ಎನ್ಎಸ್ ಜಿ ರೀತಿ ಗರುಡ ತಾಲೀಮು 
ಜಿಲ್ಲಾ ಸುದ್ದಿ

ಎನ್ಎಸ್ ಜಿ ರೀತಿ ಗರುಡ ತಾಲೀಮು

ಶಕ್ತಿ ಕೇಂದ್ರವಾದ ವಿಧಾನ ಸೌಧ ಸೇರಿದಂತೆ ನಗರದ ಪ್ರಮುಖ ಸ್ಥಗಳಲ್ಲಿ ಎನ್‍ಎಸ್‍ಜಿ ಮಾದರಿಯ ಗರುಡ ಪಡೆ ನಿಯೋಜಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರು: ಪಂಜಾಬ್‍ನ ಪಠಾಣ್ ಕೋಟ್‍ನಲ್ಲಿ ನಡೆದ ಉಗ್ರರ ದಾಳಿಯಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಶಕ್ತಿ ಕೇಂದ್ರವಾದ ವಿಧಾನಸೌಧ ಸೇರಿದಂತೆ ನಗರದ ಪ್ರಮುಖ ಸ್ಥಗಳಲ್ಲಿ ಎನ್‍ಎಸ್‍ಜಿ ಮಾದರಿಯ ಗರುಡ ಪಡೆ ನಿಯೋಜಿಸಲು ತೀರ್ಮಾನಿಸಿದೆ.

ಈ ಸಂಬಂಧ ಬುಧವಾರ ಗರುಡ ತಂಡದವರು ಎನ್‍ಎಸ್‍ಜಿ ಮಾದರಿಯಂತೆ ವಿಕಾಸ ಸೌಧದಲ್ಲಿ ರಕ್ಷಣಾ ತಾಲೀಮು ನಡೆಸಿದರು. ರಾಜ್ಯದ ಗರುಡ ಪಡೆಯಲ್ಲಿರುವ ಒಟ್ಟು 250 ಮಂದಿ ಪೈಕಿ 110 ಮಂದಿಯನ್ನು ತಾಲೀಮಿನಲ್ಲಿ ಬಳಸಿಕೊಳ್ಳಲಾಯಿತು. ಚೆನ್ನೈ ಮತ್ತು ಹೈದರಾಬಾದ್ ಎನ್ ಎಸ್ ಜಿ ಘಟಕದಿಂದ 50 ಮಂದಿ ಯೋಧರು ನಗರಕ್ಕೆ ಆಗಮಿಸಿ ಈ 110 ಮಂದಿಗೆ ತರಬೇತಿ ನೀಡಿದರು.

ಎರಡು ದಿನಗಳ ಹಿಂದೆಯೆ ಇಡಿ ವಿಧಾನಸೌಧವನ್ನು ಪರಿಶೀಲಿಸಿದ್ದ ಎನ್ಎಸ್ ಜಿ ಎಲ್ಲೆಲ್ಲಿ ಗರುಡ ಪಡೆ ನಿಯೋಜಿಸಬೇಕು ಎಂಬುದನ್ನು ಗುರುತಿಸಿದ್ದರು. ಅದರಂತೆ ಕಟ್ಟಡ  ಏರುವುದು, ಇಳಿಯುವುದು ಶಸ್ತ್ರ ಸಜ್ಜಿತವಾಗಿ ನಿಲ್ಲುವುದು ಸೇರಿದಂತೆ ಪ್ರಮುಖ ರಕ್ಷಣಾ ತಂತ್ರಗಳನ್ನು ಹೇಳಿಕೊಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT