ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಕೆಎಸ್ ಆರ್ ಟಿಸಿ ತರಬೇತಿ ನೌಕರರಿಗೆ ಭತ್ಯೆ ಹೆಚ್ಚಳ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತರಬೇತಿ ನೌಕರರಿಗೆ ಗೌರಿ ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ, ...

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತರಬೇತಿ  ನೌಕರರಿಗೆ ಗೌರಿ ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ, ನಿಗಮದಲ್ಲಿ  ಕೆಲಸ ಮಾಡುವ ತರಬೇತಿ ನೌಕರರ ಮಾಸಿಕ ಸಂಬಳ ಪರಿಷ್ಕರಿಸಿ ಹೆಚ್ಚಳ ಮಾಡಲಾಗಿದೆ. ಈ ಆದೇಶ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.

ಇದೇ ಮೊದಲ ಬಾರಿಗೆ ಶೇ. 30 ರಷ್ಟು ಭತ್ಯೆ ಹೆಚ್ಚಳ ಮಾಡಲಾಗಿದ್ದು ರಾಜ್ಯದ ನಾಲ್ಕೂ ನಿಗಮಗಳ 17 ಸಾವಿರ ಸಿಬ್ಬಂದಿಗೆ ಈ ಸೌಲಭ್ಯ ದೊರಕಲಿದೆ.  ಇದರಿಂದ ನಿಗಮಕ್ಕೆ ವಾರ್ಷಿಕ ರೂ. 60 ಕೋಟಿ ಹೆಚ್ಚುವರಿ ಹೊರೆಯಾಗಲಿದೆ.

ಯಾರಿಗೆ ಎಷ್ಟು ಹೆಚ್ಚಳ
ಸಂಚಾರ ನೀರಿಕ್ಷಕ, ಪಾರುಪತ್ತೆಗಾರ, ಸಿಬ್ಬಂದಿ, ಮೇಲ್ವಿಚಾರಕ,  ಅಂಕಿ ಅಂಶ ಪರೀಕ್ಷಕ. ಉಗ್ರಾಣ ರಕ್ಷಕ, ಕಿರಿಯ ಅಭಿಯಂತರ, ವಿಭಾಗೀಯ ಭದ್ರತಾ  ನಿರೀಕ್ಷಕರಿಗೆ ಸದ್ಯರೂ. 7 800ರಿಂದ 10.150.

ಸಹಾಯಕ ಉಗ್ರಾಣ ರಕ್ಷಕ ಸಹಾಯಕ ಲೆಕ್ಕಿಗ, ಕಿರಿಯ ಶೀಘ್ರ ಲಿಪಿಕಾರ, ಸ್ಟಾಫ್ ನರ್ಸ್ ಮತ್ತು ತತ್ಸಮಾನ ಹುದ್ದೆ ಸಿಬ್ಬಂದಿಗೆ ರೂ. 7.500 ರಿಂದ 9. 750

ಚಾಲಕರಿಗೆ ರೂ. 7.500ರಿಂದ 10 ಸಾವಿರಕ್ಕೆ, ನಿರ್ವಾಹಕ, ಚಾಲಕ ಕಮ್  ನಿರ್ವಾಹಕರಿಗೆ ರೂ. 7 ಸಾವಿರದಿಂದ ರೂ. 9.100

ದಿನ ನಿತ್ಯ ಬಳಕೆ ವಸ್ತುಗಳ ದರ ಹೆಚ್ಚಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ತರಬೇತಿ ನೌಕಕರರಿಗೆ ಸಂಬಳ ಕಡಿಮೆ ಇದ್ದು ಜೀವನ ಸಾಗಿಸುವುದು ಕಷ್ಟ. ಇದನ್ನು ಅರಿತ ನಿಗಮ ಇದೇ ಮೊದಲ ಬಾರಿಗೆ ಶೇ. 30 ರಷ್ಟು ಸಂಬಳ ಹೆಚ್ಚಿಸಿದೆ.

ರಾಜೇಂದ್ರ ಕುಮಾರ್ ಕಠಾರಿಯಾ
ಎಂ.ಡಿ. ಕೆಎಸ್ ಆರ್ ಟಿಸಿ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT