ಕಿರಣ್ ಮಜುಂದಾರ್ ಷಾ 
ಜಿಲ್ಲಾ ಸುದ್ದಿ

ಇಂದಿನ ಯುಗವೇ ಸ್ಪರ್ಧಾತ್ಮಕ : ಬಯೋಕಾನ್ ಸಿಇಒ ಕಿರಣ್ ಮಜುಂದಾರ್ ಷಾ

ಇದು ಸಂಘರ್ಷದ ಕಾಲವಾಗಿದ್ದು, ನಾವು ಮಾಡುವ ಯಾವುದೇ ಕೆಲಸದಲ್ಲೂ ಸಂಘರ್ಷ ಎದುರಿಸುತ್ತಿರುವ ಅನುಭವವಾಗುತ್ತಿದೆ....

ಬೆಂಗಳೂರು: ಇದು ಸಂಘರ್ಷದ ಕಾಲವಾಗಿದ್ದು, ನಾವು ಮಾಡುವ ಯಾವುದೇ ಕೆಲಸದಲ್ಲೂ ಸಂಘರ್ಷ ಎದುರಿಸುತ್ತಿರುವ ಅನುಭವವಾಗುತ್ತಿದೆ ಎಂದು ಬಯೋಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಮಜುಂದಾರ್ ಷಾ ಅಭಿಪ್ರಾಯಪಟ್ಟರು. ಮೌಂಟ್  ಕಾರ್ಮೆಲ್ ಕಾಲೇಜಿನಲ್ಲಿ ಗುರುವಾರ ನಡೆದ ಹರಿ ಪರಮೇಶ್ವರ್ ರಚನೆಯ `ದಿ ಪಿಲ್ಲರ್ ಇನ್ವಿಸಿಬಲ್' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ``ನಾಗರಿಕರ ಬದ್ಧತೆ ಮತ್ತು ಸಕ್ರಿಯತೆ ಹೇಗಿರಬೇಕೆಂಬುದರಲ್ಲಿ ಸಂಘರ್ಷ ಏರ್ಪಡುತ್ತಿದೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಸಮನೆ ಓಡುತ್ತಿರುವ ಜನ ಜೀವನದಿಂದಾಗಿ ಸಂಘರ್ಷ ಏರ್ಪಟ್ಟಿರಬಹುದೆ ಎಂಬ ಸಂದೇಹ ಬರುತ್ತದೆ. ಸಮಾಜ ನಿರ್ಮಾಣದಲ್ಲಿ ಸಂವೇದನಶೀಲತೆಯನ್ನು ತರುವುದೇ ಸವಾಲಾಗುತ್ತಿದೆ ಎಂದರು. ``ಈ ಸಮಾಜವನ್ನು ನಾವೇ ಬದಲಾಯಿಸಲು ಸಾಧ್ಯವೇ ಎಂಬ ಪ್ರಶ್ನೆ ಎದುರಾದರೂ, ನಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾಗುವ ಕೆಲಸಗಳನ್ನಾದರೂ ಮಾಡಬೇಕು. ಉತ್ತಮ ಸಮಾಜದ ಕಲ್ಪನೆಗೆ ಬೆಂಗಳೂರು ನಗರ ಉದಾಹರಣೆಯಾಗಿ ಕಾಣಿಸುತ್ತಿದೆ. ಅದರ ಕುರುಹುಗಳನ್ನು ನಾನಿಲ್ಲಿ ಕಾಣುತ್ತಿದ್ದೇನೆ. ಈ ನಗರದ ಬೆಳವಣಿಗೆಗೆ ನನ್ನದೊಂದು ಕೊಡುಗೆ ಇರಲೇಬೇಕೆಂಬ ಆಸೆ ಚಿಗುರೊಡೆಯುತ್ತದೆ. ಹರಿ ರಚಿಸಿರುವ, `ರೂಮರ್ ಬುಕ್ಸ್ ಇಂಡಿಯಾ' ಪ್ರಕಾಶನದ `ದಿ ಪಿಲ್ಲರ್ ಇನ್ವಿಸಿಬಲ್' ಕೃತಿಯು ಇಂಥ ಸಾಧ್ಯತೆಗಳನ್ನು ಹುಟ್ಟುಹಾಕಿದೆ ಎಂದು ಶ್ಲಾಘಿಸಿದರು.

ಉದ್ಯಮಿ ಟಿ.ವಿ. ಮೋಹನ್‍ದಾಸ್ ಪೈ, ನಿವೃತ್ತ ಐಎಎಸ್ ಅಧಿಕಾರಿ ಎ. ರವೀಂದ್ರ,  ನಾಯರ್, ರೇವತಿ ಅಶೋಕ್, ಕೃತಿಯ ಕರ್ತೃ ಹರಿ ಪರಮೇಶ್ವರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT