ಸೀರೆ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ 
ಜಿಲ್ಲಾ ಸುದ್ದಿ

ಸಾಲ ಮಾಡಿ ಪತ್ನಿಗೆ ಲಕ್ಷ ರುಪಾಯಿ ರೇಷ್ಮೆ ಸೀರೆ ಖರೀದಿಸಿದ ಸಿಎಂ!

ಮದುವೆಯಾದ ಹೊಸತರಲ್ಲಿ ಪತ್ನಿಗೆ ಮೈಸೂರು ಸಿಲ್ಕ್ ಸೀರೆ ಖರೀದಿಸಿದ್ದೆ. ಅದನ್ನು ಬಿಟ್ಟರೆ ಪತ್ನಿಗೆ ಸೀರೆ ಖರೀದಿಸುತ್ತಿರುವುದು ಇದೇ ಮೊದಲು! ಅದೂ ಸಾಲ ಮಾಡಿ...

ದಾವಣೆಗೆರೆ: ಮದುವೆಯಾದ ಹೊಸತರಲ್ಲಿ ಪತ್ನಿಗೆ ಮೈಸೂರು ಸಿಲ್ಕ್ ಸೀರೆ ಖರೀದಿಸಿದ್ದೆ. ಅದನ್ನು ಬಿಟ್ಟರೆ ಪತ್ನಿಗೆ ಸೀರೆ ಖರೀದಿಸುತ್ತಿರುವುದು ಇದೇ ಮೊದಲು! ಅದೂ ಸಾಲ ಮಾಡಿ!

ಹೀಗೆಂದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಭಾನುವಾರ ನಗರದಲ್ಲಿ ಕೆಎಸ್‍ಐಸಿ ನೂತನ ಮಾರಾಟ ಮಳಿಗೆ ಉದ್ಘಾಟಿಸಿದ ಬಳಿಕ ಪತ್ನಿಗಾಗಿ ಸೀರೆಯೊಂದನ್ನು ಖರೀದಿಸಿದ ವಿಚಾರ ತಿಳಿಸಿದರು. ವಿಶೇಷವೆಂದರೆ ಕಾರ್ಯಕ್ರಮದಲ್ಲಿ ತಾವು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕೆಎಸ್‍ಐಸಿಯ ಹೊಸ ವಿನ್ಯಾಸದ ಸೀರೆಯನ್ನೇ ಪತ್ನಿಗಾಗಿ ಖರೀದಿ ಮಾಡಿದ್ದಾರೆ.

ಕಿತ್ತಳೆ ಬಣ್ಣದ ಹೊಸ ವಿನ್ಯಾಸದ ಥ್ರೆಡ್ ಸಾಫ್ಟ್ ಗೋಲ್ಡ್ ಸೀರೆಯ ಬೆಲೆ ರು.1,09, 385 ಆದರೆ ಸದ್ಯಕ್ಕೆ ತಮ್ಮ ಬಳಿ ಇಷ್ಟು ಹಣ ಇಲ್ಲ. ಬೆಂಗಳೂರಿನಲ್ಲಿ ಹಣ ಪಡೆಯುವಂತೆ ಕೆಎಸ್ ಐಸಿ ಅಧ್ಯಕ್ಷ  ಬಸವರಾಜ್‍ಗೆ ಸೂಚಿಸಿ ಅವರು ಸೀರೆ ಪ್ಯಾಕ್ ಮಾಡಿಸಿದರು.

ವಾಟರ್‍ಪ್ರೂಫ್ ಸೀರೆ:
ಕೆಎಸ್‍ಐಸಿ ಹೊರ ತಂದಿರುವ ವಾಟರ್ ಪ್ರೂಫ್ ಸೀರೆ ಮೇಲೆ 1ಲೀಟರ್‍ಗೂ ಅಧಿಕ ನೀರು ಸುರಿದ ಸಿಎಂ, ಆ ಸೀರೆ ನೀರನ್ನು ಹೀರಿಕೊಳ್ಳದ್ದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ವೈಶಿಷ್ಟ್ಯಕ್ಕಾಗಿಯೇ ಮೈಸೂರು ಸಿಲ್ಕ್ ಉತ್ಪನ್ನ ಗಳೆಂದರೆ ಹಿಂದಿನಿಂದಲೂ ತಮಗೆ ಅಚ್ಚು ಮೆಚ್ಚು ಎಂದರು. ಮೈಸೂರು ರೇಷ್ಮೆ ಉತ್ಪನ್ನಗಳೆಂದರೆ ನನಗೆ ಯಾವತ್ತೂ ಇಷ್ಟ. ಅವುಗಳಿಗೆ ಸದ್ಯಕ್ಕೆ ನಾನೇ ಬ್ರಾಂಡ್ ಅಂಬಾಸಿಡರ್. ವಿಶೇಷ ದಿನಗಳು, ಹಬ್ಬ ಹರಿದಿನಗಳಂದು ನಾನು ರೇಷ್ಮೆ ವಸ್ತ್ರ ಧರಿಸುತ್ತೇನೆ. ಈಚೆಗೆ ಹೆಚ್ಚಾಗಿ ರೇಷ್ಮೆ ಬಟ್ಟೆಗಳನ್ನೇ ಹಾಕುತ್ತಿದ್ದೇನೆ'' ಎನ್ನುವ ಮೂಲಕ ರೇಷ್ಮೆ ವಸ್ತ್ರಗಳ ಕುರಿತು ತಮಗಿರುವ ಒಲವನ್ನು ಅವರು ಬಹಿರಂಗಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT