ಶಿವಮೊಗ್ಗ

ಸೇತುವೆ ಮೇಲೆ ಹರಿದ ಭದ್ರೆ

ಭದ್ರಾವತಿ: ಭದ್ರಾ ಜಲಾಶಯದಲ್ಲಿ ಮಂಗಳವಾರ ಬೆಳಗಿನಿಂದ ಮಧ್ಯಾಹ್ನದ ವರೆಗೆ ಒಳಹರಿವು 48000 ಕ್ಯುಸೆಕ್‌ವರೆಗೆ ಹೆಚ್ಚಾದ ಕಾರಣ ಜಲಾಶಯದಿಂದ ಭದ್ರಾ ನದಿಗೆ ಹೆಚ್ಚಿನ ನೀರನ್ನು ಬಿಟ್ಟ ಕಾರಣ ಪಟ್ಟಣದ  ಸಾರಿಗೆ ಬಸ್ ನಿಲ್ದಾಣ ಬಳಿ ಇರುವ ಸೇತುವೆ ಮೇಲೆ ನೀರು ಹರಿಯಲಾರಂಭಿಸಿತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಂಗಳವಾರ ಬೆಳಗಿನಿಂದಲೇ ಸೇತುವೆ ಮೇಲೆ ವಾಹನ ಸಂಚಾರ ಹಾಗೂ ಜನಸಂಚಾರ ನಿರ್ಬಂಧಿಸಿದ್ದರು.
ಸೇತುವೆ ಮೇಲೆ ನದಿ ನೀರು ಹರಿಯುವುದನ್ನು ನೋಡಲು ಜನಸಾಗರ ಹರಿದುಬಂದ ಕಾರಣ ನಿಯಂತ್ರಿಸಲು ಪೊಲೀಸರು ಇಡೀ ದಿನ ಹರಸಾಹಸ ಪಡಬೇಕಾಯಿತು. ಸಂಜೆ ವೇಳೆಗೆ ಭದ್ರಾ ಜಲಾಶಯದ ಒಳಹರಿವು 38 ಸಾವಿರ ಕ್ಯುಸೆಕ್‌ಗೆ ಇಳಿಮುಖವಾದರೂ ಜಲಾಶಯದಲ್ಲಿ ನೀರಿನ ಮಟ್ಟವನ್ನು 184 ಅಡಿಗೆ ಕಾದಿರಿಸಿಕೊಳ್ಳಲು ಸಂಜೆಯೂ 46500 ಕ್ಯುಸೆಕ್ ನೀರನ್ನು ಭದ್ರಾ ನದಿಗೆ ಜಲಾಶಯದಿಂದ ಹರಿದು ಬಿಡಲಾಯಿತು. ರಾತ್ರಿ 7 ಗಂಟೆಯ ವೇಳೆಗೆ ಜಲಾಶಯದ ಮಟ್ಟ 184 ಅಡಿ 6 ಇಂಚು ಇದ್ದಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT