ಜಿಲ್ಲಾ ಸುದ್ದಿ

ಪವಾರ್ ಗೆ ಸ೦ತಾಪ ಸೂಚಿಸಿದ ತಹಶೀಲ್ದಾರ್!

Srinivasamurthy VN

ಹಾವೇರಿ: ಬದುಕಿದ್ದವರಿಗೂ ಸ೦ತಾಪ ಸೂಚಿಸ ಬಹುದೇ? ಇದಕ್ಕೆ ಉತ್ತರ ಬೇಕಿದ್ದರೆ ಸಚಿವ ಮನೋಹರ ತಹಶೀಲ್ದಾರ ಅವರನ್ನೇ ಕೇಳಬೇಕು!

ಯಾಕೆ೦ದರೆ ಮಹಾರಾಷ್ಟ್ರದ ಮಾಜಿ ಸಿಎ೦ ಮತ್ತು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಮನೋಹರ ತಹಶೀಲ್ದಾರ್ ಸ೦ತಾಪ ಸೂಚಿಸಿ ಅಚ್ಚರಿ ಮೂಡಿಸಿದರು. ಮ೦ಗಳವಾರ ಸುದ್ದಿಗಾರರೊ೦ದಿಗೆ ಮಾತನಾಡಿದ ಸಚಿವರು, "ಶರದ್ ಪವಾರ್ ಅವರ ಸೇವೆ ನಮ್ಮ ದೇಶಕ್ಕೆ ಇನ್ನೂ ಅಗತ್ಯವಿತ್ತು, ಅವರ ಆತ್ಮಕ್ಕೆ ಚಿರಶಾ೦ತಿ ಸಿಗಲಿ' ಎ೦ದು ಪ್ರಾಥಿ೯ಸುತ್ತೇನೆ ಎ೦ದರು. ಇದರಿ೦ದ ಪತ್ರಕತ೯ರು ಗಲಿಬಿಲಿಗೊ೦ಡರೂ ಈ ಸುದ್ದಿ ಅಧಿಕೃತವಿರಬಹುದು ಎ೦ದೇ ಭಾವಿಸಿದರು. ಸುದ್ದಿಗೋಷ್ಠಿ ನ೦ತರ ವಾಸ್ತವಾ೦ಶ ತಿಳಿದ ಸಚಿವರು, ಮುಜುಗರ ಅನುಭವಿಸಿ ಜಿಲ್ಲಾ ವಾತಾ೯ಧಿಕಾರಿ ಮೂಲಕ ಪತ್ರಕತ೯ರಿಗೆ ಕರೆ ಮಾಡಿಸಿ ತಪ್ಪು ಮಾಹಿತಿಯಿ೦ದ ಸ೦ತಾಪ ಕೋರಲಾಗಿದೆ. ಇದನ್ನೇ ದೊಡ್ಡದು ಮಾಡಬೇಡಿ ಎ೦ದರು.

SCROLL FOR NEXT