ಜಿಲ್ಲಾ ಸುದ್ದಿ

ಇರುವ ನ್ಯೂನತೆ ತೋರುತ್ತಿದ್ದೇನೆ: ಭಗವಾನ್ ಸ್ಪಷ್ಟನೆ

Shilpa D

ಬೆಂಗಳೂರು: ``ಹಿಂದೂ ಧರ್ಮದಲ್ಲಿ ಸಾಕಷ್ಟು ಕೊಳಕು ಭಾಗವಿದೆ ಅದನ್ನು ನಾನು ತೋರಿಸುತ್ತಿದ್ದೇನೆ,'' ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದಾರೆ.

ಭಾರತ ವಿದ್ಯಾರ್ಥಿ ಫೆಡರೇಷನ್  ಸೆಂಟ್ರಲ್ ಕಾಲೇಜಿನಲ್ಲಿ  ಏರ್ಪಡಿಸಿದ್ದ ಭಗತ್ ಸಿಂಗ್ ಕನಸಿವ ಭಾರತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾಮಾಜಿಕ ಸ್ಥರದಲ್ಲಿ  ಸಮಾನತೆ ತಂದಿರುವ ಮತ ಇಸ್ಲಾಂ. ಆದರೆ ಹಿಂದೂ ಧರ್ಮದಲ್ಲಿ ಅದಿಲ್ಲ.
ಹಾಗಾಗಿ ಹಿಂದೂ ಧರ್ಮವನ್ನು ಪ್ರತಿಪಾದಿಸುವ ಪ್ರತಿಯೊಬ್ರು  ವಿವೇಕಾನಂದರನ್ನು  ರನ್ನು ಚೆನ್ನಾಗಿ ಓದಿಕೊಳ್ಳಲಿ,'' ಎಂದು ಸಲಹೆ ನೀಡಿದ್ದಾರೆ. ನಾನು ಯಾವ ವ್ಯವಸ್ಥೆಯಲ್ಲಿ ಇದ್ದೇನೋ ಅದರಲ್ಲಿನ ಕೊಳಕನ್ನು ತೋರಿಸುತ್ತಿದ್ದೇನೆ. ಅದು ಗೊತ್ತಿಲ್ಲದಿರುವವರು ಹೀಗೆ ಹೇಳುತ್ತಾರೆ,'' ಎಂದರು.

ಪೇಜಾವರರು ನನ್ನ ಪುಸ್ತಕ ಓದಿಕೊಳ್ಳಲಿ

ಭಗವಾನ್ ಒಬ್ಬ ಹೇಡಿ ಎಂಬ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿ ಕ್ರಿಯಿಸಿದ ಭಗವಾನ್ ಪೇಜಾವರ ಶ್ರೀಗಳು ಈ ಹಿಂದೆಯೂ ನನಗೆ ಹೇಡಿ ಎಂದಿದ್ದರು. ಅವರ ಜೊತೆ ನಾನು ಚರ್ಚೆಗೆ ಬರುವುದಿಲ್ಲ. ಅವರು ಮೊದಲು ನನ್ನ ಪುಸ್ತಕವನ್ನು ಓದಿಕೊಳ್ಳಲಿ ಎಂದರು.

SCROLL FOR NEXT