ಉತ್ತರ ಕನ್ನಡ

ಹಾಡಹಗಲೇ ಮನೆ ಕಳವು: ಒಬ್ಬನನ್ನು ಹಿಡಿದ ಮನೆ ಮಾಲೀಕ

ಹೊನ್ನಾವರ: ಮೂವರು ಹಾಡು ಹಗಲೇ ಮನೆಯ ಬಾಗಿಲ ಬೀಗ ಮುರಿದು ಹಣ ಮತ್ತು ಆಭರಣ ಕದ್ದು ಪರಾರಿಯಾಗುತ್ತಿರುವಾಗ ಮನೆ ಮಾಲೀಕ ಬೆನ್ನಟ್ಟಿದ ಪರಿಣಾಮ ಒಬ್ಬ ಸಿಕ್ಕಿಬಿದ್ದ ಘಟನೆ ಹೊನ್ನಾವರ ಪಟ್ಟಣದ ಶಾಂತಿನಗರದ ಬಾಂದೇಹಳ್ಳ ಬಳಿ ಸಂಭವಿಸಿದೆ.
ಕಳ್ಳನನ್ನು ಬೆನ್ನಟ್ಟಿ ಹಿಡಿಯುವ ಭರದಲ್ಲಿ ಮನೆ ಮಾಲೀಕ ಪ್ರಕಾಶ ಡಿಸೋಜಾ ಕಳ್ಳನಿಂದ ಹಲ್ಲೆಗೊಳಗಾಗಿದ್ದಾರೆ. ಇಲ್ಲಿನ ಶಾಂತಿನಗರದಲ್ಲಿ ವಾಸವಾಗಿದ್ದು, ದಂಪತಿ ಕೆಲಸದ ನಿಮಿತ್ತ ಹೊರ ಹೋಗಿದ್ದೆವು. ಎಂದಿನಂತೆ ಮನೆಗೆ ಬೀಗ ಹಾಕಿ ತೆರಳಿದ್ದೆವು. ಮಧ್ಯಾಹ್ನ 1.30ರ ವೇಳೆ ನಾನು ಊಟಕ್ಕಾಗಿ ಮನೆಗೆ ಬಂದು ನೋಡಿದಾಗ ಮನೆ ಮುಂಬಾಗಿಲ ಚಿಲಕ ಮುರಿದಿತ್ತು. ಅನುಮಾನಗೊಂಡು ವಾಹನ ನಿಲ್ಲಿಸಿ ಒಳಹೋಗುತ್ತಿದ್ದಂತೆ ಮನೆಯೊಳಗಿದ್ದ ಮೂವರು ಹಿಂಬಾಗಿಲು ತೆರೆದು ಮನೆಯ ಹಿಂಬದಿಯ ಹೊಳೆಗೆ ಧುಮುಕಿದರು.
ಅವರನ್ನು ಹಿಡಿಯಲು ಹಿಂದೆ ಮುಂದೆ ನೋಡದೇ ನಾನೂ ಅವರೊಂದಿಗೇ ಹಳ್ಳಕ್ಕೆ ಧುಮುಕಿದೆ. ಒಬ್ಬ ತನ್ನ ಕೈಲಿದ್ದ ರಾಡ್ನಿಂದ ನನ್ನ ಕಾಲಿಗೆ ಬಲವಾಗಿ ಹೊಡೆದ. ನೋವಿನಲ್ಲೂ ಆತನನ್ನು ಬಿಡಲಿಲ್ಲ. ನನ್ನ ಕೂಗಿಗೆ ಸುತ್ತಮುತ್ತಲಿನ ಜನ ಸೇರಿ ಒಬ್ಬನ್ನು ಹಿಡಿಯಲು ನೆರವಾದರು. ಇನ್ನಿಬ್ಬರು ಹೊಳೆಯಲ್ಲಿ ತಪ್ಪಿಸಿಕೊಂಡು ಪರಾರಿಯಾದರು. ಮನೆಯೊಳಗಿದ್ದ ರು. 35 ಸಾವಿರ ನಗದು ಮತ್ತು 5 ತೊಲೆ ಬಂಗಾರದ ಮಾಂಗಲ್ಯ ಸರ ಆರೋಪಿತರ ಪಾಲಾಗಿದೆ ಎಂದು ಪ್ರಕಾಶ ಡಿಸೋಜಾ ವಿವರಿಸಿದರು. ಪ್ರಕಾಶ್ ಡಿಸೋಜಾ ಚಿಕಿತ್ಸೆ ಪಡೆಯುತ್ತಿದ್ದು, ಸೆರೆಸಿಕ್ಕ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಸುಮಾರು 26ರ ಪ್ರಾಯದ ಸೆರೆಸಿಕ್ಕ ಆರೋಪಿಯ ಕೈ ಮೇಲಿದ್ದ ಹಚ್ಚೆಯ ಮೇಲೆ ಸಂಜು ಎಂದು ತಿಳಿದುಬಂದಿದ್ದು, ಇವರು ಹುಬ್ಬಳ್ಳಿ ಕಡೆಯವರೆಂದು ಶಂಕಿಸಲಾಗಿದೆ. ಪೊಲೀಸರು ಇನ್ನಿಬ್ಬರಿಗಾಗಿ ತನಿಖೆ ನಡೆಸಿದ್ದಾರೆ.

ಲೋಕಾ ಬಲೆಗೆ ಇಡಗುಂದಿ ಗ್ರಾಪಂ ಕಾರ್ಯದರ್ಶಿ

ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಆಗೇರ ಸೋಮವಾರ ಸಂಜೆ ಪಪಂ ಕಾರ್ಯಾಲಯದಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕೊಡ್ಲಗದ್ದೆಯ ಮಂಜುನಾಥ ಭಟ್ಟ ಎಂಬ ವ್ಯಕ್ತಿ ಗ್ರಾಪಂ ವ್ಯಾಪ್ತಿಯ ಕೆಲ ಕಾಮಗಾರಿಗಳನ್ನು ಮಾಡಲಾಗುತ್ತಿದ್ದರೆನ್ನಲಾಗಿದ್ದು, ಅವರಿಂದ ಪರ್ಸಂಟೇಜ್ ಪಡೆಯುತ್ತಿದ್ದಾಗ ಕಾರವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಡಿ. ಸಿದ್ದೇಶ್ವರ, ಡಿವೈಎಸ್ಪಿ ನಾಗೇಶ ಶೆಟ್ಟಿ, ಇನ್ಸಪೆಕ್ಟರ್ ಕಿರಣಕುಮಾರ ಹಾಗೂ ಸಿಬ್ಬಂದಿ ಈ ದಾಳಿಯ ನೇತೃತ್ವ ವಹಿಸಿದ್ದರು. ಕೊಡ್ಲಗದ್ದೆಯ ಮಂಜುನಾಥ ನಾರಾಯಣ ಭಟ್ಟ ಲೋಕಾಯುಕ್ತರಿಗೆ ದೂರು ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ: RSS ಕಾರ್ಯಕ್ರಮಕ್ಕೆ ಹೋಗಲ್ಲ- CJI ಗವಾಯಿ ತಾಯಿ

Asia Cup 2025: 'ಪಾಕಿಗಳ ನೋಡಿದ್ರೆ ಅವನ ರಕ್ತ ಕುದಿಯುತ್ತಿತ್ತು'; ಟೀಂ ಇಂಡಿಯಾ 'Hero' ಕೋಚ್ Kapil Dev Pandey ಮಾತು!

1st Test: ಮೊದಲ ದಿನದಾಟ ಅಂತ್ಯ, ವಿಂಡೀಸ್ ವಿರುದ್ಧ ಭಾರತ ಮೇಲುಗೈ, 41 ರನ್ ಹಿನ್ನಡೆ!

'RSS-BJP' ಸೈದ್ಧಾಂತಿಕತೆಯ ಹೃದಯದಲ್ಲಿ ಹೇಡಿತನವಿದೆ: ಕೊಲಂಬಿಯಾದಲ್ಲಿ ಗುಡುಗಿದ ರಾಹುಲ್ ಗಾಂಧಿ!

SCROLL FOR NEXT