ಧಾರವಾಡ

ಲೋಡ್ ಶೆಡ್ಡಿಂಗ್ ಖಂಡಿಸಿ ಧರಣಿ

ಧಾರವಾಡ: ಅಸಮರ್ಪಕ ವಿದ್ಯುತ್ ಸರಬರಾಜು ಮತ್ತು ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ಮುಖಂಡರು ಸೋಮವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹೆಸ್ಕಾಂ ಅಭಿಯಂತರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಹೊಸ ವಿದ್ಯುತ್ ಸಂಪರ್ಕಕ್ಕೆ ರೈತರೇ ವೆಚ್ಚ ಭರಿಸಬೇಕಾಗಿದೆ. ಪಂಚಾಯಿತಿಗಳಲ್ಲಿ ಹಗಲೂ ಎಂಟು ತಾಸು ಗುಣಮಟ್ಟದ ಮೂರು ಫೇಸ್ ವಿದ್ಯುತ್ ಕೊಡಬೇಕು. ಶಿಥಿಲಗೊಂಡ ಕಂಬ, ತಂತಿ, ಸುಟ್ಟ ಟ್ರಾನ್ಸ್ಫಾರ್ಮರ್ ದುರಸ್ತಿ ವೆಚ್ಚ ಕಂಪನಿ ಭರಿಸಿ ಬದಲಿಸಬೇಕು, ಕಂಪನಿ ವೆಚ್ಚದಲ್ಲಿ ಹೊಸ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಶೀಘ್ರ ವಿದ್ಯುತ್ ಪೂರೈಸಬೇಕು. ಒಂದು ಗ್ರಾಮಕ್ಕೆ ಒಬ್ಬರಂತೆ ಲೈನ್ಮನ್ ನೇಮಿಸಬೇಕು. ಸುಗ್ಗಿಯ ಸಮಯದಲ್ಲಿ ರೈತರಿಗೆ ವಿದ್ಯುತ್ ಸಂಪರ್ಕ ಸಕ್ರಮಕ್ಕೆ ಸಮಯ ಅವಕಾಶ ನೀಡಬೇಕು. ಹಳ್ಳಿಯ ಹೊಸ ಬಡಾವಣೆಗಳಲ್ಲಿ ಕಂಪನಿಯ ವೆಚ್ಚದಲ್ಲಿ ವಿದ್ಯುತ್ ಪೂರೈಸಬೇಕು ಎಂದು ತಿಳಿಸಿದ್ದಾರೆ.
ಹೆಸ್ಕಾಂ ಅಧಿಕಾರಿಗಳು, ಬೇಡಿಕೆಗಳನ್ನು ಪರಿಹರಿಸುತ್ತೇವೆಂದರು. ಮಾಜಿ ಶಾಸಕಿ ಸೀಮಾ ಮಸೂತಿ, ಶಾಸಕ ಅರವಿಂದ ಬೆಲ್ಲದ, ಉಪ ಮೇಯರ್ ಮಂಜುಳಾ ಅಕ್ಕೂರ, ರೈತ ಮೋರ್ಚಾ ಶಶಿಮೌಳಿ ಕುಲಕರ್ಣಿ, ಪ್ರೇಮಾ ಕುಮಾರ ದೇಸಾಯಿ, ಅಜ್ಜಪ್ಪ ಹೊರಕೇರಿ, ಯಲ್ಲಪ್ಪ ಅರವಾಳದ, ಅಮೃತ ದೇಸಾಯಿ, ಶಿವಾನಂದ ಹೊಳೆಹಡಗಲಿ, ಮಡಿವಾಳಪ್ಪ ಉಳವಣ್ಣವರ, ಪ್ರಕಾಶ ಗೋಡಬೋಲೆ, ಮೋಹನ ರಾಮದುರ್ಗ, ಬಸವಣ್ಣೆಪ್ಪ ಬಾಳಗಿ, ಶೇಖಪ್ಪ ನವಲೂರು, ಭೀಮಸಿ ಕಸಾಯಿ, ಮಲ್ಲನಗೌಡ ಪಾಟೀಲ, ಬಸವನಗೌಡ ಪಾಟೀಲ, ನೇತಾಜಿ ಬುದ್ದಿವಂತಗೌಡರ, ದಶರಥ ದೇಸಾಯಿ, ಮೈಲಾರ ಉಪ್ಪಿನ, ಮಂಜುನಾಥ ಮಲ್ಲಿಗವಾಡ, ಮಂಜುನಾಥ ನಡಟ್ಟಿ, ಪ್ರಮೋದ ಕಾರಕೂನ್, ಬಸವರಾಜ ರುದ್ರಾಪುರ ಮುಂತಾದವರು ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT