ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಗತಿಪರ ಚಿಂತಕ ಪ್ರಗತಿಪರ ಚಿಂತಕ ಲಕ್ಷ್ಮಿಪತಿ ಕೋಲಾರ 
ಜಿಲ್ಲಾ ಸುದ್ದಿ

ಪ್ಯಾಲೆಸ್ತೀನ್ ಮೇಲೆ ನಡೆಯುತ್ತಿರುವ ಆಕ್ರಮಣ ಕ್ರೂರ: ಚಿಂತಕ ಲಕ್ಷ್ಮಿಪತಿ ಕೋಲಾರ

ಯಹೂದಿಗಳು ಪ್ಯಾಲೆಸ್ತೀನ್ ರ ಮೇಲೆ ಅಕ್ರಮಣ ಮಾಡುತ್ತಿರುವ ಬಗೆ ಬಹಳ ಕ್ರೂರವಾಗಿದೆ ಎಂದು ಪ್ರಗತಿಪರ ಚಿಂತಕ ಲಕ್ಷ್ಮಿಪತಿ ಕೋಲಾರ ತಿಳಿಸಿದರು.

ಬೆಂಗಳೂರು: ಜರ್ಮನಿಯಲ್ಲಿ ನಾಝಿಗಳಿಂದ ನರಮೇಧಕ್ಕೊಳಗಾದ ಯಹೂದಿಗಳು ಇಂದು ಪ್ಯಾಲೆಸ್ತೀನ್ ರ ಮೇಲೆ ಅಕ್ರಮಣ ಮಾಡುತ್ತಿರುವ ಬಗೆ ಬಹಳ ಕ್ರೂರವಾಗಿದೆ ಎಂದು ಪ್ರಗತಿಪರ ಚಿಂತಕ ಲಕ್ಷ್ಮಿಪತಿ ಕೋಲಾರ ತಿಳಿಸಿದರು.
ಪ್ಯಾಲೆಸ್ತೀನ್ ಫ್ರೀಡಂ ಥಿಯೇಟರ್ ಮತ್ತು ದೆಹಲಿಯ ಜನ ನಾಟ್ಯ ಮಂಚ್ ಫ್ರೀಡಂ ಜಾಥಾ ಜ.13 ರಂದು ಬೆಂಗಳೂರಿಗೆ ಆಗಮಿಸಲಿರುವ ಅಂಗವಾಗಿ ಸಮುದಾಯ ಕರ್ನಾಟಕ ಮತ್ತು ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
10 ವರ್ಷದ ಮಕ್ಕಳನ್ನು ಸಹ ಬಿಡದೇ ನಡೆಸುತ್ತಿರುವ ಆಕ್ರಮಣಕಾರಿ ಹತ್ಯೆ ಮುಂದಿನ ಒಂದು ಜನಾಂಗವನ್ನೇ ನಿರ್ನಾಮ ಮಾಡುವ ಕ್ರಿಯೆಯಾಗಿದೆ. ಅಲ್ಲಿ ನಡೆಯುತ್ತಿರುವುದು ಯುದ್ಧವಲ್ಲ. ಅದೊಂದು ಸಾಮೂಹಿಕ ಕಗ್ಗೊಲೆ. ತಮ್ಮ ತಾಯ್ನಾಡಿನಲ್ಲೇ ತಬ್ಬಲಿಗಳಾಗಿರುವ ಪ್ಯಾಲೆಸ್ತೀನ್ ಜನ ನಡೆಸುತ್ತಿರುವ ಸ್ವಾತಂತ್ರ್ಯ ಹೋರಾಟ ಬೆಂಬಲಿಸಿ ಪ್ಯಾಲೆಸ್ತೀನ್ ಕವನ ವಾಚನ ಮತ್ತು ನೇಮಿಚಂದ್ರರ ಯಾದವ ಶೇಮ್ ಪುಸ್ತಕ ವಾಚನ ಹಮ್ಮಿಕೊಳ್ಳಲಾಗಿದೆ ಎಂದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಸಮುದಾಯ ರಾಜ್ಯ ಸಹಕಾರ್ಯದರ್ಶಿ ಕೆಎಸ್ ವಿಮಲಾ, ಪ್ಯಾಲೆಸೀನ್ ಜನರು ಎದುರಿಸುತ್ತಿರುವ ಬವಣೆ ಮತ್ತು ಇಸ್ರೇಲ್ ನ ಆಕ್ರಮಣಕಾರಿ ಧೋರಣೆ ಮತ್ತು ಅದಕ್ಕೆ ಕುಮ್ಮಕ್ಕು ಕೊಡುತ್ತಿರುವ ಜಗತ್ತಿನ ಬಲಾಢ್ಯ ಶಕ್ತಿಗಳ ವಿರುದ್ಧದ ಹೋರಾಟವನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ ರೂ. 8,500 ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು: ವಾರಸುದಾರರಿಗೆ ಪರಿಹಾರ ವಿತರಣೆ- ಸಿಎಂ ಸಿದ್ದರಾಮಯ್ಯ

Gaza deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ: ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ, BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT