ಜಂಬೂ ಸವಾರಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ವಿಶ್ವವಿಖ್ಯಾತ ಜಂಬೂ ಸವಾರಿಗೆ ರು. 89 ಲಕ್ಷ ವಿಮೆ

ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಗೆ ಜಿಲ್ಲಾ ಆಡಳಿತ ಬರೋಬ್ಬರಿ 89 ಲಕ್ಷ ರುಪಾಯಿಗಳ...

ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಗೆ ಜಿಲ್ಲಾ ಆಡಳಿತ ಬರೋಬ್ಬರಿ 89 ಲಕ್ಷ ರುಪಾಯಿಗಳ ವಿಮೆ ಮಾಡಿಸಿದೆ.

ಜಂಬೂ ಸವಾರಿಯಲ್ಲಿ ಭಾಗವಹಿಸುವ ಅರ್ಜುನ್ ನೇತೃತ್ವದ ಮಾವುತರು, ಕಾವಾಡಿಗಳು ಹಾಗೂ ಆನೆಗಳಿಂದ ಉಂಟಾಗಬಹುದಾದ ಆಸ್ತಿ ಮತ್ತು ಜೀವಹಾನಿ ಪರಿಹಾರಕ್ಕಾಗಿ ಒಟ್ಟು 89 ಲಕ್ಷ ರುಪಾಯಿಗಳ ವಿಮೆ ಮಾಡಿಸಲಾಗಿದೆ.

ಇದು ಅಲ್ಪಾವಧಿಯ ವಿಮೆಯಾಗಿದ್ದು, ಸೆಪ್ಟೆಂಬರ್ 3ರಿಂದ ಅಕ್ಟೋಬರ್ 30ರವರೆಗೆ ಜಾರಿಯಲ್ಲಿರುತ್ತದೆ. ಈ ಸಂಬಂಧ ಜನರಲ್ ವಿಮಾ ಕಂಪನಿಗೆ 55 ಸಾವಿರ ರುಪಾಯಿ ಪ್ರಿಮಿಯಂ ಕಟ್ಟಲಾಗಿದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಕಮಲಾ ಅವರು ತಿಳಿಸಿದ್ದಾರೆ.

ಈ ಬಾರಿ ಅರ್ಜುನ್ ನೇತೃತ್ವದಲ್ಲಿ 12 ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದು,  ಗಜಪಡೆಗೆ 35 ಲಕ್ಷ ರು., ಆನೆಗಳ ಉಸ್ತುವಾರಿ ನೋಡಿಕೊಳ್ಳಲು ಆಗಮಿಸಿರುವ 24 ಮಂದಿ ಮಾವುತ ಹಾಗೂ ಕಾವಾಡಿಗಳಿಗೆ 24 ಲಕ್ಷ ರು. ಹಾಗೂ ಆನೆಗಳಿಂದ ಉಂಟಾಗಬಹುದಾದ ಆಸ್ತಿಪಾಸ್ತಿ ನಷ್ಟಕ್ಕೆ 30 ಲಕ್ಷ ರುಪಾಯಿ ವಿಮೆ ಮಾಡಿಸಲಾಗಿದೆ.

ಎರಡು ತಿಂಗಳ ಕಾಲ ಬೆಳಗ್ಗೆ-ಸಂಜೆ ಜಂಬೂಸವಾರಿ ನಡೆಯುವ ಮಾರ್ಗದಲ್ಲಿ, ಆರಮನೆ ಬಳಿ ಆನೆಗಳ ಜಂಬೂ ಸವಾರಿ ತಾಲೀಮು ನಡೆಸುವ 12 ಮಾವುತರು ಹಾಗೂ 12 ಕಾವಾಡಿಗಳಿಗೆ ತಲಾ 1 ಲಕ್ಷ ರು. ನಂತೆ 24 ಲಕ್ಷ ರು. ವಿಮೆ ಮಾಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕೋರ್ಟ್‌ನಲ್ಲಿ ಮುಟ್ಟಿನ ರಜೆ ಸಮರ್ಥಿಸಿಕೊಂಡ ಸರ್ಕಾರ; ವಿಚಾರಣೆ ಜನವರಿ 20 ಕ್ಕೆ ಮುಂದೂಡಿಕೆ

ಕೇಂದ್ರ ಅರಣ್ಯ ಇಲಾಖೆಯಿಂದ ಸಿಗದ ಅನುಮತಿ: ಎತ್ತಿನ ಹೊಳೆ ಯೋಜನೆ ಮತ್ತಷ್ಟು ವಿಳಂಬ

ರಾಜ್ಯದ ಯುವ ಉದ್ಯೋಗಾಕಾಂಕ್ಷಿಗಳ ತಾಳ್ಮೆ ಪರೀಕ್ಷಿಸಬೇಡಿ: ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ

ಭಾರತ ಬ್ರಿಕ್ಸ್ ಕರೆನ್ಸಿ ಬೇಡ ಎಂದದ್ದೇಕೆ? (ಹಣಕ್ಲಾಸು)

'BJP– RSS ಭಿನ್ನಾಭಿಪ್ರಾಯದಿಂದ ಪಿತೂರಿ: ವೀರೇಂದ್ರ ಹೆಗ್ಗಡೆ ಅವರ ಮೇಲೆ ಷಡ್ಯಂತ್ರ; ನನ್ನ ನಿರ್ಧಾರಕ್ಕೆ ಜೈನ ಸಮುದಾಯದಿಂದ ಮೆಚ್ಚುಗೆ'

SCROLL FOR NEXT