ಹಾಸನ

ಸಕಲೇಶಪುರದಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತ

ಸಕಲೇಶಪುರ: ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಿಂದ ಸುರಿಯುತ್ತಿರುವ ಬಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
 ಮಂಗಳವಾರ ಮಧ್ಯಾಹ್ನದಿಂದ ಆರಂಭವಾದ ಧಾರಾಕಾರ ಮಳೆ ಬುಧವಾರ ಮಧ್ಯಾಹ್ನದವರಗೆ ಸುರಿದ ಪರಿಣಾಮ ಪಟ್ಟಣದ  ಬೀದಿಗಳಲ್ಲಿ ಜನಸಂಚಾರ ವಿರಳವಾಗಿದ್ದು ಜನರು ಮನೆಬಿಟ್ಟು ಹೊರಬರಲು ಚಿಂತಿಸುವಂತೆಮಾಡಿದ್ದರೆ, ಗ್ರಾಮೀಣ ಜನರು ಕೃಷಿ ಕೆಲಸಗಳಿಗೆ ಸಂಪೂರ್ಣ ವಿರಾಮ ನೀಡಿದ್ದಾರೆ.   24 ಗಂಟೆ ಅವಧಿಯಲ್ಲಿ ಮಾರನಹಳ್ಳಿ ಗ್ರಾಮದಲ್ಲಿ ದಾಖಲೆಯ 220 ಮೀ.ಮೀ ಮಳೆಯಾಗಿದ್ದರೆ ಪಟ್ಟಣದಲ್ಲಿ 200 ಮೀ.ಮೀ ಮಳೆಯಾಗಿದ್ದು, ತಾಲೂಕಿನ ಬಹುತೇಕ ಹಳ್ಳ ಹಾಗೂ ನದಿಗಳು ಊಕ್ಕಿಹರಿದ ಪರಿಣಾಮ ಬಹುತೇಕ ಬತ್ತದ ಗದ್ದೆನಾಟಿ ಮಾಡಿದ ಪ್ರದೇಶ ನೀರು ಅವರಿಸಿದ್ದರೆ ನಾಟಿ ಮಡಿಗಳು ನೀರಿನಲ್ಲಿ ಮುಳುಗಿವೆ.   ಹೇಮಾವತಿ ನದಿ ಇದೆ ಮೊದಲ ಬಾರಿಗೆ 10 ಅಡಿಯಷ್ಟು ನೀರು ಹರಿಯುತ್ತಿದ್ದು ಸಮೀಪದ ಭತ್ತದ ಗದ್ದೆಗಳಿಗೂ ನೀರು ವ್ಯಾಪಿಸಿದ್ದು ತಾಲೂಕಿನಲ್ಲಿ ಸರಾಸರಿಗಿಂತ 640 ಮೀ.ಮಿ ಅಧಿಕ ಮಳೆಯಾಗಿದ್ದು ಇದುವರಗೆ ತಾಲೂಕಿನಲ್ಲಿ 2910 ಮೀ.ಮೀನಷ್ಟು ಮಳೆಯಾಗಿದ್ದು ತಾಲೂಕಿನಲ್ಲಿ ಗುರುವಾರ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT