ಬಿಜಾಪುರ

ಮರಳು ಮಾಫಿಯಾ ಮೂವರು ಬಲಿ

ಇಂಡಿ(ಬಿಜಾಪುರ): ಭೀಮಾನದಿಯಲ್ಲಿ ನಡೆಯುತ್ತಿರುವ ಅಂತಾರಾಜ್ಯ ಮರಳು ಮಾಫಿಯಾಕ್ಕೆ ತಾಲೂಕಿನ ಮೂವರು ಬಾಲಕಿಯರು ಬಲಿಯಾಗಿದ್ದಾರೆ.
ಗ್ರಾಮದೇವತೆ ಅಭಿಷೇಕಕ್ಕಾಗಿ ನದಿಯಲ್ಲಿ ನೀರು ತರಲು ಹೋದಾಗ ಮರಳು ಗಣಿಗಾರಿಕೆಗಾಗಿ ತೋಡಿದ ಗುಂಡಿಯೊಳಗೆ ಸಿಲುಕಿ ಬಾಲಕಿಯರು ಮೃತಪಟ್ಟಿದ್ದಾರೆ.  
ಭಾಗ್ಯಶ್ರೀ ಸಿದ್ರಾಮ ಧೂಳೆ (13), ಭಾಗ್ಯಶ್ರೀ ಬಸವರಾಜ ಸುತಾರ(13) ಹಾಗೂ ಮಹಾನಂದ ಅಪ್ಪಶಾ ಅತನೂರ (12) ಮೃತರು. ನಾಲ್ಕು ಮಂದಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಘಟನೆಯಿಂದಾಗಿ ಉದ್ರಿಕ್ತರಾದ ಗ್ರಾಮಸ್ಥರು ಮಹಾರಾಷ್ಟ್ರ ತಹಸೀಲ್ದಾರ್ ಜೀಪ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗಬ್ಬೇವಾಡದ ಗ್ರಾಮದೇವತೆ ಲಕ್ಷ್ಮೀದೇವಿಗೆ ಅಭಿಷೇಕ ಮಾಡಲು ಶುಕ್ರವಾರ ಮುಂಜಾನೆ ಈ ಮೂವರು ಬಾಲಕಿಯರು ಸೇರಿ ಏಳು ಮಂದಿ ಬಿಂದಿಗೆ ಹಿಡಿದು ನದಿಗೆ ಹೋಗಿದ್ದಾರೆ.  ಆದರೆ ಈ ನದಿ ಭಾಗ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿದ್ದು, ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಮರಳಿಗಾಗಿ ನದಿಯೊಳಗೆ ಕಂಡಕಂಡಲ್ಲಿ ಗುಂಡಿ ತೋಡಲಾಗಿದೆ. ಇದನ್ನರಿಯದ ಬಾಲಕಿಯರು ನೀರಿಗಿಳಿದಾಗ ಗುಂಡಿಯೊಳಗೆ ಸಿಲುಕಿದ್ದಾರೆ. ಮಕ್ಕಳ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ನಾಲ್ವರನ್ನು ರಕ್ಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 2025: UAE ವಿರುದ್ಧ ಭಾರತಕ್ಕೆ 9 ವಿಕೆಟ್ ಗಳ ಜಯ

ಸ್ಲಂ ಬೋರ್ಡ್ ಅಡಿ 42,000 ಮನೆಗಳ ನಿರ್ಮಿಸಲಾಗುತ್ತಿದ್ದು, ಮೂಲಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಅನುದಾನ: ಸಿಎಂ

ನೇಪಾಳ ಬಿಕ್ಕಟ್ಟು: ಭಾರತದಲ್ಲಿ ಕಟ್ಟೆಚ್ಚರ; ಸಹಾಯವಾಣಿ ಆರಂಭ; ಕಠ್ಮಂಡುವಿಗೆ ವಿಮಾನ, ಬಸ್ ಸೇವೆ ರದ್ದು!

ಮಂಗಳೂರು: ನಕಲಿ ಆಧಾರ್ ಕಾರ್ಡ್‌ ತಯಾರಿಸಿ ಸರ್ಕಾರಿ ಇಲಾಖೆಗಳು, ನ್ಯಾಯಾಲಯಗಳಿಗೆ ವಂಚನೆ; ವ್ಯಕ್ತಿಯ ಬಂಧನ

2,929 ಕೋಟಿ ರೂ ವಂಚನೆ ಆರೋಪ: Anil Ambani ವಿರುದ್ಧ ಹೊಸ ಪ್ರಕರಣ ದಾಖಲು

SCROLL FOR NEXT