(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ನಕಲಿ ದಾಖಲೆ ನೀಡಿ ಕೆಲಸಕ್ಕೆ ಸೇರಿದ್ದ!

ಎಟಿಎಂ ಘಟಕಕ್ಕೆ ತುಂಬಲು ತೆಗೆದುಕೊಂಡು ಹೋಗಿದ್ದ ರು.50 ಲಕ್ಷ ದೋಚಿ ಪರಾರಿಯಾಗಿರುವ ಆರೋಪಿ ಮಹೇಶ್ (21), ಬ್ರಿಂಕ್ಸ್ ಆರ್ಯ ಕಂಪನಿಗೆ ಸುಳ್ಳು ದಾಖಲೆ ನೀಡಿ ಕೆಲಸಕ್ಕೆ ಸೇರಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ...

ಬೆಂಗಳೂರು: ಎಟಿಎಂ ಘಟಕಕ್ಕೆ ತುಂಬಲು ತೆಗೆದುಕೊಂಡು ಹೋಗಿದ್ದ ರು.50 ಲಕ್ಷ ದೋಚಿ ಪರಾರಿಯಾಗಿರುವ ಆರೋಪಿ ಮಹೇಶ್ (21), ಬ್ರಿಂಕ್ಸ್ ಆರ್ಯ ಕಂಪನಿಗೆ ಸುಳ್ಳು ದಾಖಲೆ ನೀಡಿ ಕೆಲಸಕ್ಕೆ ಸೇರಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಬುಧವಾರ (ಅ.21) ಬೆಳಗ್ಗೆ 11.30ಕ್ಕೆ ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ವೃತ್ತದಲ್ಲಿರುವ ಇಂಡಸ್ ಇಂಡ್ ಬ್ಯಾಂಕ್ ಬಳಿ ಇರುವ ಎಟಿಎಂಗೆ ಬ್ರಿಂಕ್ಸ್ ಆರ್ಯ ಕಂಪನಿಯ ಮೇಲ್ವಿಚಾರಕ ಮಂಜುನಾಥ್, ಮಹೇಶ್, ಕಾರು ಚಾಲಕ ಪ್ರಭು ಮತ್ತು ಸೆಕ್ಯುರಿಟಿ ಗಾರ್ಡ್ ಮುತ್ತಣ್ಣ ಟಾಟಾ ಸುಮೋದಲ್ಲಿ ರು.1 ಕೋಟಿ ತಂದಿದ್ದರು. ಈ ವೇಳೆ ಮೂವರನ್ನು ಯಾಮಾರಿಸಿದ್ದ ಆರೋಪಿ ಮಹೇಶ್ ರು.50 ಲಕ್ಷ ದೋಚಿ ಪರಾರಿಯಾಗಿದ್ದ.

ಆತ ಕಂಪನಿಗೆ ನೀಡಿದ್ದ ದಾಖಲೆಗಳನ್ನು ಹಿಡಿದುಕೊಂಡು ಪೊಲೀಸರು ಆತನ ಮನೆ ಹುಡುಕಿಕೊಂಡು ಹೋಗಿದ್ದರು. ಆದರೆ, ಆ ವಿಳಾಸದಲ್ಲಿ ಮಹೇಶ್ ಹೆಸರಿನ ವ್ಯಕ್ತಿಯೇ ಇರಲಿಲ್ಲ. ಹೀಗಾಗಿ, ಆರೋಪಿಯ ಹೆಸರು ಮಹೇಶ ಎನ್ನುವುದು ಸುಳ್ಳಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT