ಗುಲ್ಬರ್ಗಾ

ಮಹಾನ್ ವ್ಯಕ್ತಿಗಳ ಜೀವನ ಎಲ್ಲರಿಗೂ ಸ್ಫೂರ್ತಿಯಾಗಲಿ...

ಯಾದಗಿರಿ: ದೇಶಕ್ಕಾಗಿ ಹೋರಾಟ ನಡೆಸಿ ತಮ್ಮ ಪ್ರಾಣತ್ಯಾಗ ಮಾಡಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದ  ಮಹಾನ್ ನಾಯಕರ ಜೀವನ ಇಂದಿನ ಯುವ ಜನತೆಗೆ ಅದರ್ಶವಾಗಬೇಕಾಗಿದೆ ಎಂದು ಆಲ್ ಇಂಡಿಯಾ ಯುಟಿಯುಸಿಯ ರಾಜ್ಯ ಉಪಾಧ್ಯಕ್ಷ ಕೆ.ಸೋಮಶೇಖರ್ ತಿಳಿಸಿದ್ದರು.
  ನಗರದ ಸರ್ಕಾರಿ ಪಪೂ ಕಾಲೇಜು ಆಟದ ಮೈದಾನದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್‌ರ ಜನ್ಮದಿನ ನಿಮಿತ್ತ ಎಐಡಿಎಸ್‌ಓ, ಎಐಡಿವೈಓ, ಎಐಎಂಎಸ್‌ಎಸ್ ಸಂಘಟನೆಗಳಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಗತ್ತಿನಲ್ಲಿ ಹುಟ್ಟು ಸಾವುಗಳು ಪ್ರತಿದಿನವೂ ಸಂಭವಿಸುತ್ತಿರುತ್ತವೆ. ಆದರೆ ಕೆಲವು ವ್ಯಕ್ತಿಗಳ ವ್ಯಕ್ತಿತ್ವ ಇಡೀ ಸಮಾಜದ ಮೇಲೆ ಗಾಢವಾದ ಪರಿಣಾಮವನ್ನು ಬೀರಿ ಜನರ ಜೀವನ ಶೈಲಿಯನ್ನೇ ಪರಿವರ್ತಿಸುತ್ತವೆ. ಅಂತಹವರು ತಮ್ಮ ಮೇರು ವ್ಯಕ್ತಿತ್ವದಿಂದ ನಮ್ಮ ನೆನಪಿನಾಳದಲ್ಲಿ ಉಳಿಯುತ್ತಾರೆ. ಮಾನವರ ಅಭಿವೃದ್ಧಿಗಾಗಿ ತಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಿಕೊಂಡ ಆ ಮಹಾನ್ ಚೇತನಗಳು ಶತಮಾನಗಳು ಉರುಳಿದರೂ ಸ್ಫೂರ್ತಿದಾಯಕವಾಗಿ ಉಳಿಯುತ್ತಾರೆ ಹಾಗೂ ಪ್ರಗತಿಶೀಲ ಹೋರಾಟಗಳಿಗೆ ಪ್ರೇರಣೆಯಾಗಿ ನಿಲ್ಲುತ್ತಾರೆ ಎಂದರು.
   ಸರ್ಕಾರಿ ಪಪೂ ಬಾಲಕರ ಕಾಲೇಜು ಪ್ರಾಂಶುಪಾಲರಾದ ಚಂದ್ರಕಾಂತ ಹಿಳ್ಳಿ, ಎಸ್.ಎಸ್. ಜುಗೇರಿ, ರಘುನಾಥ ರೆಡ್ಡಿ, ಶರಣಗೌಡ ಗೂಗಲ್, ವಿಜಯಕುಮಾರ್ ವೈ, ಮರಿಲಿಂಗಪ್ಪ, ಸಿದ್ದಲಿಂಗಮ್ಮ, ರಾಮು, ಸೈದಪ್ಪ, ಸಿದ್ದಮ್ಮ, ಶರಣಗೌಡ ಗೂಗಲ್, ಜಯಲಕ್ಷ್ಮಿ, ಶ್ವೇತಾ, ಬಸಮ್ಮ, ಗೌರಮ್ಮ ಸಿ.ಕೆ. ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 16 ಮಂದಿ ಸಾವು; ಸೇನೆ ನಿಯೋಜನೆ; Video!

ಅಕ್ರಮ ಬೆಟ್ಟಿಂಗ್ ಪ್ರಕರಣ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ 14 ದಿನ ನ್ಯಾಯಾಂಗ ಬಂಧನ

ಆಸ್ತಿಗಾಗಿ ತಂದೆಯ ಹತ್ಯೆ: ಮೃತದೇಹದ ಪಕ್ಕದಲ್ಲೇ ರಾತ್ರಿ ಕಳೆದ ಮಗ!

Couple Romance: ರೈಲಿನಲ್ಲಿ ಜನರ ಎದುರೆ ತಬ್ಬಿಕೊಂಡು ಚುಂಬಿಸಿ ಯುವ ಜೋಡಿ 'ರಾಸಲೀಲೆ'; ಮುಜುಗರಕ್ಕೀಡಾದ ಪ್ರಯಾಣಿಕರು, Video!

ಮತ್ತೆ ಅಬ್ಬರಿಸಲಿದ್ದಾನೆ ಮಳೆರಾಯ: 3 ದಿನ ರಾಜ್ಯಾದ್ಯಂತ ವರ್ಷಧಾರೆ, ಯೆಲ್ಲೋ ಅಲರ್ಟ್ ಘೋಷಣೆ

SCROLL FOR NEXT