ಮೈಸೂರು: ಮೈಸೂರಿನಲ್ಲಿ ಗುರುವಾರ ನಡೆದ 103ನೇ ಇಂಡಿಯನ್ ಸಯನ್ಸ್ ಕಾಂಗ್ರೆಸ್ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯಪಾಲ ವಾಜೂಭಾಯಿ ಆರ್ ವಾಲಾ ಅವರು ಕಾಲೇಜು ಹೆಣ್ಮಕ್ಕಳು ಮೇಕಪ್ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಸಮಾರಂಭದಲ್ಲಿ ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು ಕೂದಲು ಕಟ್ ಮಾಡ್ಕೊಂಡು, ಲಿಪ್ಸ್ಟಿಕ್ ಹಚ್ಚಿ, ಹುಬ್ಬುಗಳನ್ನು ತೀಡಿ ನೀವು ಕಾಲೇಜ್ನಲ್ಲಿ ಸೌಂದರ್ಯ ಸ್ಪರ್ಧೆಗೆ ಹೋಗ್ತಿರಾ? ಕಲಿಯುವ ಹೆಣ್ಮಕ್ಕಳಿಗೆ ಮೇಕಪ್ ಅಗತ್ಯವಿಲ್ಲ ಎಂದಿದ್ದಾರೆ.
ಅದೇ ವೇಳೆ ಹುಡುಗರು ಚಟಗಳನ್ನು ಮತ್ತು ಹುಡುಗಿಯರು ಫ್ಯಾಷನ್ನ್ನು ಬಿಡಬೇಕು. ಹೆಣ್ಮಕ್ಕಳು ಫ್ಯಾಷನ್ ಬಗ್ಗೆಯೇ ಗಮನಹರಿಸಿದರೆ ಜೀವನದಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರ ಈ ಹೇಳಿಕೆಗೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.