ಪೇಜಾವರ ಶ್ರೀ, ಮುಖ್ಯಮಂತ್ರಿ ಸಿದ್ಧರಾಮಯ್ಯ 
ಜಿಲ್ಲಾ ಸುದ್ದಿ

ಬಹುಸಂಖ್ಯಾತರ ಮನ ನೋಯಿಸೋದು ಬೇಡ: ಪೇಜಾವರ ಶ್ರೀ

``ಹಿಂದೂಗಳು ಮಸೀದಿ ಮುಂದೆ ಹೋಗಿ ಹಂದಿ ಮಾಂಸ ಸಮಾರಾಧನೆ ಮಾಡ್ತೀವಿ ಅಂದ್ರೆ ಒಪ್ತೀರಾ?'' ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ...

ಧುತ್ತರಗಾಂವ್ (ಕಲಬುರಗಿ ಜಿಲ್ಲೆ):``ಹಿಂದೂಗಳು ಮಸೀದಿ ಮುಂದೆ ಹೋಗಿ ಹಂದಿ ಮಾಂಸ ಸಮಾರಾಧನೆ ಮಾಡ್ತೀವಿ ಅಂದ್ರೆ ಒಪ್ತೀರಾ?'' ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ನೇರ ಸವಾಲು ಹಾಕಿದ್ದಾರೆ.
 ಗೋಮಾಂಸ ಭಕ್ಷಣೆ ಕುರಿತ ಮುಖ್ಯಮಂತ್ರಿಗಳ ಹೇಳಿಕೆ ಬೇಸರ ತರಿಸಿದೆ. ಇಂತಹ ಹೇಳಿಕೆಗಳಿಂದ ಏನೂ ಸಾಧಿಸಲಾಗದು. ಬದಲಾಗಿ ವಿನಾಕಾರಣ ಚರ್ಚೆಗೆ ಯಾಕೆ ವೇದಿಕೆ ಹುಟ್ಟುಹಾಕಬೇಕು ಎಂದು ಪ್ರಶ್ನಿಸಿದರು.

ನಾಡಿನ ಮುಖ್ಯಮಂತ್ರಿಯಾದವರು ಹಿಂದೂಗಳ ಮನ ನೋಯುವಂತೆ ಹೇಳಿಕೆ ನೀಡುವುದು ಅವರಿಗಿರುವ ಹುದ್ದೆಗೆ ಶೋಭೆ ತರುವಂಥದ್ದಲ್ಲ. ಗೋಮಾಂಸ ಭಕ್ಷಣೆ ಬೇಡ.ಮದ್ಯಪಾನ, ದುವ್ರ್ಯಸನಗಳನ್ನು ಮಾಡಬೇಡಿ ಎಂದು ಹೇಳುವುದು ಮಠಾಧೀಶರ ಕರ್ತವ್ಯ. ಸಿಎಂ ಆಗಿದ್ದೂ ಹಿಂದೂಗಳ ಮನ ನೋಯಿಸುವಂತಹ ಹೇಳಿಕೆ ನೀಡಿರುವುದರಿಂದ ಸಿದ್ದರಾಮಯ್ಯನವರ ಬಗ್ಗೆ ನನಗಂತೂ ಬೇಸರವಾಗಿ ದೆ. ಗೋಮಾಂಸ ಭಕ್ಷಣೆ ವಿಚಾರ ಅವರವರ ಇಷ್ಟಕ್ಕೆ ಬಿಟ್ಟದ್ದು. ಉಪದೇಶ ನೀಡುತ್ತೇವೆ, ಸ್ವೀಕಾರ ಮಾಡುವುದು,ಬಿಡುವುದು ಅವರವರಿಗೆ ಬಿಟ್ಟ ಸಂಗತಿ ಎಂದರು.

ಚರ್ಚೆಗೆ ಬಾರದ ಭಗವಾನ್: ಕೃಷ್ಣ- ರಾಮರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಸಾಹಿತಿ ಭಗವಾನ್ ಅವರಿಗೆ ಸಾಕಷ್ಟು ಬಾರಿ ಉತ್ತರಿಸಿಯಾಗಿದೆ. ಅವರು ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಬಹಿರಂಗ ಚರ್ಚೆ ಮಾಡೋಣ ಎಂದು ಆಹ್ವಾನಿಸಿದರೂ ಬರುತ್ತಿಲ್ಲ ಎಂದರು.ಹಿಂದೂಗಳ ನಂಬಿಕೆಗಳ ಬಗ್ಗೆ ಹಾಗೂ ಕೃಷ್ಣ-ರಾಮರ ಬಗ್ಗೆ ಸಲ್ಲದ ಹೇಳಿಕೆ ನೀಡುವ ಸಾಹಿತಿಗಳು- ಬುದ್ಧಿ ಜೀವಿಗಳ ಹಾಗೂ ಗೋಮಾಂಸ ಭಕ್ಷಣೆ ವಿಚಾರದಲ್ಲಿನ ಸಲ್ಲದ ಹೇಳಿಕೆಗಳು ಪದೇ ಪದೇ ಪ್ರತಿಧ್ವನಿತವಾಗುತ್ತಿರುವುದರಿಂದ ಹಿಂದೂಗಳಲ್ಲಿ ಜಾಗೃತಿ ಮೂಡುತ್ತಿದೆ ಎಂದರು.

ರಾಜ್ಯಪಾಲರಿಗೆ ದೂರು: ಗೋಮಾಂಸ ಹೇಳಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವ ಜೊತೆಗೆ, ಕಾನೂನು ಹೋರಾಟ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮೈಸೂರಿನಲ್ಲಿ ಹೇಳಿದರು.

ಗೋಮಾಂಸ ಭಕ್ಷಣೆ ಕುರಿತಂತೆ ಸಂವಿಧಾನ ವಿರೋಧಿಯಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ 5ನೇ ತರಗತಿಗೆ ಸೇರಿದ್ದರಿಂದ ಪುಣ್ಯಕೋಟಿ ಕಥೆ ಓದಿಲ್ಲ. ಗೋಮಾಂಸ ಭಕ್ಷಣೆ ಕುರಿತು ಅವರು ನೀಡಿರುವ ಹೇಳಿಕೆ ಸರಿಯಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.ಗೋಮಾಂಸ ಭಕ್ಷಣೆ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆಗೆ ಅವರ ಪತ್ನಿಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ತಿನ್ನೋದು ಗೊತ್ತಿರಲಿಲ್ಲ
ಕಾರ್ಕಳ: `ಕುರುಬರು ಕುರಿ ತಿನ್ನುತ್ತಾರೆ ಎಂದು ಕೇಳಿದ್ದೇವೆ. ಆದರೆ, ಗೋಮಾಂಸ ತಿನ್ನುತ್ತಾರೆ ಎಂಬುವುದು ನನಗೆ ತಿಳಿದಿರಲಿಲ್ಲ' ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ. ಅವರು ಬಿಜೆಪಿ ವತಿಯಿಂದ ಬಸ್ ನಿಲ್ದಾಣದಲ್ಲಿ ಗೋ ಮಾಂಸದ ಕುರಿತು ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿ ಶನಿವಾರ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ಒಬ್ಬ ಮುಖ್ಯಮಂತ್ರಿ ಗೋಮಾಂಸ ತಿನ್ನುತ್ತಾರೆ ಎಂದು ಹೇಳುವುದಾದರೆ ಕಸಾಯಿಖಾನೆಗೆ ಬೆಂಬಲ ನೀಡುತ್ತೇನೆ ಎನ್ನುವ ಅರ್ಥವಾಯಿತು. ಮುಂದಿನ ವಿಧಾನ ಸಭೆ ಅಧಿವೇಶನ ಈ ಹೇಳಿಕೆಯ ಮುಖಾಂತರ ಆರಂಭವಾಗುತ್ತದೆ ಎನ್ನುವುದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು. ಈ ಹೇಳಿಕೆಯನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT