ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜುಕೃಷ್ಣನ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಮೋದಿಯ ಅಚ್ಛೇ ದಿನ್ ಬರಲೇ ಇಲ್ಲ: ವಿಜುಕೃಷ್ಣನ್

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಜನರ ಪಾಲಿಗೆ ಅಚ್ಛೇ ದಿನ್ ಬರಲಿಲ್ಲ. ಬದಲಿಗೆ ಬುರಾದಿನ್ (ಕೆಟ್ಟ ದಿನಗಳು) ಬಂದವು. ಇದಕ್ಕೆ ಕಾರಣ ಚುನಾವಣೆ ವೇಳೆ ಅವರು ರೈತರು, ರೈತ ಕೃಷಿಕರ ಪ್ರಗತಿಗೆ ನೀಡಿದ್ದ ಭರವಸೆಗಳನ್ನು...

ಬೆಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಜನರ ಪಾಲಿಗೆ ಅಚ್ಛೇ ದಿನ್ ಬರಲಿಲ್ಲ. ಬದಲಿಗೆ ಬುರಾದಿನ್ (ಕೆಟ್ಟ ದಿನಗಳು) ಬಂದವು. ಇದಕ್ಕೆ ಕಾರಣ ಚುನಾವಣೆ
ವೇಳೆ ಅವರು ರೈತರು, ರೈತ ಕೃಷಿಕರ ಪ್ರಗತಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸ ದೇ ಹೊಂದದ್ದು ಎಂದು ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜುಕೃಷ್ಣನ್ ಟೀಕಿಸಿದರು.

ಭಾನುವಾರ `ಕೃಷಿ ಬಿಕ್ಕಟ್ಟು ಮತ್ತು ಪರ್ಯಾಯ ಮಾರ್ಗಗಳು' ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ಮೋದಿ ದೇಶಾದ್ಯಂತ 400 ಕಡೆ ಮಾಡಿದ ಭಾಷಣದಲ್ಲಿ ರೈತರಿಗೆ ಹಲವು ಭರವಸೆ ನೀಡಿದ್ದರು. ಯಾವುದೂ ಈಡೇರಿಲ್ಲ ಎಂದು ಟೀಕಿಸಿದರು.

ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಕೇಂದ್ರ ಸರ್ಕಾರ ದೇಶದದ ಆಹಾರ ಭದ್ರತೆಯತ್ತ ಗಮನಹರಿಸುತ್ತಿಲ್ಲ. ಟನ್ ಕಬ್ಬಿಗೆ 3,500 ರು. ನಿಗದಿ ಮಾಡುವುದು ಸೂಕ್ತ ಎಂದು ವೈಜ್ಞಾನಿಕವಾಗಿ ಹೇಳಿದರೂ ಕ್ರಮ ಜರುಗಿಸಲಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT