ಮಲ್ಲಿಕಾರ್ಜುನ ಖರ್ಗೆ 
ಜಿಲ್ಲಾ ಸುದ್ದಿ

ಡೆಪ್ಯುಟಿ ಸ್ಪೀಕರ್ ಎದುರು ಗೈರಾದ್ದಕ್ಕೆ ಸ್ವಪಕ್ಷೀಯರ ವಿರುದ್ಧ ಖರ್ಗೆ ಅತೃಪ್ತಿ

ಲೋಕಸಭೆ ಉಪ ಸಭಾಧ್ಯಕ್ಷ ತಂಬಿ ದೊರೈ ಎದುರು ರಾಜ್ಯದಲ್ಲಿ ನಿರೀಕ್ಷಿತ ಗೌರವ ಸಿಗದಿರುವುದಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತ ...

ಬೆಂಗಳೂರು: ಲೋಕಸಭೆ ಉಪ ಸಭಾಧ್ಯಕ್ಷ ತಂಬಿ ದೊರೈ ಎದುರು ರಾಜ್ಯದಲ್ಲಿ ನಿರೀಕ್ಷಿತ ಗೌರವ ಸಿಗದಿರುವುದಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯ ಸದ್ಬಳಕೆ ಕುರಿತ ಪರಿಶೀಲನಾ ಸಮಿತಿ ಉಪ ಸಭಾಧ್ಯಕ್ಷ  ತಂಬಿದೊರೈ  ನೇತೃತ್ವದಲ್ಲಿ  ಆಗಮಿಸಿದರೂ ರಾಜ್ಯದಿಂದ ಸ್ಪೀಕರ್ ಛೇರ್ಮನ್ , ಯಾವುದೇ ಸಚಿವರು ಅಧಿಕಾರಿಗಳು ಬಾರದೇ ಅಪಮಾನಿಸಿದ್ದು ಸರಿಯಲ್ಲ ಎಂದು ಖರ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ವಿಚಾರವಾಗಿಯೂ ಸಿಎಂ ಸಿದ್ದರಾಮಯ್ಯ ವಿಚಾರವಾಗಿಯೂ  ಕೊಂಚ ಬೇಸರಗೊಂಡಿದ್ದ ಅವರು ಉಪ ಸಭಾಧ್ಯಕ್ಷರ ಮುಂದೆ ತಾವು ವಿಧಾನಸೌಧದಲ್ಲೇ ಮುಜುಗರ ಅನುಭವಿಸುವಂತಾಯ್ತು  ಎಂದು ನೊಂದುಕೊಂಡರು ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ  ಸಂಸದ ಕೆ.ಎಚ್ ಮುನಿಯಪ್ಪ  ಸಹ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಂಸತ್ ನಿಯೋಗ ಬಂದಾಗ ಈ ರೀತಿ ಆಗಬಾರದಿತ್ತು.  ವಿಧಾನ ಮಂಡಲದ ಉಭಯ ಸದನಗಳ ಪೀಠಾದಿಪತಿಗಳು ಎಷ್ಟೇ ದೊಡ್ಡ ಕೆಲಸವಿದ್ದರೂ ಅದನ್ನು ಬದಿಗೊತ್ತಿ ಸಭೆಯಲ್ಲಿ  ಪಾಲ್ಗೊಳ್ಳಬೇಕಾಗಿತ್ತು. ಈ ಬೆಳವಣಿಗೆ ಸ್ವೀಕಾರ್ಹವಲ್ಲ ಎಂದರು.

ವಾಹನಕ್ಕೆ ಪ್ರವೇಶವಿಲ್ಲ. ಲೋಕಸಭೆ ಉಪಸಭಾಧ್ಯಕ್ಷ ತಂಬಿದೊರೈ ಅವರ ವಾಹನವನ್ನು ವಿಧಾನಸೌಧದ ಧ್ವಾರದವರೆಗೆ ಬಿಡದೇ ತಡೆಯಲಾಗಿತ್ತು. ಪೊಲೀಸರ ಈ ಕ್ರಮಕ್ಕೆ ತಂಬಿದೊರೈ ಅವರು ಖರ್ಗೆ ಅವರ ಬಳಿ ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.  ನಿಮ್ಮ ಪೊಲೀಸರು ಉಪಸಭಾಧ್ಯಕ್ಷರಾದ ತಮ್ಮ ವಾಹನವನ್ನೇ ತಡೆ ಹಿಡಿದಿದ್ದಾರೆ ಎಂದು ಬೇಸರಗೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT