ರೇವಣ್ಣ ಆಲಿಯಾಸ್ ರೇವಣಸಿದ್ದಪ್ಪ 
ಜಿಲ್ಲಾ ಸುದ್ದಿ

ಕವಿಮನೆಯಲ್ಲಿ ಕಳವು; ವ್ಯಕ್ತಿ ವಶ

ಕುಪ್ಪಳಿಯ ಕವಿಮನೆಯಲ್ಲಿ ಕುವೆಂಪು ಅವರ ಪದ್ಮ ಪ್ರಶಸ್ತ ಪದಕಗಳನ್ನು ಕಳವು ಮಾಡಿದ್ದ ಅನುಮಾನದ ಮೇಲೆ ಪೊಲೀಸರು ದಾವಣಗೆರೆ ಮೂಲದ ವ್ಯಕ್ತಿಯೊಬ್ಬನನ್ನು...

ಶಿವಮೊಗ್ಗ:  ಕುಪ್ಪಳಿಯ ಕವಿಮನೆಯಲ್ಲಿ ಕುವೆಂಪು ಅವರ ಪದ್ಮ ಪ್ರಶಸ್ತ ಪದಕಗಳನ್ನು  ಕಳವು ಮಾಡಿದ್ದ ಅನುಮಾನದ ಮೇಲೆ ಪೊಲೀಸರು ದಾವಣಗೆರೆ ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ದಾವಣಗೆರೆ ಸಮೀಪದ ಆನ ಗೋಡಿನ  ಕಾಯಕದ ರೇವಣ್ಣ ಆಲಿಯಾಸ್  ರೇವಣಸಿದ್ದಪ್ಪ ಎಂಬಾತ ನನ್ನು ವಶಕ್ಕೆ ಪಡೆದಿದ್ದಾರೆ. ಈತನ
ವಿರುದ್ಧ ನ್ಯಾಮತಿ, ರಿಪ್ಪನ್  ಪೇಟೆ,  ದಾವಣಗೆರೆ  ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಈತ ಪದೇ ಪದೆ ಹಲವೆಡೆ ಕಳವು ಮಾ ಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಅಜ್ಞಾತ ಸ್ಥಳದಲ್ಲಿ ಈತನ ವಿಚಾರಣೆ ನಡೆಯುತ್ತಿದೆ. ಘಟನೆ ಸೋಮವಾರ ತಡರಾತ್ರಿ ಕುಪ್ಪಳಿಯ  ಕವಿ ಮನೆಯಲ್ಲಿ ನಡೆದಿತ್ತು. ಇಲ್ಲಿ ಪ್ರದರ್ಶನಕ್ಕಿಟ್ಟಿದ್ದ ಕುವೆಂಪು  ಅವರಿಗೆ ಭಾರತ ಸರ್ಕಾರ  ಪ್ರದಾನ ಮಾಡಿದ್ದ ಪದ್ಮಭೂಷಣ, ಪದ್ಮ ವಿಭೂಷಣ  ಹಾಗೂ ವಿಶ್ವವಿದ್ಯಾಲಯ ನೀಡಿದ್ದ ಎರಡು ಪದಕಗಳನ್ನು ಅಪಹರಿಸಲಾಗಿತ್ತು.ಕವಿಮನೆಯೊಳಗೆ ಚಾವಣಿ ಮೂಲಕ ಅಕ್ರಮ ಪ್ರವೇಶ ಮಾಡಿದ್ದ ದುಷ್ಕರ್ಮಿ ಪದಕಗಳನ್ನು ಪ್ರದರ್ಶ ನಕ್ಕೆ ಇಡಲಾಗಿದ್ದ ಕಪಾಟಿನ ಗಾಜು ಗಳನ್ನು ಒಡೆದು ಅಪಹರಿಸಿದ್ದ. ಅಲ್ಲದೇ ಸಿಸಿ ಕ್ಯಾಮೆರಾಗಳನ್ನು ಧ್ವಂಸ ಮಾಡಿದ್ದ ಸಿಸಿ ಕ್ಯಾಮೆರಾ ದಲ್ಲಿ ದಾಖಲಾದ ಮುಖಚರ್ಯೆಯು ಪೊಲೀಸ ರಿಗೆ ಸಿಕ್ಕ ಮುಖ್ಯ ಸುಳಿವಾ ಗಿದ್ದು. ಈ ಜಾಡಿನಲ್ಲಿ ಸಾಗಿದ ಪೊಲೀಸರು ರೇವಣ್ಣ ಎಂಬಾತನನ್ನು ವಶಕ್ಕೆ  ಪಡೆದಿದ್ದಾರೆ. ಎಸ್ ಪಿ ರವಿ ಡಿ. ಚೆನ್ನಣ್ಣವರ್ ಅವರು ಕಳವಿಗೆ ಸಂಬಂಧಪಟ್ಟಂತೆ ತನಿಖೆಗೆ ಅಪರ ಜಿಲ್ಲಾ ರಕ್ಷಣಾಧಿಕಾರಿ ವಿಷ್ಣು ವರ್ಧನ್ ನೇತೃತ್ವದಲ್ಲಿ ಇಬ್ಬರು ಡಿವೈಎಸ್ಪಿ, ನಾಲ್ವರು ವೃತ್ತ ನಿರೀಕ್ಷಕರ ತಂಡ ರಚಿಸಿದ್ದರು.
ಕಳ್ಳತನವೇ ಕಾಯಕ: ರೇವಣ್ಣನ ವಿರುದ್ಧ  ದಾವಣಗೆರೆ ಮತ್ತಿತರ  ಜಿಲ್ಲೆಗಳಲ್ಲಿ ಮನೆ, ದೇವಸ್ಥಾನ ಸೇರಿದಂತೆ ವಿವಿಧೆಡೆ ಕಳ್ಳತನ ನಡೆಸಿದ ಪ್ರಕರಣಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT