸಲಾಗಿದೆ. ಆಗಿನ ಸಮಾಜದಲ್ಲಿ ಜನಸಾಮಾ ನ್ಯರ ಸಮಸ್ಯೆ, ಜವಾಬ್ದಾರಿಗಳನ್ನು ಚರ್ಚಿಸುತ್ತಿರುವ ದೃಶ್ಯವದು. ಇನ್ನೊಂದು ಉಬ್ಬು ಚಿತ್ರದಲ್ಲಿ ಅಂತರ್ಜಾತಿ ವಿವಾಹ ನಂತರ ನಡೆದ ಘಟನೆಗಳನ್ನು ಬಿಂಬಿಸಲಾಗಿದೆ.

ಶಿಲ್ಪದ ಬಗ್ಗೆ ಶಿಲ್ಪಿಯ ಭಾವ ಏನು?

ನನಗೆ ತುಂಬಾ ಸಂತೋಷ ಆಯಿತು. ಭಾರತೀಯ ಶಿಲ್ಪವನ್ನು ಯೂರೋಪಿಯನ್ನರು ಹೇಗೆ ಒಪ್ಪುತ್ತಾರೆ ಎಂಬ ಕುತೂಹಲವೂ ಇತ್ತು. ನಾವು ಮುಖ್ಯವಾಗಿ ಇಲ್ಲಿನ ಶೈಲಿಯನ್ನು ಬಿಂಬಿಸಬೇಕಿತ್ತು. ನಮ್ಮ ಕಲೆ ಯಾವ ಮಟ್ಟದಲ್ಲಿದೆ ಎಂದೂ ತೋರಿಸಬೇಕಿತ್ತು. ಅದೇ ಸವಾಲಿನ ಕೆಲಸ. ಹಲವು ಮಾಡೆಲ್ ಗಳನ್ನು ರಚಿಸಿ, ಅಂತಿಮ ಹಂತಕ್ಕೆ ತಂದೆವು. ಮುಖಭಾವ, ವ್ಯಕ್ತಿತ್ವ ಇತ್ಯಾದಿ ಅಂಶಗಳ ಬಗ್ಗೆ ವೀರಶೈವ ಲಿಂಗಾಯಿತ ಗುರುಗಳಿಗೆ ಈ ಮಾಡೆಲ್‍ಗಳನ್ನು ತೋರಿಸಿ, ಎಲ್ಲರ ಒಪ್ಪಿಗೆ ಪಡೆದ ಮೇಲೆಯೇ ಅಂತಿಮ ಗೊಳಿಸಲಾಯಿತು.

ನೀವು ಈ ಹಿಂದೆ ಮಾಡಿದ ಬಸವಣ್ಣನ ಶಿಲ್ಪಕ್ಕೂ, ಈ ಶಿಲ್ಪಕ್ಕೂ ಭಿನ್ನತೆ ಏನು?  
ಬಸವಕಲ್ಯಾಣದಲ್ಲಿ ಬಸವಣ್ಣನ 100 ಅಡಿ ಶಿಲ್ಪವನ್ನೂ ಮಾಡಿದ್ದೇವೆ. ಜನರ ಪ್ರತಿಕ್ರಿಯೆ ಗಮನಿಸಿದ್ದೆವು. ಅಲ್ಲಿ ಅವರ ಮುಖ ಭಾವ, ವ್ಯಕ್ತಿತ್ವ ಎಲ್ಲವೂ ಸರಿಯಾಗಿದೆ ಎಂಬ ಅಭಿಪ್ರಾಯ ಬಂದ ನಂತರ ಅದರ ಆಧಾರದಲ್ಲಿಯೇ ಈ ಕಂಚಿನ ಶಿಲ್ಪ ಮಾಡಿದೆ. ಮೊದಲು ನಮ್ಮ ಜನರು ಒಪ್ಪಬೇಕಿತ್ತು. ಒಪ್ಪಿದ್ದಾರೆ. ಸಮಾಧಾನ ಸಿಕ್ಕಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT