ದೇಶ

ಅವಹೇಳನಕಾರಿ ಹೇಳಿಕೆ: ಎಸ್ ಪಿ ಮುಖಂಡ ಅಜಂಖಾನ್ ಶೋಕಾಸ್ ನೊಟೀಸ್

Shilpa D
ಲಕ್ನೋ: ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ಗೆ ಚುನಾವಣಾ ಆಯೋಗದಿಂದ ಹೊಸ ಶೋಕಾಸ್‌ ನೊಟೀಸ್‌ ಜಾರಿಯಾಗಿದೆ. ಇದಕ್ಕೆ ಅವರು 24 ತಾಸುಗಳ ಒಳಗೆ ಉತ್ತರಿಸಬೇಕೆಂದು ಸೂಚಿಸಲಾಗಿದೆ.
ಉತ್ತರ ಪ್ರದೇಶದ ವಿವಿಧೆಡೆಗಳಲ್ಲಿ ಕಳೆದ ಕೆಲ ದಿನಗಳಲ್ಲಿ ಆಜಂ ಖಾನ್‌ ಅವರು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಾಡಿದ ಭಾಷಣದಲ್ಲಿ ಅತ್ಯಂತ ಅವಹೇಳನಕಾರಿ ಮತ್ತು ಉದ್ರೇಕಕಾರಿ ಭಾಷಣ ಮಾಡಿರುವುದೇ ಈ ಹೊಸ ಶೋಕಾಸ್‌ ನೊಟೀಸ್‌ ಗೆ ಕಾರಣವಾಗಿದೆ.
ಉತ್ತರ ಪ್ರದೇಶದ ರಾಮಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಸಿನಿಮಾ ನಟಿ, ಜಯಪ್ರದಾ ಎದುರು ಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಆಜಂ ಖಾನ್‌ ಅವರು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ.
SCROLL FOR NEXT