ತುಮಕೂರು

ವಿನಾಯಕ ನಗರದಲ್ಲಿ ರಸ್ತೆ ಒತ್ತುವರಿ ತೆರವು

ಪಾವಗಡ:  ಮೂರು ಭಾರಿ ನೋಟಿಸ್ ಜಾರಿ ಮಾಡಿದರೂ ರಸ್ತೆ ಒತ್ತುವರಿ ತೆರವುಗೊಳಿಸದ ಕಾರಣ ಜೆಸಿಬಿಯಿಂದ ಮನೆಗಳನ್ನು ಒಡೆದ ಪ್ರಸಂಗ ಬುಧವಾರ ಪಟ್ಟಣದ ವಿನಾಯಕ ನಗರದಲ್ಲಿ ನಡೆದಿದೆ.
ಪಟ್ಟಣದ ಪ್ರತಿಷ್ಠಿತ ಬಡಾವಣೆ ವಿನಾಯಕ ನಗರದಲ್ಲಿ ಪುರಸಭೆ ವ್ಯಾಪ್ತಿಗೆ ಒಳಪಟ್ಟ 6 ಅಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿತ್ತು. ಮತ್ತೆಕೆಲವರು ಅದೇ ರಸ್ತೆಗೆ ಅಡ್ಡಲಾಗಿ ಮನೆಗಳ ಮುಂದೆ ಕಾಂಪೌಂಡ್ ನಿರ್ಮಿಸಿಕೊಂಡು ಸಾರ್ವಜನಿಕರ ಒಡಾಟಕ್ಕೆ ತೊಂದರೆ ಪಡಿಸುತ್ತಿದ್ದರು. ಬಡವಾಣೆಯ ವ್ಯಕ್ತಿಯೊಬ್ಬರು ತೆರವಿಗೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತರು ಆದೇಶದ ಮೇರೆಗೆ ಕ್ರಮ ಜರಿಗಿಸಿದ ಪುರಸಭೆ ಮುಖ್ಯಾಧಿಕಾರಿ ರಂಗಸಾಮಯ್ಯ ಕೆಎಸ್ಆರ್ಪಿ ತುಕಡಿ ಸೇರಿದಂತೆ ಸುಮಾರು 50 ಪೊಲೀಸರ ಬಂದೋಬಸ್ತಿನಲ್ಲಿ ವಾರ್ಡಿಗೆ ತೆರಳಿ ಪುರಸಭೆಯ ರಸ್ತೆ ಒತ್ತುವರಿ ಮಾಡಿಕೊಂಡ ಸುಮಾರು 6 ಮನೆಗಳನ್ನು ಜೆಸಿಬಿಯಿಂದ ತೆರವುಗೊಳಿಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮುಖ್ಯಾಧಿಕಾರಿ ರಂಗಸಾಮಯ್ಯ, ಮಾತನಾಡಿ ಸಾರ್ವಜನಿಕ ಒಡಾಟಕ್ಕೆ ಪುರಸಭೆ ವತಿಯಿಂದ ಪಟ್ಟಣದ ವಿನಾಯಕ ನಗರದಲ್ಲಿ 20ಅಡಿ ರಸ್ತೆ ಬಿಡಲಾಗಿದ್ದು ಇದರಲ್ಲಿ 6ಅಡಿ ರಸ್ತೆ ಒತ್ತುವರಿ ಮಾಡಿಕೊಂಡು ಮನೆಗಳ ಮುಂದೆ ಮೆಟ್ಟಲು ಮತ್ತು ಕಾಂಪೌಂಡ್ ನಿರ್ಮಾಣ ಮಾಡಿಕೊಂಡ ಕಾರಣ ಸಾರ್ವಜನಿಕ ಓಡಾಟಕ್ಕೆ ತೀವ್ರ ತೊಂದರೆ ಆಗಿತ್ತು. ತೆರವುಗೊಳಿಸಲು ಆಕ್ರಮ ಒತ್ತುವರಿ ಮಾಡಿಕೊಂಡ ವಾರ್ಡಿನ ನರಸಿಂಹಪ್ಪ, ಲಕ್ಷ್ಮೀಕಾಂತಮ್ಮ,ನರಸಿಂಹಪ್ಪ,ಶ್ರೀರಾಮಪ್ಪ,ಸುಬ್ಬರಾಯಪ್ಪ ಗಂಗಲಕ್ಷ್ಮಮ್ಮ ಹಾಗೂ ನಾಗಭೂಷಣ ಎಂಬುವರಿಗೆ ಇಲಾಖೆಯಿಂದ ಮೂರು ಬಾರಿ ನೋಟಿಸ್ ಜಾರಿ ಮಾಡಿದರೂ ತೆರವು ಗೊಳಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಂಡು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT