ಚಾಯ್ ವಾಲಾ, ಮೌನಿ ಬಾಬಾ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಚಾಯ್ ವಾಲಾ, ಮೌನಿ ಬಾಬಾ ಸ್ಪರ್ಧೆ

ಚಾಯ್ ವಾಲಾ, ನೀರಿನ ವಾಣಿಜ್ಯೀಕರಣ ವಿರೋಧಿಸಿ ಕಳೆದ 11 ವರ್ಷಗಳಿಂದ ಮೌನವಾಗಿ ಪ್ರತಿಭಟನೆ ನಡೆಸುತ್ತಿರುವ ಮೌನಿ ಬಾಬಾ ಅಮೃತ್ ಹೆಬ್ಬಾಳದ ಉಪಚುನಾವಣೆ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಬೆಂಗಳೂರು: ಬೆಂಗಳೂರು ಜಾನ್ಸನ್ ಮಾರ್ಕೆಟ್ ನ ಚಾಯ್ ವಾಲಾ, ನೀರಿನ ವಾಣಿಜ್ಯೀಕರಣ ವಿರೋಧಿಸಿ ಕಳೆದ 11 ವರ್ಷಗಳಿಂದ ಮೌನವಾಗಿ ಪ್ರತಿಭಟನೆ ನಡೆಸುತ್ತಿರುವ ಮೌನಿ ಬಾಬಾ ಅಮೃತ್  ಹೆಬ್ಬಾಳ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಬುಧವಾರ ನಾಮಪತ್ರ ಸಲ್ಲಿಕೆ ಅಂತಿಮ ದಿನ ಇವರಿಬ್ಬರೂ ನಾಮಪತ್ರ ಸಲ್ಲಿಸಲು ನಿಗದಿಯಾಗಿದ್ದ ಜೆಸಿ ನಗರದ ಬಿಬಿಎಂಪಿ ಕಚೇರಿಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಚಾಯ್ ಸುರಿದೂ ಸುರಿದೂ ಕಪ್ಪಿಟ್ಟ ಕೈಗಳು, ಕೇವಲ ನಾಲ್ಕೈದು ಬೆಂಬಲಿಗರೊಂದಿಗೆ ಆಗಮಿಸಿದ್ದ ಜಾನ್ಸನ್ ಮಾರ್ಕೆಟ್ ನ ಚಾಯ್ ವಾಲಾ ಹೆಸರು ಸಯ್ಯದ್ ಅಸೀಫ್ ಬುಖಾರಿ, ಚುನಾವಣಾ ಇಡುಗಂಟಿಗೂ ಕಾಸಿಲ್ಲದ ಕೇವಲ ಬೈಟು ಚಾಯ್ ಗೆ .2 ರೂ, ಬ್ಲಾಕ್ ಟಿ ಗೆ 6 ರೂ ಪಡೆದು ಜೀವನ ಸಾಗಿಸುವ ಇವರಿಗೆ ಇದೇನು ಮೊದಲ ಚುನಾವಣೆಯಲ್ಲ. 2010 ರ ಬಿಬಿಎಂಪಿ ಚುನಾವಣೆ, 2013 ರ ವಿಧಾನಸಭಾ ಚುನಾವಣೆ, 2014 ರ ಸಂಸತ್ ಚುನಾವಣೆ, 2015 ರ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಇವರು ಈ ಬಾರಿಯ ಚುನಾವಣೆಗೆ ಹಣ ಹೊಂದಿಸಲು ಮಾಡಿದ ಪರದಾಟವನ್ನು ವಿವರಿಸಿ ಕಣ್ಣೀರಿಡುತ್ತಾರೆ.

ಮತ್ತೊಬ್ಬ ಮೌನಿ ಬಾಬಾ ಅಂಬ್ರೋಸ್ ರದ್ದು ಮತ್ತೊಂದು ಕಥೆ. 2002 ರಲ್ಲಿ ಹರಿಯಾಣದಲ್ಲಿ ಸತ್ತಿದ್ದ ಗೋವೊಂದರ ಚರ್ಮ ಸುಲಿದಿದ್ದ ದಲಿತರ ಹತ್ಯೆ ಮಾಡಿದ್ದನ್ನು ಖಂಡಿಸಿ ಕಾಲಿಗೆ ಚಪ್ಪಲಿ ಹಾಕುವುದನ್ನೇ ಬಿಟ್ಟವರು. ನೀರು ವಾಣಿಜ್ಯೀಕರಣವಾಗುತ್ತಿರುವುದನ್ನು ವಿರೋಧಿಸಿ ನೀರು ಆರುವ ಮುನ್ನ ಎಂದು ಸ್ಲೇಟ್ ನಲ್ಲೇ ಬರೆಯುತ್ತ ಮಾತನ್ನೂ ಬಿಟ್ಟವರು ಈ ಬಾಬ. ಕ್ರಾಂತಿಕಾರಿ ಪುಸ್ತಕಗಳ ಮಾರಾಟದಿಂದ ಬಂದ ಹಣವನ್ನೆಲ್ಲಾ ಸೇರಿಸಿ ಹತ್ತು ಸಾವಿರ ಕಟ್ಟಿ ಈ ಬಾರಿ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ