ಚಾಮರಾಜನಗರ

ಇಂದು ಅಥವಾ ನಾಳೆ ಜಯಾಗೆ ಸಿಎಂ ಪತ್ರ

Mainashree

ಚಾಮರಾಜನಗರ: ತಾಳವಾಡಿ ಘಟನೆಗೆ ಸಂಬಂಧಿಸಿದಂತೆ ಭಾಷಾ ಸಾಮರಸ್ಯ ಕಾಪಾಡಲು ಹಾಗೂ ಕನ್ನಡಿಗರಿಗೆ ರಕ್ಷಣೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸಿಎಂ ಜಗದೀಶ್ ಶೆಟ್ಟರ್ ಪತ್ರ ಬರೆಯಲಿದ್ದಾರೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಈ ಘಟನೆ ನಡೆದಿದೆ. ಘಟನೆ ಸಂಬಂಧ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ವರದಿ ನೀಡಿದ್ದಾರೆ. ರಾಜ್ಯದ ಗಡಿ ಭಾಗದ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದನ್ನು ಮುಂದುವರಿಸಲಾಗುತ್ತದೆ. ಅದರಂತೆ ಕನ್ನಡಕ್ಕೆ ಇದ್ದ 100 ಅಂಕಗಳನ್ನು ಮತ್ತೆ 100 ಅಂಕಗಳಿಗೆ ಏರಿಸಬೇಕು ಹಾಗೂ ತಾಳವಾಡಿ ಗಡಿ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಪತ್ರ ಬರೆಯಲಾಗುವುದು ಎಂದರು.
ತಾಳವಾಡಿ ಗಡಿ ಕನ್ನಡಿಗರ ರಕ್ಷಣೆ ಹಾಗೂ ಭಾಷಾ ಸಾಮರಸ್ಯ ಕಾಪಾಡುವ ಸಂಬಂಧ ಜ.25 ರಂದು ಸಂಘ ಸಂಸ್ಥೆಗಳ ಮುಖಂಡರು, ಸಂಸದರು, ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುತ್ತದೆ ಎಂದರು.
 

SCROLL FOR NEXT