ಜಿಲ್ಲಾ ಸುದ್ದಿ

ವಿಷಾನಿಲ ಸೇವಿಸಿ 56 ಮಂದಿ ಅಸ್ವಸ್ಥ

Mainashree

ಬೆಂಗಳೂರು: ಸೋರಿಕೆಯಾದ ವಿಷಾನಿಲವನ್ನು ಸೇವಿಸಿದ 56 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ತುಮಕೂರು ರಸ್ತೆಯ ಪೀಣ್ಯದಾಸರಹಳ್ಳಿಯ ಚೊಕ್ಕಸಂದ್ರ ಕೊಳೆಗೇರಿಯಲ್ಲಿ ನಡೆದಿದೆ. 

ಸೋಮವಾರ ರಾತ್ರಿ 9.30ರ ಸುಮಾರಿಗೆ ರಸ್ತೆ ಹಾಗೂ ಮನೆಗಳಲ್ಲಿದ್ದ ಹಲವರು ಏಕಾಏಕಿ ಉಸಿರಾಡುತ್ತಲೇ\ ಅಸ್ವಸ್ಥರಾಗಿ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರು. 
ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣ ವಾಗಿದ್ದು ಅಸ್ವಸ್ಥಗೊಂಡವರನ್ನು ಕೂಡಲೇ ಕೆ.ಸಿ.ಜನರಲï ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಪಡೆದ ಜನರು ಬಳಿಕ ಮನೆಗೆ ಮರಳಿದರು ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT