ಜಿಲ್ಲಾ ಸುದ್ದಿ

ಬಲೆ ತುಂಡರಿಸುತ್ತಿರುವ ಮೊಸಳೆ

Srinivasamurthy VN

ಗೋಣಿಕೊಪ್ಪಲು: ತಿತಿಮತಿಯ ಹೊಲವೊಂದರ ಕೆರೆಯಲ್ಲಿ ಮೊಸಳೆ ತನಗಾಗಿ ಬೀಸಿದ ಬಲೆಯನ್ನೇ ತುಂಡರಿಸುತ್ತಿದೆ.

ಹುಣಸೂರಿನ ಮಹದೇವ ಮತ್ತು ತಂಡ ದಿನಪೂರ್ತಿ ಶ್ರಮವಹಿಸಿದರೂ ಮೊಸಳೆ ಕೆರೆಯಲ್ಲಿಯೇ ಅವಿತು ಪ್ರತಿರೋಧ ಒಡ್ಡುತ್ತಿದೆ. ಬಲೆ ತುಂಡಾಗಿರುವ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿದೆ.  ಹುಣಸೂರಿನಿಂದ ಹೊಸ ಬಲೆ ಮತ್ತೊಮ್ಮೆ ಸಿದ್ಧಪಡಿಸಿ ತಂದ ನಂತರವೇ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ಮೊಸಳೆ ಮೀನುಗಳನ್ನು ಭಕ್ಷಿಸುತ್ತಿರುವ ಬಗ್ಗೆ ಕೆರೆಯಲ್ಲಿ ಮೀನು  ಮರಿಗಳನ್ನು ಬೆಳೆಸಿದ್ದ ಕೃಷಿಕ ರವೀಂದ್ರ ದುಃಖ ವ್ಯಕ್ತಪಡಿಸಿದ್ದಾರೆ.

SCROLL FOR NEXT