ಕಬ್ಬನ್ ಉದ್ಯಾ ನದಲ್ಲಿ ಸಂಗೀತ, ನೃತ್ಯಗಳ ಸಂಗಮ (ಕೃಪೆ : ಕೆಪಿಎನ್ ) 
ಜಿಲ್ಲಾ ಸುದ್ದಿ

ಉದ್ಯಾನದಲ್ಲಿ ಸಂಗೀತ, ನೃತ್ಯದ ಸಂಗಮ

ಪ್ರತಿ ಭಾನುವಾರ ನಗರದ ಕಬ್ಬನ್ ಉದ್ಯಾ ನದಲ್ಲಿ ಸಂಗೀತ, ನೃತ್ಯಗಳ ಸಂಗಮ. ಪ್ರತಿ ವಾರವೂ ವಿಶೇಷ ಕಾರ್ಯಕ್ರಮಗಳು ವಾಯುವಿಹಾರಿಗಳಿಗೆ...

ಬೆಂಗಳೂರು: ಪ್ರತಿ ಭಾನುವಾರ ನಗರದ ಕಬ್ಬನ್ ಉದ್ಯಾ ನದಲ್ಲಿ ಸಂಗೀತ, ನೃತ್ಯಗಳ ಸಂಗಮ. ಪ್ರತಿ ವಾರವೂ ವಿಶೇಷ ಕಾರ್ಯಕ್ರಮಗಳು ವಾಯುವಿಹಾರಿಗಳಿಗೆ ಮುದನೀಡುತ್ತಿವೆ. ಈ ವಾರವೂ ಉದ್ಯಾನದಲ್ಲಿ ಉದಯ ರಾಗ ಕಾರ್ಯಕ್ರಮದಲ್ಲಿ ಗಂಗಾಧರ ಸ್ವಾಮಿ ಮತ್ತು ತಂಡದವರಿಂದ ಭಕ್ತಿಗೀತೆ ಹಾಗೂ ಜನಪದಗೀತೆಗಳ ಗಾಯನ ನಡೆಯಿತು.ಬೆಳಗ್ಗೆ 7ರಿಂದ ಯೂನಿವರ್ಸ್ ಆರ್ಟ್  ಫೌಂಡೇಶನ್ ಸಹಯೋಗದಲ್ಲಿ ಆರತಿ ವಿಜಯಕುಮಾರ್ ಅವರಿಂದ ಭರತನಾಟ್ಯ,ದಿ ಸಂಸ್ಕೃತಿ ಟೆಂಪಲ್ ಆಫ್  ಆರ್ಟ್ ವತಿಯಿಂದ ನೃತ್ಯ ಪ್ರದರ್ಶನ ಮತ್ತು ಗುರುನಾಗಶ್ರೀ ಅವರಿಂದ ಜಾನಪದ ನೃತ್ಯ ಕಾರ್ಯಕ್ರಮ ಉದ್ಯಾನಕ್ಕೆ ಮೆರುಗು ನೀಡಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಅಕ್ಷಯ ಫೌಂಡೇಶನ್ ವತಿಯಿಂದ ಕನ್ನಡ ಪ್ರಾಧ್ಯಾಪಕ ರವಿಕುಮಾರ್ ನಿಹಾ ಅವರಿಂದ ಶಾಂತಕವಿಯ ಕನ್ನಡ ಪರಿಕಲ್ಪನೆ ಕುರಿತು ವಿಶೇಷ ಉಪನ್ಯಾಸ, ಇದರೊಂದಿಗೆ ರೇಷ್ಮೆ ಇಲಾಖೆಯಿಂದ ರೇಷ್ಮೆಗೂಡಿನಿಂದ ಮಾಡಿದ ವಿವಿಧ ವಿನ್ಯಾಸದ ಹಾರಗಳು, ಅಲಂಕಾರಿಕ ಮತ್ತು ಇತರೆ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಆಯೋಜನೆಗೊಂಡಿತ್ತು.
ಬೆಳಗ್ಗೆ 9ರಿಂದ 12ರವರೆಗೆ ತಾರಸಿ, ಕೈತೋಟ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು ಪ್ರಾತ್ಯಕ್ಷಿಕೆ ಮತ್ತು ತರಬೇತಿ ನೀಡಿದರು. ಉದ್ಯಾನದ ಆವರಣದಲ್ಲಿ ದಿಲನರ್ಸರಿ ಮೆನ್ ಕೋಆಪರೇಟಿವ್ಸೊ ಟೈಟಿಯಿಂದ ವಿವಿಧ ಅಲಂಕಾರಿಕ ಗಿಡಗಳು ಮತ್ತು ಉದ್ಯಾನ ಸಲಕರಣೆ ಮಾರಾಟ ಕಾರ್ಯಕ್ರಮ ಉಪಯುಕ್ತವಾಗಿತ್ತು. ಉದ್ಯಾನದ ಸಂಧ್ಯಾರಾಗದಲ್ಲಿ ಕುಮಾರ್ ಎಚ್.ಎಸ್ ಮತ್ತು ತಂಡದಿಂದ ಜನಪದ, ಭಕ್ತಿಗೀತೆ ಮತ್ತು ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಕಬ್ಬನ್ ಉದ್ಯಾನದಲ್ಲಿ ಗೋಗ್ರೀನ್ ಸಂಸ್ಥೆಯಿಂದ ನಡೆದ ಮಧುಮೇಹ ಜಾಗೃತಿ ಸೈಕಲ್ ಜಾಥಾ ನಡೆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT