ನ್‍ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್‍ನ ಸಂಯೋಜಕ ಲಿಯೋ, ಎಫ್ ಸಲ್ಡಾನಾ 
ಜಿಲ್ಲಾ ಸುದ್ದಿ

ಮರಗಳ ಮಾರಣ ಹೋಮಕ್ಕೆ ವಿರೋಧ, ಸಭೆ ಅರ್ಧಕ್ಕೆ ಮೊಟಕು

ಮೆಟ್ರೋ 2ನೇ ಹಂತ ಕಾಮಗಾರಿಗೆ ಬಲಿಯಾಗುತ್ತಿದ್ದ ಮರಗಳ ಹನನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ...

ಬೆಂಗಳೂರು: ಮೆಟ್ರೋ 2ನೇ ಹಂತ ಕಾಮಗಾರಿಗೆ ಬಲಿಯಾಗುತ್ತಿದ್ದ ಮರಗಳ ಹನನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಸರಿಯಾದ ಯೋಜನ ಇಲ್ಲದೇ ಜನರ ಕಣ್ಣಿಗೆ ಮಣ್ಣೆರಚಿ  ಮರಗಳನ್ನು ಕಡಿದು, ಮೆಟ್ರೋ 2ನೇ ಹಂತದ ಕಾಮಗಾರಿಗೆ ಚಾಲನೆ ನೀಡಲು ಮುಂದಾಗಿದ್ದ ಬಿಬಿಎಂಪಿ ಹಾಗೂ ಬಿಎಂಆರ್‍ಸಿಎಲ್ ಅಧಿಕಾರಿಗಳ ಯೋಜನೆಗೆ ಹಿನ್ನಡೆಯಾಗಿದೆ.

`ಟೌನ್ ಆ್ಯಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆ' ಅಡಿ ಯೋಜನೆ ಸಿದ್ಧವಾಗಿಲ್ಲದ ಕಾರಣ ಮರಗಳಿಗೆ ಸದ್ಯಕ್ಕೆ ಕೊಡಲಿ ಬೀಳುವುದು ತಪ್ಪಿದೆ. ಈ ಕಾಯ್ದೆ ಅಡಿ ಸಮಗ್ರ ಮಾಹಿತಿಯನ್ನು ತಂದು ನಂತರ ಚರ್ಚೆಗೆ ಬರುವಂತೆ ಸಾರ್ವಜನಿಕರು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ನಗರದ ವೈಯಾಲಿ ಕಾವಲ್‍ನ ಬಿಬಿಎಂಪಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ `ಮೆಟ್ರೋ 2ನೇ ಹಂತಕ್ಕೆ ಮರಗಳ ಹನನ ಕುರಿತು ಚರ್ಚೆ ' ಕಾರ್ಯಕ್ರಮವನ್ನು ಅರ್ಧಕ್ಕೆ ಮೊಡಕುಗೊಳಿಸಲಾಯಿತು.

ನಗರ ಹಸಿರೀಕರಣ, `ಟೌನ್ ಆ್ಯಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆ' ಅಡಿ ಯೋಜನೆ ಸಿದ್ಧವಾಗಿಲ್ಲ. ನಮ್ಮ ಮುಖಕ್ಕೆ ಮಂಕುಬೂದಿ ಎರಚುವ ಬಿಎಂಆರ್‍ಸಿಎಲ್ ಅಧಿಕಾರಿಗಳು, ಚರ್ಚೆಯಲ್ಲಿ ತಾವು ಹೇಳುವುದೊಂದು ನಂತರ ಮಾಡುವುದೊಂದು. ಹಾಗಾಗಿ ಈ ಬಗ್ಗೆ
ಸಮಗ್ರ ಯೋಜನೆ ಸಿದ್ಧಪಡಿಸಿ ತಮಗೆ ಮಾಹಿತಿ ನೀಡಬೇಕು. ಅದುವರೆಗೂ ತಾವು ಯಾವುದೇ ಕಾರಣಕ್ಕೂ ಮರಗಳನ್ನು ಕತ್ತರಿಸಲು ಬಿಡುವುದಿಲ್ಲ ಎಂದು ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಪಟ್ಟುಹಿಡಿದರು. ಇದರಿಂದ ತಬ್ಬಿಬ್ಬಾದ ಮೆಟ್ರೋ ಹಾಗೂ ಬಿಬಿಎಂಪಿ
ಅಧಿಕಾರಿಗಳು, ಅಲ್ಲಿ ನೆರೆದಿದ್ದವರಿಗೆ ಸೂಕ್ತ ಉತ್ತರ ನೀಡಲು ಸಾಧ್ಯವಾಗದೆ ಮುಂದಿನ ದಿನಗಳಲ್ಲಿ ಸಭೆ ಕರೆದು `ಮರಗಳ ಹನನ'ದ ಬಗ್ಗೆ ಚರ್ಚಿಸಲಾಗುವುದು ಎಂದು ಸಭೆಯನ್ನು ಮುಕ್ತಾಯಗೊಳಿಸಿದರು.

ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿಗಳು: ಮೆಟ್ರೋ 2ನೇ ಹಾಗೂ 4ನೇ ಹಂತದಲ್ಲಿ ಒಟ್ಟು 425 ಮರಗಳಿಗೆ ಕೊಡಲಿ ಹಾಕಲು ಬಿಬಿಎಂಪಿಗೆ ಬಿಎಂಆರ್‍ಸಿಎಲ್ ಪತ್ರ ಬರೆದಿತ್ತು. ಆ ಪ್ರಕಾರ ಬಿಬಿಎಂಪಿ ಅಧಿಕಾರಿಗಳು ಸಹ ಮರ ಕಡಿಯಲು ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ಕರೆಯಲಾಗಿತ್ತು. ಈ ವೇಳೆ ಯೋಜನೆ ಬಗ್ಗೆ ಮಾತನಾಡಿದ ಮೆಟ್ರೋ ಅಧಿಕಾರಿ ಕಲಾಸ್ವಾಮಿ ನಾಯಕ್, ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ, ಹಾಗೂ ಪುಟ್ಟೇನಹಳ್ಳಿಯಿಂದ  ಅಂಜನಾಪುರದವರಗೆ ಮರಗಳನ್ನು  ಕತ್ತರಿಸಲು ಬಿಎಂಆರ್‍ಸಿಎಲ್ ಸಜ್ಜಾಗಿದೆ. ಮರಗಳನ್ನು ಸಹ ಈಗಾಗಲೇ ಗುರುತಿಸಲಾಗಿದೆ. ಇತರೆ ಸಾರಿಗೆಗಳಿಗೆ ಹೋಲಿಸಿದರೆ ಮೆಟ್ರೋ ಉತ್ತಮ ಎಂದು ಹೇಳುತ್ತಾ ತಮ್ಮ ಮಾತು ಮುಂದುವರಿಸಿದರು. ಅಷ್ಟರಲ್ಲಿ ಅವರ ವಿವರಣೆ ಪ್ರಶ್ನಿಸಿದ ಎನ್‍ವಿರಾನ್‍ಮೆಂಟ್ ಸಪೋರ್ಟ್ ಗ್ರೂಪ್‍ನ
ಸಂಯೋಜಕ ಲಿಯೋ, ಎಫ್ ಸಲ್ಡಾನಾ, ಮೆಟ್ರೋ ಸೇಫ್. ಸೇಫ್ ಅಲ್ಲ ಎಂಬಿತ್ಯಾದಿ ಬಗ್ಗೆ ಮಾಹಿತಿ ತಮಗೆ ಬೇಡ,'ಎಂದರು. ಮೆಟ್ರೋ 2 ಮತ್ತು 4ನೇ ಹಂತದ ಕಾಮಗಾರಿಗೆ ಕಡಿಯುವ ಮರಗಳು ಎಷ್ಟು? ಎಲ್ಲೆಲ್ಲಿ ಎಂಬ ಬಗ್ಗೆ ತಮಗೆ ಸಂಪೂರ್ಣ ವಿವರ ನೀಡಿ'
ಎಂದರು.

ಆದರೆ, ಪ್ರಶ್ನೆಗೆ ಸರಿಯಾದ ಉತ್ತರ ದೊರಕದ ಕಾರಣ ವಾಗ್ದಾದಕ್ಕಿಳಿದು ತಾಂತ್ರಿಕ ಮಾಹಿತಿ ನೀಡಿ. ಹತ್ತಾರು ವರ್ಷ, ನೂರಾರು ವರ್ಷದ ಮರ ಕತ್ತರಿಸುತ್ತೀರಿ. ಆದರೆ ನೀವು ಮತ್ತೆ ಮರ ನೆಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT