ಗದಗ

ಎಂಇಎಸ್ ಪುಂಡಾಟಿಕೆವಿರೋಧಿಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಗದಗ, ಆ. 4
ಈಚೆಗೆ ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಕನ್ನಡಾಂಬೆಗೆ ಮಾಡಿರುವ ಅವಮಾನ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಖಂಡಿಸಿ ಸೋಮವಾರ ನ್ಯೂ (ಇಂಡಿಯಾ) ಯುಥ್ಸ್ ಅಸೋಸಿಯೇಶನ್ನ ಕಾರ್ಯಕರ್ತರು ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಬೆಳಗಾವಿ ಜಿಲ್ಲೆಯ ಶಿಳನೋಳಿ ಗ್ರಾಮದಲ್ಲಿ ಮಹಾರಾಷ್ಟ್ರದ ಶಿವಸೇನೆಯ ಮುಖಂಡರು ಹಾಗೂ ಎಂಇಎಸ್ ಕಾರ್ಯಕರ್ತರು ಕರ್ನಾಟಕ ಧ್ವಜವನ್ನು ಭಸ್ಮ ಮಾಡಿರುವುದು ಖಂಡನಾರ್ಹವಾಗಿದೆ. ಎಂಇಎಸ್ ಹಾಗೂ ಶಿವಸೇನಾ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಹಾಗೂ ಈ ಎರಡು ಸಂಘಟನೆಯನ್ನು ನಿಷೇಧಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಲಕ್ಕುಂಡಿ, ಅಕ್ಬರಲಿ ಇರಾಣಿ, ಜೇಸುದಾಸ, ನಜೀರಅಹ್ಮದ ಕುನ್ನಿಭಾವಿ, ಲಕ್ಷಣ ಅಣ್ಣಿಗೇರಿ, ಮಂಜುನಾಥ ದಾಮೋದರ, ಪರಶುರಾಮ ಸಾತಪತಿ, ಬೂದಪ್ಪ ಹುಣಸಿಮರದ, ನೀಲಪ್ಪ ಕೇಲೂರ, ಗಿರೀಶ ಹುಣಶಿಮರದ, ಗುರುರಾಜ ಭಜಂತ್ರಿ, ಆರ್.ಎಲ್. ಮೇಳೆನವರ, ರಾಯಪ್ಪ ಚಕ್ರಸಾಲಿ, ಶಾಮ ತೇರದಾಳ, ಮಾಣಿಕ ಲಕ್ಕುಂಡಿ, ರಾಘು ಶಹಪುರ, ಈಶ್ವರ ಮೇರವಾಡೆ, ಮೋಹನ ತೇರದಾಳ, ಶಫಿ ನವಲಗುಂದ, ಎಂ.ಎ. ಕಲ್ಮನಿ, ಸುನೀಲ ಸಾತಪತಿ, ಜಹಾಂಗೀರ ಉಮಚಗಿ, ರಾಚಪ್ಪ ಗಡಾದ, ರಾಜು ಖಾನಾಪುರ, ಬಾಗಪ್ಪ ಲಕ್ಕುಂಡಿ, ಹನಮಂತ ಭಜಂತ್ರಿ, ಶೇಖು ಕೊಪ್ಪಳ, ಎ.ಜೆ. ಹರ್ಲಾಪುರ, ಬಸವಾರಜ ಗಾಮನಗಟ್ಟಿ, ಮಂಜು ಪಾಟೀಲ, ಮಾಣಿಕ ಲಕ್ಕುಂಡಿ, ಮಂಜು ಹರ್ಲಾಪುರ, ಬಿ.ವಿ. ಕವಲೂರ, ಮಲ್ಲಿಕಾರ್ಜುನ ಗುಜ್ಜಾಯಿ ಹಾಗೂ ಮಹಿಳಾ ಘಟಕದ ನಸೀಮಾ ಇರಾಣಿ, ರಾಧಾಬಾಯಿ ಲಕ್ಕುಂಡಿ, ಸುಮಂಗಲಾ ಹುಚ್ಚನಗೌಡ್ರ, ನಿರ್ಮಲಾ ರೆಡ್ಡಿ, ಪದ್ಮಾವತಿ ಬಳ್ಳಾರಿ, ಸೌಮ್ಯಾ ಜ್ಯೋಶ್ವಾ, ಸುಮಂಗಲಾ ಬಾಗೇವಾಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಉರಿ ಸೆಕ್ಟರ್ ನಲ್ಲಿ ಒಳನುಸುಳುವಿಕೆ ಯತ್ನ, ಪಾಕ್ ಉಗ್ರನ ಹತ್ಯೆ!

ಇರಾನ್ ವಾರ್ ಗೆ ಹೌತಿಗಳು ಸಜ್ಜು! ಮತ್ತೊಂದು ಜಲಸಂಧಿ ಬಂದ್? ಜಾಗತಿಕ ವ್ಯಾಪಾರಕ್ಕೆ ಮತ್ತಷ್ಟು ಹೊಡೆತ!

ಚಿತ್ರದುರ್ಗ: ಭೀಕರ ಅಪಘಾತದಲ್ಲಿ ಮೂವರು ಸಬ್ ಇನ್‌ಸ್ಪೆಕ್ಟರ್‌ ಸಾವು; ಇಬ್ಬರಿಗೆ ಗಂಭೀರ ಗಾಯ

ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಅನುದಾನ: ಅಭಿವೃದ್ಧಿಗೆ ಹಣವಿಲ್ಲವೆಂಬ BJP ಆರೋಪ ಸತ್ಯಕ್ಕೆ ದೂರ; ಸಿಎಂ ಸಿದ್ದರಾಮಯ್ಯ

ಚು. ಆಯೋಗದಿಂದ ಇಂದು ಸಂಜೆ ಮಹತ್ವದ ಸುದ್ದಿಗೋಷ್ಠಿ: 5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ ಸಾಧ್ಯತೆ

SCROLL FOR NEXT