ಕೊಡಗು

ರಾಣಿಗೇಟ್ ಸಾಕಾನೆ ಶಿಬಿರದಿಂದ ಕೆಂಚಮ್ಮ ಬಿಡುಗಡೆ

ಕುಶಾಲನಗರ: ಕುಶಾಲನಗರ ಸಮೀಪ ದೊಡ್ಡ ಹರವೆ ರಾಣಿಗೇಟ್ ಕಾವೇರಿ ಸಾಕಾನೆ ಶಿಬಿರದಲ್ಲಿ ಪಳಗಿಸಲಾಗುತ್ತಿದ್ದ ಕೆಂಚಮ್ಮ ಹೆಣ್ಣಾನೆಯನ್ನು ದೊಡ್ಡಿಯಿಂದ ಮುಕ್ತಗೊಳಿಸುವ ಕಾರ್ಯ ಸೋಮವಾರ ನಡೆಯಿತು.
ಸಾಕಾನೆ ಶಿಬಿರದಲ್ಲಿ ಹಾಸನ-ಸಕಲೇಶಪುರ ಭಾಗಗಳಲ್ಲಿ ಸೆರೆ ಹಿಡಿದ 4 ಕಾಡಾನೆಗಳನ್ನು ಪಳಗಿಸುವ ಕಾರ್ಯ ಕಾವೇರಿ ಸಾಕಾನೆ ಶಿಬಿರದಲ್ಲಿ ಕಳೆದ 2 ತಿಂಗಳಿನಿಂದ ನಡೆದಿತ್ತು. ಇತ್ತೀಚೆಗಷ್ಟೇ ಮೂರು ಪಳಗಿದ ಆನೆಗಳು ದೊಡ್ಡಿಯಿಂದ ಮುಕ್ತಗೊಂಡಿದ್ದವು. ಇದೀಗ ನಾಲ್ಕನೇ ಆನೆಯೂ ಮಾವುತ, ಕಾವಾಡಿಗರ ನಿರ್ದೇಶನ ಪಾಲಿಸುವುದರೊಂದಿಗೆ ಸಂಪೂರ್ಣ ಪಳಗಿದ ಹಿನ್ನೆಲೆಯಲ್ಲಿ ಕೆಂಚಮ್ಮ ಎಂದು ನಾಮಕರಣ ಮಾಡಿ ದೊಡ್ಡಿಯಿಂದ ಹೊರಬಿಡಲಾಯಿತು ಎಂದು ಪಿರಿಯಾಪಟ್ಟಣ ಅರಣ್ಯವಲಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮಾಹಿತಿ ಒದಗಿಸಿದ್ದಾರೆ.
ಈ ಕಾರ್ಯಾಚರಣೆ ಸಂದರ್ಭ ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಮಯೂರ, ಚಂದ್ರ ಆನೆಗಳ ಸಹಕಾರ ಪಡೆಯಲಾಯಿತು.  
ಹುಣಸೂರು ಡಿ.ಎಫ್.ಒ ಬಾಲಚಂದ್ರ, ವನ್ಯಜೀವಿ ವಿಭಾಗದ ವೈದ್ಯರಾದ ಡಾ. ಉಮಾಶಂಕರ್, ಎ.ಸಿ.ಎಫ್. ವಿನಯಕುಮಾರ್, ವನಪಾಲಕರಾದ ಗಣೇಶ್, ರಾಮು, ಮುತ್ತಪ್ಪ, ಅರಣ್ಯ ಸಿಬ್ಬಂದಿ  ರಾಮು, ಗಣೇಶ್, ಮುತ್ತಪ್ಪ, ಆನೆ ಮಾವುತರು, ಕಾವಾಡಿಗರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT