ಕುಷ್ಠರೋಗ ವಿಮುಕ್ತನಿಗೆ ವಿವಾಹ ಭಾಗ್ಯ 
ಜಿಲ್ಲಾ ಸುದ್ದಿ

ಕುಷ್ಠರೋಗ ವಿಮುಕ್ತನಿಗೆ ವಿವಾಹ ಭಾಗ್ಯ

ಕುಷ್ಠರೋಗದಿಂದ ವಿಮುಕ್ತವಾದ ವ್ಯಕ್ತಿಯ ಬಾಳಲ್ಲಿ ಬೆಳಕು ಮೂಡಿದ್ದು, ಆತನನ್ನು ಬೆಂಗಳೂರಿನ ಚಿಕ್ಕನಾಯ ಕನಹಳ್ಳಿಯ ಯುವತಿ ಲಕ್ಷ್ಮೀ ಕೈ ಹಿಡಿಯುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ...

ಬೆಂಗಳೂರು: ಕುಷ್ಠರೋಗದಿಂದ ವಿಮುಕ್ತವಾದ ವ್ಯಕ್ತಿಯ ಬಾಳಲ್ಲಿ ಬೆಳಕು ಮೂಡಿದ್ದು, ಆತನನ್ನು ಬೆಂಗಳೂರಿನ ಚಿಕ್ಕನಾಯ ಕನಹಳ್ಳಿಯ ಯುವತಿ ಲಕ್ಷ್ಮೀ ಕೈ ಹಿಡಿಯುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

ಬೆಂಗಳೂರಿನ ಜೈನ್ ಅಸೋಸಿಯೇಷನ್‍ನಲ್ಲಿ ಶನಿವಾರ ನಡೆದ ವಿವಾಹಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಿ ಹಾರೈಸಿದರು. ಹಲವು ವರ್ಷಗಳಿಂದ ಕುಷ್ಠರೋಗದಿಂದ ಬಳಲುತ್ತಿದ್ದ ಕನಕಪುರದ ಗುಂಡಪ್ಪ ಈಗ ಕುಷ್ಠರೋಗ ದಿಂದ ಮುಕ್ತವಾಗಿದ್ದು ಆತನಿಗೆ ಸಂಸಾರದ ಹೊಣೆ ಕಟ್ಟಿಕೊಟ್ಟದ್ದು ಚಾರುಕೀರ್ತಿ ಭಟ್ಟಾರಕರ ವೇದಿಕೆ. ಗುಂಡಪ್ಪ ಸುಮನಹಳ್ಳಿ ಕುಷ್ಠರೋಗಿಗಳ ಪುನರ್ ವಸತಿ ಕೇಂದ್ರ ದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಜಯನಗರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕುಷ್ಠ ರೋಗ ಅಂಟು ಕಾಯಿಲೆಯಲ್ಲ ಎಂಬುದನ್ನು ಈತ ನಿರೂಪಿಸಿದ್ದಾನೆ, ಜತೆಗೆ ಇಂಥದೇ ಸಮಸ್ಯೆ ಎದುರಿಸುತ್ತಿರುವ ನೂರಾರು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಚಾರುಕೀರ್ತಿ ಭಟ್ಟಾರಕರ ವೇದಿಕೆ ಹಲವು ದಶಕಗಳಿಂದ ವಿಕಲಚೇತನರು, ಕುಷ್ಠರೋಗಿಗಳಿಗೆ ಮದುವೆ ಯನ್ನು ಮಾಡಿಸಿಕೊಂಡು ಬಂದಿದ್ದು, ಇದು 26ನೇ ಮದುವೆಯಾಗಿದೆ. ಗುಂಡಪ್ಪನ ಮದುವೆ ಸಾಮಾನ್ಯರ ಮದುವೆಯಂತೆಯೇ ಅದ್ಧೂರಿಯಾಗಿ ನಡೆಯಿತು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಶಾಸಕ ರವಿಸುಬ್ರಹ್ಮಣ್ಯ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಗಾಯಕ ಶಿವಮೊಗ್ಗ ಸುಬ್ಬಣ್ಣ, ವೇದಿಕೆಯ ಅಧ್ಯಕ್ಷ ಡಾ.ನಾಗೇಂದ್ರ ಪ್ರಸಾದ್ ಸೇರಿದಂತೆ 350ಕ್ಕೂ ಜನರು ಈ ಅಪರೂಪದ ಮದುವೆಯನ್ನು ಕಣ್ತುಂಬಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT