ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ 
ಜಿಲ್ಲಾ ಸುದ್ದಿ

ಮಾಧ್ಯಮಗಳ ಎದುರಿಸದೇ ದಿಕ್ಕಾಪಾಲಾಗಿ ಓಡಿದ ಸಿಎಸ್

ರಾಜ್ಯದಲ್ಲಿ ಸಂಸದರ ನಿಧಿ ಬಳಕೆ ಕುರಿತ ಲೋಕಸಬೆಯ ಉಪಾಧ್ಯಕ್ಷ ತಂಬಿ ದೊರೈ ನೇತೃತ್ವದ ಸಂಸದೀಯ ಸಮಿತಿ ಸಭೆಯು ಅಧಿಕಾರಿಯೊಬ್ಬರ...

ಬೆಂಗಳೂರು; ರಾಜ್ಯದಲ್ಲಿ ಸಂಸದರ ನಿಧಿ ಬಳಕೆ ಕುರಿತ ಲೋಕಸಬೆಯ ಉಪಾಧ್ಯಕ್ಷ ತಂಬಿ ದೊರೈ ನೇತೃತ್ವದ ಸಂಸದೀಯ ಸಮಿತಿ ಸಭೆಯು ಅಧಿಕಾರಿಯೊಬ್ಬರ ಗೈರಿನಿಂದಾಗಿ  ರದ್ದಾದ ವಿಲಕ್ಷಣ ಘಟನೆ ಶುಕ್ರವಾರ  ನಡೆಯಿತು.  ಅಷ್ಟೇ ಅಲ್ಲದೇ ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ರನ್ನು ಮಾಧ್ಯಮಗಳು ಪ್ರತಿಕ್ರಿಯೆ ಕೇಳಲು ಹೋದಾಗ ದಿಕ್ಕಾಪಾಲಾಗಿ ಓಡಿ ಹೋದ ವಿಚಿತ್ರವೂ ಜರುಗಿತು.

ಅಷ್ಟೇ ಅಲ್ಲದೆ ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ವಿಧಾನಸೌಧದ ಎರಡನೇ ಮಹಡಿಯ ಕಚೇರಿಯೊಂದಕ್ಕೆ ಹೋಗಿ ಚಿಲಕ ಹಾಕಿಕೊಂಡ ಅವರು, ಮಾಧ್ಯಮದವರು ಅಲ್ಲಿಂದ ನಿರ್ಗಮಿಸುವವರೆಗೂ ಹೊರಗೆ ಬಾರದೆ ಸಮಯ ದೂಡಿದ್ದಾರೆ.  ಈ ಪ್ರಸಂಗಕ್ಕೆ ವಿಧಾನಸೌಧದಲ್ಲಿರುವ ಕಚೇರಿಗಳ ಸಿಬ್ಬಂದಿಯೂ ಸಾಕ್ಷಿಯಾಗಿದ್ದಾರೆ.

ಯಾವ ಸಭೆ, ನಡೆದಿದ್ದೇನು?

ಸಂಸದರ ನಿಧಿ ಬಳಕೆ ಪರಾಮರ್ಶೆ ಸಭೆಗೆ ಮುಖ್ಯ ಕಾರ್ಯದರ್ಶಿ ಗೈರು ಹಾಜರಾದ ಬಗ್ಗೆ ಪ್ರತಿಕ್ರಿಯೆ ಕೇಳಲು ಮಾಧ್ಯಮದವರು ವಿಧಾನಸೌಧದಲ್ಲಿ ಕಾಯುತ್ತಿದ್ದರು.  ಈ ಸಂದರ್ಭದಲ್ಲಿ ಅಡ್ವೋಕೇಟ್‌ ಜನರಲ್‌ ಕಚೇರಿಯಿಂದ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌, ಲಿಫ್ಟ್ ಮೂಲಕ ಮೂರನೇ ಮಹಡಿಗೆ ಬಂದರು. ಅಲ್ಲಿ ಮಾಧ್ಯಮದವರನ್ನು ಕಂಡ ತಕ್ಷಣ ಅಲ್ಲಿಂದ ಕಾಲ್ಕಿತ್ತು ಮತ್ತೆ ಲಿಫ್ಟ್ನೊಳಗೆ ಹೋದರು.

ಅಲ್ಲಿಂದ ಅವರು ಮೊದಲ ಮಹಡಿಗೆ ಆಗಮಿಸಿದರು. ಎಲೆಕ್ಟ್ರಾನಿಕ್‌ ಮಾಧ್ಯಮದ ಕ್ಯಾಮೆರಾಮನ್‌ಗಳು ಒಂದನೇ ಮಹಡಿಗೆ ಬಂದು ಮತ್ತೆ ಬೆನ್ನತ್ತಿದಾಗ ಮಹಡಿಯ ಮೆಟ್ಟಿಲುಗಳನ್ನು ದಡಬಡ ಹತ್ತಿ ಓಡಿ ಹೋದ ಜಾಧವ್‌ ಎರಡನೇ ಮಹಡಿಯ ಕೊಠಡಿಯೊಂದಕ್ಕೆ ಹೋಗಿ ಚಿಲಕ ಹಾಕಿಕೊಂಡರು. ಮಾಧ್ಯಮದವರು ಅಲ್ಲಿಂದ ನಿರ್ಗಮಿಸುವವರೆಗೂ ಹೊರ ಬರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT