ಗ್ರಾಮೀಣ ಉತ್ತರ ಪ್ರದೇಶದಲ್ಲಿ ಮೋದಿ ಮೇನಿಯಾ: ಮೇ ಭೀ ಚೌಕೀದಾರ್ ಸಿನಿಮಾ/ಸಾಕ್ಷ್ಯಚಿತ್ರಕ್ಕೆ ಮುಗಿಬಿದ್ದ ಜನತೆ! 
ದೇಶ

ಗ್ರಾಮೀಣ ಉತ್ತರ ಪ್ರದೇಶದಲ್ಲಿ ಮೋದಿ ಮೇನಿಯಾ: ಮೇ ಭೀ ಚೌಕೀದಾರ್ ಸಿನಿಮಾ/ಸಾಕ್ಷ್ಯಚಿತ್ರಕ್ಕೆ ಮುಗಿಬಿದ್ದ ಜನತೆ!

ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದ ಮೇ ಭೀ ಚೌಕೀದಾರ್ ಹ್ಹೂ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರೆತಿತ್ತು. ಈಗ ಮೇ ಭೀ ಚೌಕೀದಾರ್ ಸಾಕ್ಷ್ಯಚಿತ್ರ/ ಸಿನಿಮಾ....

ಲಖನೌ: ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದ ಮೇ ಭೀ ಚೌಕೀದಾರ್ ಹ್ಹೂ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರೆತಿತ್ತು. ಈಗ ಮೇ ಭೀ ಚೌಕೀದಾರ್ ಸಾಕ್ಷ್ಯಚಿತ್ರ/ ಸಿನಿಮಾ ವಾಟ್ಸ್ ಆಪ್ ಗಳಲ್ಲಿ ವೈರಲ್ ಆಗತೊಡಗಿದೆ. 
ಉತ್ತರ ಪ್ರದೇಶದ  ಗ್ರಾಮೀಣ ಭಾಗಗಳಲ್ಲಿ ಮೋದಿ ಮೇನಿಯಾ ಜೋರಾಗಿಯೇ ಇದ್ದು, ವಾಟ್ಸ್ ಆಪ್ ಗಳಲ್ಲಿ ಮೋದಿ ಕುರಿತಾದ ಮೇ ಭೀ ಚೌಕೀದಾರ್ ಚುಟುಕು ಸಿನಿಮಾಗಳು/ ಸಾಕ್ಷ್ಯಚಿತ್ರಗಳು ವೈರಲ್ ಆಗತೊಡಗಿವೆ. 
ಮೋದಿ ಸರ್ಕಾರ ಜಾರಿಗೆ ತಂದಿದ್ದ ಉಜ್ವಲಾದಂತಹ ಜನಪ್ರಿಯ ಯೋಜನೆಗಳು, ದೇಶದ ಭದ್ರತೆ ಬಗ್ಗೆ ಮಾಹಿತಿ ನೀಡುವ 5 ನಿಮಿಷಗಳ ಅನೇಕ ಸಾಕ್ಷ್ಯಚಿತ್ರಗಳನ್ನು ತಯಾರಿಸಲಾಗಿದೆ.  ಸಾಕ್ಷ್ಯಚಿತ್ರಗಳನ್ನು ಬಿಜೆಪಿಗೆ ಸಂಬಂಧಪಟ್ಟವರಷ್ಟೇ ಅಲ್ಲದೇ ಖಾಸಗಿಯಾಗಿಯೂ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದಾರೆ. 
ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಭೋಜ್ಪುರಿ ಭಾಷೆಯಲ್ಲಿ ಚಿತ್ರವನ್ನು ತಯಾರಿಸಿದ್ದಾರೆ. "ತಂತ್ರಜ್ಞಾನ ಆಧುನಿಕವಾಗಿದೆ. ಎಲ್ ಇಡಿ ಪರದೆಗಳಲ್ಲಿ ಸಾಕ್ಷ್ಯಚಿತ್ರಗಳನ್ನು, ವಿಡಿಯೋಗಳನ್ನು ಪ್ರದರ್ಶಿಸುವ ಬದಲು ಈಗ ಮೊಬೈಲ್ ಮೂಲಕವೇ ಅದನ್ನು ಪ್ರಚಾರ ಮಾಡಬಹುದಾಗಿದೆ ಎನ್ನುತ್ತಾರೆ ಚಿತ್ರ ತಯಾರಕರಲ್ಲಿ ಒಬ್ಬರಾದ ಆರ್ ಕೆ ಅಗರ್ವಾಲ್. 
ಗುಣಮಟ್ಟ, ಪ್ರೊಡಕ್ಷನ್ ಆಧಾರದಲ್ಲಿ 3 ಲಕ್ಷದಿಂದ 15 ಲಕ್ಷದ ವರೆಗೂ ಸಾಕ್ಷ್ಯಚಿತ್ರಗಳ ತಯಾರಿಕೆಗೆ ಖರ್ಚಾಗಿದೆ ಎಂದು ಅರ್ಗರ್ವಾಲ್ ಮಾಹಿತಿ ನೀಡಿದ್ದಾರೆ. 
ಜೌನ್ ಪುರದ ಬಿಜೆಪಿ ಹಾಲಿ ಸಂಸದಸ್ ಕೆಪಿ ಸಿಂಗ್ ಅವರಿಗೆ ಈ ಬಾರಿ ಇನ್ನಷ್ಟೇ ಟಿಕೆಟ್ ಖಾತ್ರಿಯಾಗಬೇಕಿದೆ. ಆದರೆ ಈಗಾಗಲೇ ಭೋಜ್ಪುರಿ ಸಿನಿಮಾಗಳನ್ನು ಬಳಸಿ ಪ್ರಚಾರದಲ್ಲಿ ತೊಡಗಿದ್ದಾರೆ.  ಮೇ ಭೀ ಚೌಕೀದಾರ್ ಘೋಷ ವಾಕ್ಯ ಉತ್ತರ ಪ್ರದೇಶದ ಗ್ರಾಮ ಗ್ರಾಮಗಳಲ್ಲಿ, ಸ್ಥಳೀಯ ಸಾರಿಗೆಗಳಲ್ಲಿ ಮೊಳಗುತ್ತಿದ್ದು, ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಧರ್ಮಸ್ಥಳ ಪ್ರಕರಣ: ಹೊಸ ದೂರು ದಾಖಲು, ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ!

ಮಂಗಳೂರು: KSRTC ಬಸ್ ಬ್ರೇಕ್ ಫೇಲ್; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು; Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

SCROLL FOR NEXT